Advertisement

ಸೀಲ್‌ಡೌನ್‌ ತೆರವಿಗೆ ಒತ್ತಾಯ

05:06 PM May 22, 2020 | Naveen |

ದಾವಣಗೆರೆ: ಕೆ.ಟಿ.ಜೆ ನಗರದಲ್ಲಿ ಕಂಟೈನ್‌ಮೆಂಟ್‌ ಝೋನ್‌, ಸೀಲ್‌ಡೌನ್‌ ತೆರವುಗೊಳಿಸಬೇಕು ಎಂದು ಕೆಪಿಸಿಸಿ ಎಸ್ಸಿ ವಿಭಾಗದ ಕಾರ್ಯದರ್ಶಿ ಸೋಮಲಾಪುರ ಹನುಮಂತಪ್ಪ ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

Advertisement

ಕೆ.ಟಿ.ಜೆ ನಗರದ 1ನೇ ಮುಖ್ಯರಸ್ತೆ, 15ನೇ ತಿರುವಿನಲ್ಲಿ ವಾಸವಾಗಿರುವ ಉರ್ದು ಶಾಲೆಯ ಶಿಕ್ಷಿಕಿ ಕೋವಿಡ್ ಸೋಂಕಿಗೆ ತುತ್ತಾಗಿದ್ದಾರೆ. ಆ ಶಿಕ್ಷಕಿ ಶಾಲೆಯ ರಜಾ ದಿನದಿಂದಲೂ ತಮ್ಮ ಸಂಬಂಧಿಕರ ಮನೆಗೆ ಹೋಗಿದ್ದವರು ಮನೆಗೆ ವಾಪಸ್‌ ಬಂದಿಲ್ಲ. ಅವರ ಆಧಾರ್‌ ಕಾರ್ಡ್‌, ಐಡಿ ಕಾರ್ಡ್‌ ಕೆಟಿಜೆ ನಗರ ವಿಳಾಸದಲ್ಲಿ ಇರುವುದರಿಂದ ಜಿಲ್ಲಾಡಳಿತ ಸೀಲ್‌ಡೌನ್‌ ಮಾಡಿದೆ. ಕೆ.ಟಿ.ಜೆ ನಗರದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರು ಹಾಗೂ ಹಿಂದುಳಿದ ವರ್ಗದವರೇ ಹೆಚ್ಚಾಗಿ ವಾಸವಾಗಿದ್ದು ಅಂದು ದುಡಿದು ಅಂದೇ ತಿನ್ನುವವರು ಹೆಚ್ಚಾಗಿದ್ದಾರೆ.

ಕಳೆದ ಎರಡು ತಿಂಗಳನಿಂದ ಯಾವುದೇ ಕೆಲಸವಿಲ್ಲದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ. 10ನೇ ಕ್ರಾಸ್‌ ನಿಂದ 18ನೇ ಕ್ರಾಸ್‌, 1 ಹಾಗೂ 2ನೇ ಮುಖ್ಯರಸ್ತೆಗಳನ್ನು ಸಂಪೂರ್ಣವಾಗಿ ಸೀಲ್‌ಡೌನ್‌ ಮಾಡಿರುವುದರಿಂದ ಜನರಿಗೆ ಅನಾನುಕೂಲವಾಗಿದೆ. ಕೋವಿಡ್ ರೋಗಿಗಳು ಇಲ್ಲದೇ ಇರುವುದರಿಂದ ಜಿಲ್ಲಾಡಳಿತ ಮರುಪರಿಶೀಲಿಸಿ ಸೀಲ್‌ಡೌನ್‌ ತೆರೆವುಗೊಳಿಸಿ ಸಾಮಾನ್ಯ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಡಾ| ಎಂ.ಡಿ. ಬಾಷಾ, ಮುಖಂಡರಾದ ಕೇರಂ ಗಣೇಶ್‌, ಎಸ್‌. ಮಾನು, ಚೇತನ್‌ ಕುಮಾರ್‌, ಮಹಾದೇವಮ್ಮ, ಗೋಣೆಪ್ಪ, ನಾಸೀರ್‌, ಅಂಗಡಿ ರಾಜು ಇತರರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next