Advertisement

ದಾವಣಗೆರೆ: ಲಾರಿ ಹರಿದು ಸ್ವಾಮೀಜಿ ಸೇರಿ ಇಬ್ಬರು ಬಲಿ 

04:56 PM Dec 01, 2017 | Team Udayavani |

ದಾವಣಗೆರೆ : ಇಲ್ಲಿನ ಕಲಪನಹಳ್ಳಿ ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಯಲ್ಲಿ  ಲಾರಿಯೊಂದು ಯವನಂತೆ ಹೂವು ಖರೀದಿಸುತ್ತಿದ್ದ ಸ್ವಾಮೀಜಿ ಮತ್ತು ಹೂವಿನ ವ್ಯಾಪಾರಿಯ ಮೇಲೆ ಎರಗಿದ್ದು ಇಬ್ಬರೂ ದಾರುಣವಾಗಿ  ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದೆ.

Advertisement

ಮೈಸೂರಿಗೆ ಪಾದಯಾತ್ರೆಯಲ್ಲಿ  ಇತರ ಐವರೊಂದಿಗೆ ಬಂದಿದ್ದ ಗುಜರಾತ್‌ನಗಾಂಧಿನಗರ ಮೂಲದ ಸ್ವಾಮಿ ಸುರಂ ನಾಥ್‌ (55) ಮತ್ತು ಹೂವಿನ ವ್ಯಾಪಾರಿ ಗಂಗಾಧರ್‌ (50) ಮೃತಪಟ್ಟವರು.

ಅವಘಡಕ್ಕೆ ಕಾರಣನಾದ ಲಾರಿ ಚಾಲಕ ನಾಸೀರ್‌ನನ್ನು ಪೊಲೀಸರು ಕೂಡಲೇ ವಶಕ್ಕೆ ಪಡೆದಿದ್ದಾರೆ. 

ದೇವಾಲಯದಲ್ಲಿ ಪೂಜೆಗೆಂದು ಹೂವು ಖರೀದಿಸಲು ತೆರಳಿದ್ದ ವೇಳೆ ಲಾರಿ ಎರಗಿದ್ದು ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 

ದಾವಣಗೆರೆ ಗ್ರಾಮಾಂತರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next