Advertisement

Honor;ದಾವೂದ್‌ ಇಬ್ರಾಹಿಂ ಬೀಗರಾಗಿದ್ದು ನಮಗೆ ಗೌರವ: ಮಿಯಾಂದಾದ್‌ ವಿವಾದ

12:57 AM Mar 21, 2024 | Team Udayavani |

ಇಸ್ಲಾಮಾಬಾದ್‌: ಕುಖ್ಯಾತ ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಕುರಿತು ಆತನ ಬೀಗ, ಪಾಕಿ ಸ್ಥಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಜಾವೇದ್‌ ಮಿಯಾಂದಾದ್‌ ಆಡಿರುವ ಮಾತುಗಳು ವಿವಾದ ಕ್ಕೀಡಾಗಿದೆ.

Advertisement

ಸಂದರ್ಶನ ಒಂದರಲ್ಲಿ ಮಿಯಾಂದಾದ್‌, “ಎಲ್ಲರೂ ತಿಳಿದು ಕೊಂಡಿರು ವಂತೆ ದಾವೂದ್‌ ಕೆಟ್ಟ ಮನುಷ್ಯನಲ್ಲ. ಆತ ತುಂಬಾ ಒಳ್ಳೆಯವ. ನಾನು ಬಹಳ ಹಿಂದಿನಿಂದಲೂ ಆತನ ಬಗ್ಗೆ ತಿಳಿದುಕೊಂಡಿದ್ದು, ಮುಸ್ಲಿಮರಿಗಾಗಿ ಆತ ಏನೆಲ್ಲ ಒಳಿತುಗಳನ್ನು ಮಾಡಿದ್ದಾನೆ. ಆತನೊಂದಿಗೆ ಸಂಬಂಧ ಬೆಳೆಸಿರುವುದು ನಮಗೆ ಗೌರವ ತಂದುಕೊಟ್ಟಿದೆ’ ಎಂದಿದ್ದಾರೆ. ಮಿಯಾಂದಾ ದ್‌ ಪುತ್ರ ದಾವೂದ್‌ ಪುತ್ರಿಯನ್ನು ವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next