Advertisement

Election: ಕೇರಳದಲ್ಲಿ “ರಾಹುಲ್‌ ಗಾಂಧಿ ಡಿಎನ್‌ಎ ಪರೀಕ್ಷೆ’ ವಿವಾದ

11:20 PM Apr 23, 2024 | Team Udayavani |

ತಿರುವನಂತಪುರ: “ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೆಳ ದರ್ಜೆಯ ನಾಗರಿಕ. ರಾಹುಲ್‌ ಅವರು ನೆಹರು ಕುಟುಂಬದವರೋ, ಅಲ್ಲವೋ ಎಂಬುದನ್ನು ತಿಳಿಯಲು ಡಿಎನ್‌ಎ ಪರೀಕ್ಷೆಗೆ ಒಳಪಡಿಸಬೇಕು’ ಎಂದು ಕೇರಳದ ಪಕ್ಷೇತರ ಶಾಸಕರೊಬ್ಬರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Advertisement

ರಾಹುಲ್‌ ಗಾಂಧಿ ಸ್ಪರ್ಧಿಸುತ್ತಿರುವ ಕೇರಳದ ವಯನಾಡ್‌ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ನೀಲಾಂಬುರ್‌ ಕ್ಷೇತ್ರದ ಪಕ್ಷೇತರ ಶಾಸಕ ಪಿ.ವಿ.ಅನ್ವರ್‌, ವಿವಾದಾತ್ಮಕ ಹೇಳಿಕೆ ನೀಡಿರುವ ವ್ಯಕ್ತಿ.

ಪಾಲಕ್ಕಾಡ್‌ನ‌ಲ್ಲಿ ಮಂಗಳವಾರ ನಡೆದ ಚುನಾವಣ ರ್ಯಾಲಿಯಲ್ಲಿ, ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಕುರಿತು ಇತ್ತೀಚೆಗೆ ಆರೋಪ ಮಾಡಿದ್ದ ರಾಹುಲ್‌ ಬಗ್ಗೆ ಕಿಡಿಕಾರುತ್ತಾ, “ನೆಹರೂ ಕುಟುಂಬದಲ್ಲಿ ಜನಿಸಿದ ಯಾರಾದರೂ ಈ ರೀತಿ ಮಾತನಾಡಲು ಸಾಧ್ಯವೇ? ರಾಹುಲ್‌ ಬಗ್ಗೆ ನನಗೆ ತೀರಾ ಅನುಮಾನವಿದ್ದು, ಅವರ ಡಿಎನ್‌ಎ ಪರೀಕ್ಷೆ ಮಾಡಬೇಕಾದ ಅಗತ್ಯವಿದೆ ಎನಿಸುತ್ತಿದೆ’ ಎಂದಿದ್ದರು.

ಅನ್ವರ್‌ ಅವರ ಕೀಳು ಹೇಳಿಕೆ ವಿರುದ್ಧ ಕಾಂಗ್ರೆಸ್‌ ನಾಯಕರು ಸಿಡಿದೆದ್ದಿದ್ದು, ಚುನಾವಣ ಆಯೋಗಕ್ಕೆ ದೂರು ನೀಡುವುದಾಗಿ ಹೇಳಿದ್ದಾರೆ. ಅಲ್ಲದೆ ತತ್‌ಕ್ಷಣ  ಅನ್ವರ್‌ ವಿರುದ್ಧ ಕೇಸು ದಾಖಲಿಸುವಂತೆ ಆಗ್ರಹಿಸಿ ದ್ದಾರೆ. ಅನ್ವರ್‌ ಈ ರೀತಿ ಮಾತನಾಡಲು ಪಿಣರಾಯ್‌ವಿಜಯನ್‌ ಅವರೇ ಕಾರಣ ಎಂದು ದೂಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next