Advertisement

Davanagere: ಜಲಾಶಯದಲ್ಲಿ ಮುಳುಗಿ ಸಾವನ್ನಪ್ಪಿದ ತಂದೆ ಮತ್ತು ಮಗ

10:08 PM Sep 28, 2023 | Team Udayavani |

ದಾವಣಗೆರೆ: ತಂದೆ ಮತ್ತು ಮಗ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಗುರುವಾರ ಹರಿಹರ ತಾಲೂಕಿನ ದೇವರ ಬೆಳಕೆರೆ ಪಿಕಪ್ ಜಲಾಶಯದಲ್ಲಿ ನಡೆದಿದೆ.

Advertisement

ಊಟದ ನಂತರ ಹಿನ್ನೀರಿನಲ್ಲಿ ಕೈ ತೊಳೆಯುವ ಸಂದರ್ಭದಲ್ಲಿ ಮುಳುಗಿ ತಂದೆ, ಮಗ ಸಾವನ್ನಪ್ಪಿದ್ದಾರೆ. ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದ ಚಂದ್ರಪ್ಪ (45) ಮತ್ತು ಅವರ ಪುತ್ರ ಶೌರ್ಯ ಸಾಯಿ (10) ಮೃತ ಪಟ್ಟವರು.

ಮೂಲತಃ ಹರಿಹರ ತಾಲೂಕಿನ ಮಿಟ್ಲಕಟ್ಟೆ ಗ್ರಾಮದ ಚಂದ್ರಪ್ಪ ಖಾಸಗಿ ಕಂಪನಿಯ ಉದ್ದೋಗಿಯಾಗಿದ್ದು, ದಾವಣಗೆರೆ ಆರ್‌ಟಿಒ ಕಚೇರಿ ಸಮೀಪದ ಮನೆಯಲ್ಲಿ ವಾಸವಿದ್ದರು. ಗುರುವಾರ ರಜೆ ಇದ್ದುದರಿಂದ ವಿಹಾರಕ್ಕೆಂದು ಕಾರಿನಲ್ಲಿ ಪತ್ನಿ, ಇಬ್ಬರು ಮಕ್ಕಳ ಜೊತೆ ದೇವರ ಬೆಳಕೆರೆ ಪಿಕಪ್ ಜಲಾಶಯಕ್ಕೆ ಬಂದಿದ್ದರು.

ಮೂವರೂ ದಡದಲ್ಲಿ ಕುಳಿತು ಊಟ ಮಾಡಿದ್ದು, ನಂತರ ಕೈತೊಳೆಯಲು ನೀರಿನ ಬಳಿ ಹೋದ ಶೌರ್ಯ ಸಾಯಿ ಮತ್ತು ಆತ್ರೇಯ ಜಾರಿ ನೀರಿನ ಮಡುವಿಗೆ ಬಿದ್ದಿದ್ದಾರೆ. ಮುಳುಗುತ್ತಿರುವ ಮಕ್ಕಳನ್ನು ರಕ್ಷಿಸಲು ಹೋದ ಚಂದ್ರಪ್ಪ ಚಿಕ್ಕ ಮಗ ಆತ್ರೇಯನನ್ನು ದಡಕ್ಕೆ ತಳ್ಳಿ, ಶೌರ್ಯ ಸಾಯಿಯ ಬಳಿ ತೆರಳಿದ್ದು, ಇಬ್ಬರೂ ನೀರಿನಲ್ಲಿ ಮುಳುಗಿದ್ದಾರೆ.

ನಂತರ ಗ್ರಾಮಸ್ಥರು ಚಂದ್ರಪ್ಪನ ಶವ ಪತ್ತೆ ಹಚ್ಚಿ ಹಚ್ಚಿದ್ದು, ದಾವಣಗೆರೆ ಅಗ್ನಿಶಾಮಕ ದಳದ ಸಿಬ್ಬಂದಿ ಚಂದ್ರಪ್ಪನ ಶವ ಹುಡುಕಿ ಹೊರತೆಗೆದಿದ್ದಾರೆ.

Advertisement

ಹರಿಹರ ಗ್ರಾಮಾಂತರ ಠಾಣೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳದಲ್ಲಿದ್ದರು. ಚಂದ್ರಪ್ಪನವರ ಪತ್ನಿ ಅನುಪಮಾ ಸೇರಿದಂತೆ ಸಂಬಂಧಿಕರ ರೋಧನ ಮುಗಿಲು ಮುಟ್ಟಿತ್ತು. ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next