Advertisement

ಗೊಲ್ಲರಹಳ್ಳಿ ಹಳ್ಳದ ನೀರಿನಲ್ಲಿಸಿಲುಕಿದ್ದ ಮಹಿಳೆ-ಕುರಿಗಾಹಿ ರಕ್ಷಣೆ

01:06 PM Jun 16, 2022 | Team Udayavani |

ದಾವಣಗೆರೆ: ತಾಲೂಕಿನ ವಿವಿಧಭಾಗಗಳಲ್ಲಿ ಬುಧವಾರ ಸಂಜೆಎರಡು ಗಂಟೆಗಳಿಗೂ ಹೆಚ್ಚು ಕಾಲಕಾಲ ಭಾರಿ ಮಳೆ ಸುರಿದಿದೆ. ಸಂಜೆ4 ಗಂಟೆಗೆ ಪ್ರಾರಂಭವಾದ ಮಳೆಸತತ ಎರಡು ಗಂಟೆಗಳ ಕಾಲಒಂದೇ ಸಮನೆ ಸುರಿದಿದೆ. ಭಾರೀಮಳೆಯಿಂದ ದಾವಣಗೆರೆ ತಾಲೂಕಿನಗೊಲ್ಲರಹಳ್ಳಿ ಬಳಿಯ ಜಗಳೂರು ರಸ್ತೆಮೇಲೆ ಐದಾರು ಅಡಿ ನೀರು ಹರಿದಪರಿಣಾಮ ರಸ್ತೆ ಸಂಚಾರ ಬಂದ್‌ಆಗಿತ್ತು.

Advertisement

ಪರ್ಯಾಯ ಮಾರ್ಗದಮೂಲಕ ವಾಹನಗಳು ಸಂಚರಿಸಿದವು.ಗೊಲ್ಲರಹಳ್ಳಿ ಗ್ರಾಮದ ಓರ್ವಮಹಿಳೆ ಹಾಗೂ ಕುರಿಗಾಹಿಯೊಬ್ಬಹಳ್ಳ ತುಂಬಿ ಹರಿದ ಪರಿಣಾಮನೀರಿನಲ್ಲಿ ಸಿಲುಕಿದ್ದರು. ವಿಷಯ ತಿಳಿದಗ್ರಾಮಸ್ಥರು ಹಗ್ಗದ ಸಹಾಯದಿಂದಮಹಿಳೆ ಮತ್ತು ಕುರಿಗಾಹಿಯನ್ನುರಕ್ಷಿಸುವಲ್ಲಿ ಯಶಸ್ವಿಯಾದರು.

ಹಗ್ಗದ ಸಹಾಯದಿಂದ ಮಹಿಳೆಈಚೆಗೆ ಬರುವಾಗ ನೀರಿನ ಸೆಳೆತಕ್ಕೆಕೊಚ್ಚಿ ಹೋಗುತ್ತಿದ್ದರು. ಗ್ರಾಮಸ್ಥರಸಮಯಪ್ರಜ್ಞೆ ಯಿಂದ ಮಹಿಳೆಯನ್ನುರಕ್ಷಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next