Advertisement

ಸಿಹಿ ಸುದ್ದಿ ನೀಡಿದರೆ ಸನ್ಮಾನ-ಇಲ್ಲದಿದ್ರೆ ಹೋರಾಟ

06:45 PM Oct 01, 2021 | Team Udayavani |

ದಾವಣಗೆರೆ: ಪಂಚಮಸಾಲಿ ಸಮಾಜಕ್ಕೆ 2ಎಮೀಸಲಾತಿ ನೀಡುವ ವಿಚಾರವಾಗಿ ಶುಕ್ರವಾರ(ಅ. 1 ) ಸಿಹಿ ಸುದ್ದಿ ಕೊಟ್ಟರೆ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿಯವರಿಗೆ ಸನ್ಮಾನ ಮಾಡಲಾಗುವುದು. ಇಲ್ಲದಿದ್ದರೆ ಸತ್ಯಾಗ್ರಹಮುಂದುವರಿಸಲಾಗುವುದು ಎಂದು ಕೂಡಲಸಂಗಮದ ಲಿಂಗಾಯತ ಪಂಚಮ ಸಾಲಿಜಗದ್ಗುರು ಪೀಠದ ಶ್ರೀ ಜಯಮೃತ್ಯುಂಜಯಸ್ವಾಮೀಜಿ ಪುನರುಚ್ಚರಿಸಿದರು.

Advertisement

ನಗರದ ತ್ರಿಶೂಲ್‌ ಕಲಾಭವನದಲ್ಲಿಗುರುವಾರ ಸಂಜೆ ನಡೆದ ಲಿಂಗೈಕ್ಯ ಡಾ|ಮಹಾಂತ ಶಿವಾಚಾರ್ಯ ಜಗದ್ಗುರುಗಳಜಯಂತ್ಯುತ್ಸವ ಹಾಗೂ ಲಿಂಗಾಯತಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಹಕ್ಕೊತ್ತಾಯದ ಪ್ರತಿಜ್ಞಾ ಪಂಚಾಯತ್‌ ಬೃಹತ್‌ರಾಜ್ಯ ಅಭಿಯಾನ ಹಾಗೂ ಪಂಚಮಸಾಲಿಸಮಾಜದ ರಾಜ್ಯ ಯುವ ಘಟಕದ ನೂತನಅಧ್ಯಕ್ಷರ ಪದಗ್ರಹಣ ಸಮಾರಂಭ ಉದ್ಘಾಟಿಸಿಶ್ರೀಗಳು ಮಾತನಾಡಿದರು.ನಾಳೆ ಸರ್ಕಾರದಿಂದ ಸಿಹಿ ಸುದ್ದಿಸಿಗಬಹುದು ಎಂಬ ನಿರೀಕ್ಷೆ ಇದೆ.

ಸಿಹಿಸುದ್ದಿ ಕೊಟ್ಟರೆ ಮುಖ್ಯಮಂತ್ರಿಯವರಿಗೆಡೈಮಂಡ್‌ ಕಲ್ಲುಸಕ್ಕರೆಯ ತುಲಾಭಾರ ಮಾಡಿಅಭಿನಂದಿಸಲಾಗುವುದು. ಅಷ್ಟೇ ಅಲ್ಲ ಅವರಭಾವಚಿತ್ರ ಇಟ್ಟು ಗೌರವಿಸುವ ಕೆಲಸವನ್ನೂಮಾಡಲಾಗುವುದು. ಒಂದು ವೇಳೆ ಸಿಹಿ ಸುದ್ದಿಸಿಗದೇ ಇದ್ದರೆ ನಮ್ಮ ಸಮಾಜದ ಬಾಹುಬಲಿಎನಿಸಿದ ಬಸನಗೌಡ ಯತ್ನಾಳ ಅವರನ್ನುಕೇಳಿ ಮುಂದಿನ ಹೋರಾಟದ ರೂಪುರೇಷೆಸಿದ್ಧಪಡಿಸಲಾಗುವುದು ಎಂದು ಎಚ್ಚರಿಕೆನೀಡಿದರು.ಸರ್ಕಾರ ಪಂಚಮಸಾಲಿ ಸಮಾಜಕ್ಕೆ2ಎ ಮೀಸಲಾತಿ ನೀಡದೆ ಇದ್ದರೆ ಮುಂದಿನಹೋರಾಟಕ್ಕೆ 30 ಲಕ್ಷ ಜನ ಬೆಂಗಳೂರಲ್ಲಿಸೇರುತ್ತಾರೆ.

