Advertisement

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

12:27 PM Apr 29, 2024 | Team Udayavani |

ದಾವಣಗೆರೆ: ದಾವಣಗೆರೆಯ ಐತಿಹಾಸಿಕ ಸರ್ಕಾರಿ ಬಾಲಕರ ಪ್ರೌಢಶಾಲಾ ಮೈದಾನದಲ್ಲಿ ಭಾನುವಾರ ನಡೆದ ವಿಜಯ ಸಂಕಲ್ಪ ಸಮಾವೇಶದ ಜಾಗವನ್ನು ಸೋಮವಾರ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಮತ್ತು ಪಕ್ಷದ ಮುಖಂಡರು ಸ್ವಚ್ಛಗೊಳಿಸಿದರು.

Advertisement

ಭಾನುವಾರ ನಡೆದಿದ್ದ ವಿಜಯ ಸಂಕಲ್ಪ ಸಮಾವೇಶಕ್ಕೆ ಸಾವಿರಾರು ಜನರು ಆಗಮಿಸಿದ್ದರಿಂದ ಮೈದಾನದ ಹಲವೆಡೆ ನೀರಿನ ಬಾಟಲಿ, ತಿಂಡಿ ತಟ್ಟೆ ಬಿದ್ದಿದ್ದವು. ಬೆಳಗ್ಗೆಯೇ ಮೈದಾನಕ್ಕೆ ಅಗಮಿಸಿದ ಗಾಯಿತ್ರಿ ಸಿದ್ದೇಶ್ವರ ಒಳಗೊಂಡಂತೆ ಹಲವಾರು ಮುಖಂಡರು, ಕಾರ್ಯಕರ್ತರು, ಕುಟುಂಬದವರು ಕಸ ಗುಡಿಸಿ, ನೀರಿನ ಬಾಟಲಿ, ತಟ್ಟೆ, ಲೋಟ ಎಲ್ಲವನ್ನೂ ತೆಗೆದಿರಿಸಿ ಸಭಾಂಗಣ, ವೇದಿಕೆ ಸ್ವಚ್ಛಗೊಳಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಸ್ವಚ್ಛ ಭಾರತ್ ಯೋಜನೆ ಪ್ರಾರಂಭಿಸಿದವರು. ಅವರು ಭಾಗವಹಿಸಿದ್ದಂತಹ ಕಾರ್ಯಕ್ರಮದ ಸ್ಥಳ ಸ್ವಚ್ಛಗೊಳಿಸಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next