Advertisement

‘ರೈತಮಿತ್ರ’ಕಿರುಚಿತ್ರ ಬಿಡುಗಡೆ

06:56 PM Jun 29, 2020 | Naveen |

ದಾವಣಗೆರೆ: ತಾಲೂಕಿನ ಕಾಡಜ್ಜಿ ಗ್ರಾಮದ ನಾರದಮುನಿ ಎಂ. (ನಾನಿ) ನಿರ್ದೇಶನದ “ರೈತಮಿತ್ರ’ ಕಿರುಚಿತ್ರವನ್ನು ಮಾಜಿ ಸಚಿವ ಎಸ್‌. ಎಸ್‌. ಮಲ್ಲಿಕಾರ್ಜುನ್‌ ಗೃಹಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಯೂಟ್ಯೂಬ್‌ಗ ಆಪ್‌ ಲೋಡ್‌ ಮಾಡುವ ಮೂಲಕ ಬಿಡುಗಡೆಗೊಳಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು, “ರೈತಮಿತ್ರ’ ಕಿರುಚಿತ್ರದಲ್ಲಿ 18 ನಿಮಿಷಗಳಲ್ಲಿ ರೈತರು ಮತ್ತವರ ಮಕ್ಕಳ ಸಮಸ್ಯೆಗಳ ವಾಸ್ತವಾಂಶವನ್ನು ಮನಮುಟ್ಟುವಂತೆ ಚಿತ್ರಿಸಿದ್ದಾರೆ. ಗ್ರಾಮಾಂತರ, ನಗರ ಪ್ರದೇಶದ ಜನರು ಕಿರುಚಿತ್ರ ವೀಕ್ಷಿಸುವ ಮೂಲಕ ಅಪ್ಪಟ ಪ್ರತಿಭೆ ನಾರದಮುನಿ ಅವರನ್ನು ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ಕಿರುಚಿತ್ರದ ನಿರ್ದೇಶಕ ನಾರದಮುನಿ ಎಂ. (ನಾನಿ), ಕಾಡಜ್ಜಿ ಮುರುಳಿ, ಚಿತ್ರತಂಡದ ನಂಜುಂಡಿ, ಸಿದ್ದೇಶ್‌, ಚಂದ್ರು, ಆಂಜನೇಯ, ಶಿವು, ನವೀನ್‌, ತೇಜು, ನಾಗರಾಜ್‌, ಅನಂತ್‌, ಬಾಲನಟ ಲೋಕಮಿತ್ರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next