ಅಷ್ಟೊಂದು ಸಂಘಟನೆ, ಜಾಗೃತಿಸಮಾಜದಲ್ಲಿ ಮೂಡಿದೆ. ಮೀಸಲಾತಿ ಹೋರಾಟಆರಂಭಿಸಿದಾಗ ಹಿಂದೆ ಸರಿಯುವಂತೆಕೆಲವರು ಕಾರು, ಹಣದ ಆಮಿಷ ಒಡ್ಡಿದರು.ಆಮಿಷಕ್ಕೊಳಗಾಗಿ ನಾನು ಓಡಿ ಹೋಗಿಲ್ಲ. ಹಾಗೆಮಾಡಿದ್ದರೆ ಇಷ್ಟೊಂದು ಜನರು ನನಗೆ ಪ್ರೀತಿ ತೋರಿಸುತ್ತಿರಲಿಲ್ಲ. ಮೀಸಲಾತಿಗಾಗಿ ನಡೆಸಿದಹೋರಾಟವನ್ನು ಕೆಲವರು ತುಳಿಯಲು ಸಹಪ್ರಯತ್ನ ಮಾಡಿದರು. ಅವರು ತುಳಿದಷ್ಟುಸಮಾಜದವರು ನನ್ನನ್ನು ಎತ್ತರಕ್ಕೆ ತಂದುನಿಲ್ಲಿಸಿದರು ಎಂದು ಶ್ರೀಗಳು ಹೇಳಿದರು.

ನಮ್ಮ ಪ್ರತಿಜ್ಞೆ ಯಾರನ್ನೋಮುಖ್ಯಮಂತ್ರಿಯನ್ನಾಗಿಸುವುದಲ್ಲ. ಸಮಾಜಕ್ಕೆ2ಎ ಮೀಸಲಾತಿ ಕೊಡಿಸುವುದಾಗಿದೆ.ಸಮಾಜವನ್ನು ಹಿಂದುಳಿದ ವರ್ಗಗಳಪಟ್ಟಿಯಲ್ಲಿ ಸೇರಿಸುವುದು ಹಾಗೂರೈತರಿಗೆ ನೀರಾವರಿ ವ್ಯವಸ್ಥೆ, ಬೆಳೆಗಳಿಗೆ ವೈಜ್ಞಾನಿಕದರ ಕೊಡಿಸುವುದು ಪ್ರಮುಖ ಬೇಡಿಕೆಎಂದರು. ಇದೇ ಸಂದರ್ಭದಲ್ಲಿ ಪಂಚಮಸಾಲಿಸಮಾಜದ ರಾಜ್ಯ ಯುವ ಘಟಕದ ನೂತನಅಧ್ಯಕ್ಷರಾಗಿ ಮಾಜಿ ಮೇಯರ್‌ ಬಿ.ಜಿ.ಅಜಯಕುಮಾರ್‌ ಪದಗ್ರಹಣ ಸ್ವೀಕರಿಸಿದರು.ನಂದಿಗುಡಿಯ ಶ್ರೀ ಸಿದ್ರಾಮೇಶ್ವರ ಸ್ವಾಮೀಜಿಸಾನ್ನಿಧ್ಯ ವಹಿಸಿದ್ದರು.
ಅಖೀಲ ಭಾರತಲಿಂಗಾಯತ ಪಂಚಮಸಾಲಿ ಮಹಾಸಭಾದರಾಷ್ಟ್ರೀಯ ಅಧ್ಯಕ್ಷ ವಿಜಯಾನಂದಕಾಶಪ್ಪನವರ್‌, ಮಾಜಿ ಶಾಸಕರಾದ ಎಚ್‌.ಎಸ್‌.ಶಿವಶಂಕರ್‌, ಸೋಮಣ್ಣ ಬೇವಿನಮರದ,ನಂದಿಹಳ್ಳಿ ಹಾಲಪ್ಪ, ಮಾಜಿ ಸಂಸದಮಂಜುನಾಥ ಕುನ್ನೂರು, ಪ್ರಮುಖರಾದವೀಣಾ ಕಾಶಪ್ಪನವರ್‌, ಎಂ.ಪಿ. ಸುಭಾಶ್ಚಂದ್ರ,ಭಾರತಿ ಜಂಬಗಿ ಇದ್ದರು. ವಚನನಾನಂದಶ್ರೀಗಳ ಗೈರುಹಾಜರಿ ಎದ್ದು ಕಾಣುತ್ತಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next