Advertisement

14 ನೌಕರರಿಗೆ ಡೀಸಿ ನೋಟಿಸ್‌ ಜಾರಿ

10:47 AM May 03, 2020 | Suhan S |

ಚಾಮರಾಜನಗರ: ಕೇಂದ್ರ ಸ್ಥಾನದಲ್ಲಿ ವಾಸ್ತವ್ಯ ಹೂಡದೇ ತಾಲೂಕಿನ ಬಾಣ ಹಳ್ಳಿ ಚೆಕ್‌ ಪೋಸ್ಟ್‌ ಮೂಲಕ ಪ್ರತಿದಿನ ಮೈಸೂರಿಗೆ ಸಂಚರಿಸುತ್ತಿರುವ 14 ನೌಕ ರರಿಗೆ ಜಿಲ್ಲಾಧಿಕಾರಿ ಡಾ. ಎಂ.ಆರ್‌. ರವಿ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿದ್ದಾರೆ.

Advertisement

ನಗರದ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ ಪ್ರಾಂಶುಪಾಲೆ ಭಾರತಿ, ಯಳಂದೂರು ತಾಲೂಕಿನ ಶಿಶು ಅಭಿವೃದ್ಧಿ ಅಧಿಕಾರಿ ಸೋಮಶೇಖರ್‌, ಪ್ರಥಮ ದರ್ಜೆ ಸಹಾಯಕ ರವೀಂದ್ರ, ನಗರದ ಪಂಚಾ ಯತ್‌ ರಾಜ್‌ಎಂಜಿನಿಯರಿಂಗ್‌ ವಿಭಾಗದ ಸಹಾಯಕ ಎಂಜಿನಿಯರ್‌ ಚಿದಾ ನಂದ್‌, ಗುಂಡ್ಲುಪೇಟೆ ತಾಲೂಕಿನ ಖಜಾನೆಯ ಸಹಾಯಕ ನಿರ್ದೇಶಕಿ ನಾಗರತ್ನ, ನಗರದ ಜಿಲ್ಲಾ ಶಿಕ್ಷಣ ತರಬೇತಿ ಕೆಂದ್ರದ ಸಹಾಯಕ ಸಾಂಖೀಕ ಅಧಿಕಾರಿ ವೆಂಕಟ ರಾವ್‌, ಕೆಆರ್‌ಐಡಿಎಲ್‌ ಸಹಾ ಯಕ ಕಾರ್ಯಪಾಲಕ ಎಂಜಿನಿಯರ್‌ ಮಹ ದೇವಸ್ವಾಮಿ, ನಗರದ ತೋಟ ಗಾರಿಕೆ ಇಲಾಖೆ ಹಿರಿಯ ಸಹಾ ಯಕ ತೋಟಗಾರಿಕೆ ನಿರ್ದೇಶಕ ಎನ್‌.ಎಸ್‌. ಫ‌ಣೀಂದ್ರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾ ಖೆ ವಸತಿ ನಿಲಯ ಮೇಲ್ವಿಚಾರಕ ಅಶ್ವತ್ಥ ನಾರಾ ಯಣ್‌, ಎಸ್‌ಬಿಐ

ಗುಮಾಸ್ತ ರಾಜಣ್ಣ, ಸಹಾಯಕ ಶ್ರೀನಿ ವಾಸ್‌, ಪಿಕಾರ್ಡ್‌ ಬ್ಯಾಂಕ್‌ ಗುಮಾಸ್ತ ಶಶಿ, ಕುದೇರು ಎಸ್‌ಬಿಐ ಶಾಖೆ ಸಹಾಯಕ ಮಂಜುನಾಥ್‌ರಿಗೆ ನೋಟಿಸ್‌ ಜಾರಿ ಮಾಡಲಾಗಿದೆ. ಅಲ್ಲದೆ, ಚಾಮರಾಜನಗರ ಉಪ ನೋಂದಣಾಧಿಕಾರಿ ರಾಧಾ, ಕೊಳ್ಳೇಗಾಲ ಉಪನೋಂದಣಾಧಿಕಾರಿ ರೇಖಾ, ಹನೂರು ಉಪ ನೋಂದಣಾಧಿಕಾರಿ ನಂದೀಶ್‌, ಕೊಳ್ಳೇಗಾಲ ಉಪ ನೋಂದಣಾಧಿಕಾರಿ ಕಚೇರಿಯ ದ್ವಿತೀಯ ದರ್ಜೆ ಸಹಾಯಕಿ ಗೀತಾ ಪ್ರತಿ ದಿನ ಕೇಂದ್ರಸ್ಥಾನದಲ್ಲಿ ವಾಸ್ತವ್ಯ ಹೂಡದೇ ಸ್ವಂತ ಊರಿಗೆ ಪ್ರತಿದಿನ ತೆರಳಲು ಅನುಮತಿ ನೀಡಿರುವ ಜಿಲ್ಲಾ ನೊಂದಣಾಧಿಕಾರಿ ಹಂಸವೇಣಿ ಅವರಿಗೂ ಜಿಲ್ಲಾಧಿಕಾರಿ ನೋಟಿಸ್‌ ಜಾರಿ ಮಾಡಿದ್ದಾರೆ. ನೋಟಿಸ್‌ ಜಾರಿಗೊಳಿಸಿದ 24 ಗಂಟೆಯೊಳಗೆ ಅಧಿಕಾರಿಗಳು ವಿವರಣೆ ನೀಡದಿದ್ದರೆ ಶಿಸ್ತು ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next