Advertisement

ದಾವಣಗೆರೆ: ತೋಟದಲ್ಲಿ ವಿದ್ಯುತ್ ಪ್ರವಹಿಸಿ ಇಬ್ಬರು ಮೃತ್ಯು

07:26 PM Feb 20, 2023 | Team Udayavani |

ದಾವಣಗೆರೆ: ಪಂಪ್‌ಸೆಟ್ ಆನ್ ಮಾಡುವಾಗ ವಿದ್ಯುತ್ ಪ್ರವಹಿಸಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ ದಾರುಣ ಘಟನೆ ಸೋಮವಾರ ದಾವಣಗೆರೆ ತಾಲೂಕಿನ ಬಾಡ ಗ್ರಾಮದಲ್ಲಿ ಸಂಭವಿಸಿದೆ.

Advertisement

ಅಡಕೆ ತೋಟದ ಮಾಲಿಕ ಮಂಜುನಾಥ್(65), ಕೂಲಿ ಕಾರ್ಮಿಕ ಕತ್ತಲಗೆರೆ ಚಂದ್ರಪ್ಪ(45) ಮೃತ ದುರ್ದೈವಿಗಳು.ಅಡಿಕೆ ತೋಟಕ್ಕೆ ನೀರು ಬಿಡಲೆಂದು ಮಾಲಿಕ ಮಂಜುನಾಥ್ ಮತ್ತು ಚಂದ್ರಪ್ಪ ಹೋಗಿದ್ದರು. ಮಂಜುನಾಥ್ ಪಂಪ್ ಸೆಟ್ ಆನ್ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಮದರ್ ಬೋರ್ಡ್‌ಗೆ ಕೈ ತಗುಲಿ ವಿದ್ಯುತ್ ಸ್ಪರ್ಶವಾಗಿ ನೆಲಕ್ಕೆ ಬಿದ್ದಿದ್ದಾರೆ. ಮಾಲಿಕನನ್ನ ರಕ್ಷಿಸಲು ಧಾವಿಸಿದ ಚಂದ್ರಪ್ಪನಿಗೂ ವಿದ್ಯುತ್ ಪ್ರವಹಿಸಿದ್ದರಿಂದ ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next