Advertisement

ಬಂಟ್ವಾಳ: ಊರಿಗೆ ಹೋಗುವುದಾಗಿ ಹೇಳಿ ಹೋದ ದಾವಣಗೆರೆ ಮೂಲದ ಕಾರ್ಮಿಕ ನಾಪತ್ತೆ

09:41 PM Feb 15, 2023 | Team Udayavani |

ಬಂಟ್ವಾಳ: ಶಂಭೂರಿನಲ್ಲಿ ತೋಟದ ಕೆಲಸ ನಿರ್ವಹಿಸುತ್ತಿದ್ದ ದಾವಣಗೆರೆ ಮೂಲದ ಕೂಲಿ ಕಾರ್ಮಿಕ ಊರಿಗೆ ಹೋಗುವುದಾಗಿ ತೆರಳಿ ಊರಿಗೂ ಹೋಗದೆ, ಮರಳಿ ಬಾರದೆ ನಾಪತ್ತೆಯಾಗಿದ್ದಾರೆ.

Advertisement

ದಾವಣಗೆರೆಯ ಜಗಳೂರು ಹುಚ್ಚಂಗಿಪುರ ನಿವಾಸಿ ಯಲ್ಲಪ್ಪ(31) ನಾಪತ್ತೆಯಾದ ವ್ಯಕ್ತಿ. ಈತ ಶಂಭೂರು ಗ್ರಾಮದ ಅಡೆಪಿಲದಲ್ಲಿ ತೋಟದ ಕೆಲಸ ನಿರ್ವಹಿಸುತ್ತಿದ್ದರು. ಮನೆಯವರ ನೆನಪಾಗಿ ಊರಿಗೆ ಹೋಗಿ ಬರುತ್ತೇನೆ ಎಂದು ಹೇಳಿ ಬಿ.ಸಿ.ರೋಡಿನಿಂದ ಬಸ್‌ನಲ್ಲಿ ತೆರಳಿದವರು ದಾವಣಗೆರೆಗೆ ಹೋಗದೆ, ವಾಪಸು ಬರದೆ ನಾಪತ್ತೆಯಾಗಿದ್ದಾರೆ. ಆತನ ಸಹೋದರ ತಿಮ್ಮೇಶ್‌ ಅವರು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಸ್ವಂತ ಮನೆ ಇಲ್ಲದ ಕೊರಗು: ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ

Advertisement

Udayavani is now on Telegram. Click here to join our channel and stay updated with the latest news.

Next