Advertisement

ದಾವಣಗೆರೆ: ಮಾಜಿ‌ ಸಚಿವರ ಪುತ್ರನ ಕಾರು ಅಪಘಾತ, ಅಪಾಯದಿಂದ ಪಾರು

09:42 AM Mar 20, 2020 | sudhir |

ದಾವಣಗೆರೆ: ಮಾಜಿ ಗೃಹ ಸಚಿವ , ಕಾಂಗ್ರೆಸ್ ಹಿರಿಯ‌ ನಾಯಕ ಎಂ .ಬಿ . ಪಾಟೀಲ್ ಪುತ್ರ ರಾಹುಲ್ ಪಾಟೀಲ್ ಅವರ ದುಬಾರಿ ಕಾರು ಅಪಘಾತಕ್ಜೀಡಾಗಿದ್ದು, ಯಾವುದೇ ಪ್ರಾಣಹಾನಿಯಾಗಿಲ್ಲ. ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ದೊಣ್ಣೆ ಹಳ್ಳಿ ಬಳಿಯ ರಾಷ್ಟ್ರೀಯ ಹೆದ್ದಾರಿ 50 ರಲ್ಲಿ ರಾಹುಲ್ ಕಾರು ಎದುರಿನಿಂದ ಬರುತ್ತಿದ್ದ ಅಪೆ ಆಟೋಗೆ ಡಿಕ್ಕಿ ಹೊಡೆದಿದೆ . ಘಟನೆಯಲ್ಲಿ ಆಟೋ ಚಾಲನಕನಿಗೆ ಸಣ್ಣ ಗಾಯಗಳಾಗಿವೆ .

Advertisement

ಮಾಜಿ ಸಚಿವರ ಪುತ್ರ ರಾಹುಲ್‌ ಪಾಟೀಲ್ ನ ಕಾರು ಬೆಂಗಳೂರಿನಿಂದ ವಿಜಯಪುರಕ್ಕೆ ತೆರಳುತ್ತಿದ್ದ ವೇಳೆ ಅವಘಡ ಸಂಭವಿಸಿದೆ. ಲಾರಿಯನ್ನು ಓವರ್ ಟೇಕ್ ಮಾಡಲು ಹೋದ ವೇಳೆ ಎದುರಿನಿಂದ ಬಂದ ಅಪೆ ಆಟೋಗೆ ಕಾರು ಗುದ್ದಿದೆ . ಹೀಗಾಗಿ ಅಪಘಾತ ಸಂಭವಿಸಿದೆ. ಆಟೋ ಚಾಲಕನ ಕೈಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಜಗಳೂರು ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗಿದೆ.. ಅಲ್ಲದೆ, ಅಪಘಾತದ ವೇಳೆ ಎಂ.ಬಿ.ಪಾಟೀಲ್ ಪುತ್ರ ರಾಹುಲ್ ಪಾಟೀಲ್ ಕಾರಿನಲ್ಲಿ ಇರಲಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next