Advertisement

ಕೋವಿಡ್ ಗೆ ಮತ್ತೊಬ್ಬ ಬಲಿ: ಆರು ಜನರಿಗೆ ಪಾಸಿಟಿವ್

11:16 AM Jul 08, 2020 | Naveen |

ದಾವಣಗೆರೆ: ಜಿಲ್ಲೆಯಲ್ಲಿ ಸತತ ಮೂರನೇ ದಿನವೂ ವ್ಯಕ್ತಿಯೊಬ್ಬರು ಕೋವಿಡ್  ನಿಂದ ಸಾವನ್ನಪ್ಪಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 13ಕ್ಕೇರಿದೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಮಾರುತಿನಗರದ 6ನೇ ಕ್ರಾಸ ನಿವಾಸಿ 55 ವರ್ಷದ ವ್ಯಕ್ತಿ (ರೋಗಿ ನಂಬರ್‌ 25830) ಸಾವನ್ನಪ್ಪಿದವರು. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಜು. 6 ರಂದು ಜಿಲ್ಲಾ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಂಗಳವಾರ ಮೃತಪಟ್ಟಿದ್ದಾರೆ.

Advertisement

ಜಿಲ್ಲೆಯಲ್ಲಿ ಹೊಸದಾಗಿ ಆರು ಜನರಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಶೀತ ಜ್ವರ ಸಮಸ್ಯೆಯಿಂದ ಬಳಲುತ್ತಿದ್ದ ದಾವಣಗೆರೆಯ ಬಾಷಾನಗರದ 65 ವರ್ಷದ ವೃದ್ಧ(ರೋಗಿ ನಂಬರ್‌ 25825), ಚೌಕಿಪೇಟೆಯ 46 ವರ್ಷದ ವ್ಯಕ್ತಿ (ರೋಗಿ ನಂಬರ್‌ 25826) ಯಲ್ಲಿ ಸೋಂಕು ಕಾಣಿಸಿಕೊಂಡಿದೆ. ರ್‍ಯಾಂಡಂ ಪರೀಕ್ಷೆಯಲ್ಲಿ ದಾವಣಗೆರೆಯ ನಿಟುವಳ್ಳಿಯ ಎಚ್‌.ಕೆ.ಆರ್‌. ವೃತ್ತದ 3ನೇ ಕ್ರಾಸ್‌ ನಿವಾಸಿ 43 ವರ್ಷದ ವ್ಯಕ್ತಿ (ರೋಗಿ ನಂಬರ್‌ 25827) ಯಲ್ಲಿ ಕಾಣಿಸಿಕೊಂಡಿರುವ ಸೋಂಕಿನ ಮೂಲ ಪತ್ತೆ ಹಚ್ಚಲಾಗುತ್ತಿದೆ. ತಮಿಳುನಾಡಿನಿಂದ ವಾಪಾಸ್ಸಾಗಿರುವ ಚನ್ನಗಿರಿ ತಾಲೂಕಿನ ನಲ್ಲೂರು ಗ್ರಾಮದ 62 ವರ್ಷದ ವೃದ್ದೆ(ರೋಗಿ ನಂಬರ್‌ 25828) ಗೆ ಸೋಂಕು ದೃಢಪಟ್ಟಿದೆ.

ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ದಾವಣಗೆರೆ ನಿಟುವಳ್ಳಿಯ 48 ವರ್ಷದ ವ್ಯಕ್ತಿ (ರೋಗಿ ನಂಬರ್‌ 25829) ಹಾಗೂ ಹಾವೇರಿ ಜಿಲ್ಲೆ ರಾಣೆಬೆನ್ನೂರಿನ 55 ವರ್ಷದ ವೃದ್ಧ (ರೋಗಿ ನಂಬರ್‌ 25830) ಸೋಂಕಿಗೆ ಒಳಗಾಗಿದ್ದಾರೆ. 365 ಪ್ರಕರಣಗಳಲ್ಲಿ ಇಲ್ಲಿಯವರೆಗೆ 311 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 41 ಸಕ್ರಿಯ ಪ್ರಕರಣಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next