Advertisement

ದಾವಣಗೆರೆ ಜಿಲ್ಲೆಯಲ್ಲಿ 362 ಹೊಸ ಕೋವಿಡ್ ಪ್ರಕರಣ ಪತ್ತೆ, 326 ಮಂದಿ ಗುಣಮುಖ

09:13 PM May 12, 2021 | Team Udayavani |

ದಾವಣಗೆರೆ: ಜಿಲ್ಲೆಯಲ್ಲಿ ಬುಧವಾರ ಕೊರೊನಾದಿಂದ 326 ಮಂದಿ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

Advertisement

ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 204, ಹರಿಹರದಲ್ಲಿ 29, ಜಗಳೂರಿನಲ್ಲಿ 10, ಚನ್ನಗಿರಿ ಯಲ್ಲಿ 27, ಹೊನ್ನಾಳಿಯಲ್ಲಿ 43 ಹಾಗೂ ಹೊರ ಜಿಲ್ಲೆಯ 13 ಜನ ಒಳಗೊಂಡಂತೆ 326 ಸೋಂಕಿತರು ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ 362 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 193, ಹರಿಹರದಲ್ಲಿ 41, ಜಗಳೂರಿನಲ್ಲಿ 4, ಚನ್ನಗಿರಿಯಲ್ಲಿ 61, ಹೊನ್ನಾಳಿಯಲ್ಲಿ 53 ಹಾಗೂ ಹೊರ ಜಿಲ್ಲೆಯ 10 ಜನರು ಒಳಗೊಂಡಂತೆ 362 ಜನರಲ್ಲಿ ಮಹಾಮಾರಿ ಕೊರೊನಾ ಪತ್ತೆಯಾಗಿದೆ.

ಕೊರೊನಾದಿಂದ ಒಬ್ಬರು ಮೃತಪಟ್ಟಿದ್ದಾರೆ. ಒಬ್ಬರ ಸಾವಿನಿಂದ ಜಿಲ್ಲೆಯಲ್ಲಿ ಈವರೆಗೆ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 308 ಕ್ಕೆ ಏರಿದೆ. ದಾವಣಗೆರೆಯ ಸರಸ್ವತಿ ಬಡಾವಣೆಯ 56 ವರ್ಷದ ವೃದ್ಧ ಮೃತಪಟ್ಟವರು.

ಇದನ್ನೂ ಓದಿ :ಎರಡನೇ ಲಸಿಕೆ ಪಡೆಯುವವರಿಗೆ ಮೊಬೈಲ್ ಮೂಲಕ ಸಂದೇಶ : ಉಡುಪಿ ಜಿಲ್ಲಾಡಳಿತದಿಂದ ಕ್ರಮ

Advertisement

ಕಳೆದ ವರ್ಷ ಕೊರೊನಾ ಪ್ರಾರಂಭದಿಂದ ದಾವಣಗೆರೆ ತಾಲೂಕಿನಲ್ಲಿ 17319, ಹರಿಹರದಲ್ಲಿ 4313, ಜಗಳೂರಿನಲ್ಲಿ 1535, ಚನ್ನಗಿರಿಯಲ್ಲಿ 2960, ಹೊನ್ನಾಳಿಯಲ್ಲಿ 3485, ಹೊರ ಜಿಲ್ಲೆಯ 867 ಜನರು ಸೇರಿದಂತೆ ಈವರೆಗೆ ಒಟ್ಟು 30,479 ಜನರು ಸೋಂಕಿಗೆ ಒಳಗಾಗಿದ್ದಾರೆ.

ಕೊರೊನಾದಿಂದ ದಾವಣಗೆರೆ ತಾಲೂಕಿನಲ್ಲಿ 15306, ಹರಿಹರದಲ್ಲಿ 3864, ಜಗಳೂರಿನಲ್ಲಿ 1353, ಚನ್ನಗಿರಿಯಲ್ಲಿ 2594, ಹೊನ್ನಾಳಿಯಲ್ಲಿ 3078, ಹೊರ ಜಿಲ್ಲೆಯ 733 ಜನರು ಸೇರಿದಂತೆ 26,928 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 3243 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯ ವಿವಿಧ ಆಸ್ಪತ್ರೆಯಲ್ಲಿ 831 ಸೋಂಕಿತರು ಸಾಮಾನ್ಯ, 694 ಸೋಂಕಿತರು ಆಕ್ಸಿಜನ್, 41 ಸೋಂಕಿತರು ಎಚ್‌ಎಫ್‌ಎನ್‌ಸಿ, 65 ಸೋಂಕಿತರು ವೆಂಟಿಲೇಟರ್ ರಹಿತ, 39ಸೋಂಕಿತರು ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 2024 ಸೋಂಕಿತರು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. 160 ಜನರು ಕೋವಿಡ್ ಕೇರ್ ಸೆಂಟರ್‌ನಲ್ಲಿ ಇದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next