Advertisement

Koppala; ಹುಲಿಗೆಮ್ಮ ಜಾತ್ರೆಯ ವೇಳೆ ಪ್ರಾಣಿ ಬಲಿ ತಡೆಯಬೇಕು: ದಯಾನಂದ ಸ್ವಾಮೀಜಿ ಆಗ್ರಹ

11:49 AM May 29, 2024 | Team Udayavani |

ಕೊಪ್ಪಳ: ಕೊಪ್ಪಳ ತಾಲೂಕಿನಲ್ಲಿ ಮೇ.30 ರಿಂದ ಮುಜರಾಯಿ ಇಲಾಖೆಯ ವ್ಯಾಪ್ತಿಯ ಹುಲಿಗೆಮ್ಮ ದೇವಿಯ ಜಾತ್ರೆಯು ನಡೆಯಲಿದೆ. ಈ ದೇಗುಲದಲ್ಲಿಯೂ ಪ್ರಾಣಿ ಬಲಿ ನಡೆಯುತ್ತಿವೆ. ಈ‌ ಮೊದಲು ದೇಗುಲದ ಮುಂದೆ, ಹಿಂಭಾಗದಲ್ಲಿ ಪ್ರಾಣಿ ಬಲಿ ನಡೆಯುತ್ತಿದ್ದವು. ಇತ್ತೀಚೆಗೆ ಅಲ್ಲಿ ಪ್ರಾಣಿ ಬಲಿ ಕಡಿಮೆಯಾಗಿದೆ. ಆದರೂ ಕೆಲವು ಭಾಗದಲ್ಲಿ ಕದ್ದು ಮುಚ್ಚಿ ಪ್ರಾಣಿಬಲಿ ನಡೆಯುತ್ತಿವೆ. ಜಿಲ್ಲೆಯಾದ್ಯಂತ ಪ್ರಾಣಿ ಬಲಿ ತಡೆಯಬೇಕು ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಹೇಳಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಪ್ರಾಣಿ ಪ್ರತಿಬಂಧಕ ಕಾಯ್ದೆ ಜಾರಿಯಿದೆ. ಹೈಕೋರ್ಟ್ ಆದೇಶದಂತೆ ಪ್ರಾಣಿ ಬಲಿ ‌ಮಾಡುವಂತಿಲ್ಲ. ದೇವರ ಹೆಸರಿನಲ್ಲಿ ಪ್ರಾಣಿ ಬಲಿ ಮಾಡುವಂತಿಲ್ಲ. ಕಾಯ್ದೆ ಕಾನೂನು ಕೋರ್ಟ್ ತೀರ್ಪು ಇದ್ದರೂ ಈಗ ಪ್ರಾಣಿ ಬಲಿ ನಡೆದಿವೆ. ನಾವು ಹೈಕೋರ್ಟ್ ಮೆಟ್ಟಿಲು ಹತ್ತಿ ಪ್ರಾಣಿ ಬಲಿ ತಡೆಯುವ ಪ್ರಯತ್ನ ಮಾಡಿದ್ದೇವೆ. ಜಾತ್ರಾ ಪರಿಸರ ಸೇರಿ ಇತರೆ ಭಾಗದಲ್ಲಿಯೂ ಪ್ರಾಣಿ ಬಲಿ ಮಾಡಬಾರದು ಎಂದರು.

ಜಿಲ್ಲಾಡಳಿತ, ಪೊಲೀಸ್ ಇಲಾಖೆ ಜಾಗೃತಿ ವಹಿಸಲಿ. ಹುಲಿಗೆಮ್ಮ ದೇವಸ್ಥಾನ ಸೇರಿ ಸುತ್ತಲಿನ ಹಳ್ಳಿಗಳಲ್ಲಿ ಜಾಗೃತಿ ನಡೆಸಲಿದ್ದೇವೆ. ಜಾತ್ರೆಗೆ ರಾಜ್ಯ ಸೇರಿದಂತೆ ಅನ್ಯ ರಾಜ್ಯಗಳ ಜನರು ಜಾತ್ರೆಗೆ ಜನರು ಆಗಮಿಸುತ್ತಾರೆ. ದೊಡ್ಡ ದೊಡ್ಡ ಮಠಗಳು ಸ್ವಾಮೀಜಿಗಳು, ಹಿಂದೂ ಸಂಘಟನೆಗಳು ಪ್ರಾಣಿಬಲಿ ತಡೆಯುವ ಪ್ರಯತ್ನ ಮಾಡಲಿ. ಧರ್ಮದ ಹೆಸರಿನಲ್ಲಿ ಪ್ರಾಣಿ ಬಲಿ ಬೇಡ ಎಂದು ಆಗ್ರಹಿಸಿದರು.

ಮೋದಿ ಸರ್ಕಾರದಲ್ಲಿಯೇ ಬೀಫ್ ಸಾಗಾಣೆಯಲ್ಲಿ ವಿಶ್ವದಲ್ಲಿ 2ನೇ ಸ್ಥಾನದಲ್ಲಿದೆ. ಇದು ದುರಂತದ ಸಂಗತಿ. ಮೋದಿ ಅವರಿಗೆ ರಾಷ್ಟ್ರದ ಬಗ್ಗೆ ಕಳಕಳಿ ಇದ್ದರೆ ಭೂಮಿ, ನಾಡು ಸಂರಕ್ಷಣೆ ಇದ್ದರೆ ಪ್ರಯತ್ನ ಮಾಡಲಿ. ಯಾವುದೇ ಪ್ರಾಣಿ ಕೊಂದು ರಪ್ಪು ಮಾಡುವ ಪಾಲಿಸಿ ರದ್ದು ಮಾಡಿ. ದೇವಾಲಯಗಳು ವಧುಗಾರ ಕೇಂದ್ರ ಆಗಿವೆ. ಜಾತ್ರೆಗಳು ಕಟುಕರ ಕೇಂದ್ರ ಆಗುತ್ತಿವೆ ಎಂದು ದಯಾನಂದ ಸ್ವಾಮೀಜಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next