Advertisement

Davanagere; ಭೀಕರ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಮೃ*ತ್ಯು

07:54 PM Oct 17, 2024 | Team Udayavani |

ದಾವಣಗೆರೆ: ಟಿಪ್ಪರ್ ಮತ್ತು ಬೈಕ್ ನಡುವಿನ ಭೀಕರ ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಗುರುವಾರ(ಅ17) ಚನ್ನಗಿರಿ ತಾಲೂಕಿನ ಹಾಲೇಶಪುರದ ಬಳಿ ಸಂಭವಿಸಿದೆ.

Advertisement

ಹಾಲೇಶಪುರದ ರಮೇಶ್ ಮತ್ತು ಹಾಲೇಶ್ ಮೃತಪಟ್ಟವರು. ಇಬ್ಬರು ಬೈಕ್‌ ನಲ್ಲಿ ಕೆಲಸಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಅಪಘಾತ ಸಂಭವಿಸಿದ ನಂತರ ಕೆಲ ಕಾಲ ಮೃತಪಟ್ಟವರು ಯಾರು ಎಂಬ ಕುರಿತು ಮಾಹಿತಿ ಇರಲಿಲ್ಲ. ನಂತರ ಇಬ್ಬರೂ ಯುವಕರು ಹಾಲೇಶಪುರದವರೇ ಎಂಬುದು ಗೊತ್ತಾಯಿತು. ದುರಂತದ ಸ್ಥಳಕ್ಕೆ ಶಾಸಕ ಕೆ.ಎಸ್. ಬಸವಂತಪ್ಪ, ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ನಾಗರಾಜ್ ಇತರರು ಭೇಟಿ ನೀಡಿ, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next