Advertisement

ದಾವಣಗೆರೆ ಕೋವಿಡ್ ಸೋಂಕಿಗೆ ಓರ್ವ ಸಾವು! 405 ಮಂದಿಯಲ್ಲಿ ಸೋಂಕು ದೃಢ

09:02 PM Sep 15, 2020 | sudhir |

ದಾವಣಗೆರೆ: ಜಿಲ್ಲೆಯಲ್ಲಿ ಮಂಗಳವಾರ 405ಜನರಲ್ಲಿ ಕೋವಿಡ್-19 ವೈರಸ್ ಪತ್ತೆಯಾಗಿದ್ದು 226ಜನರು ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಈ ದಿನ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ.

Advertisement

ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಹಾವೇರಿ ಜಿಲ್ಲೆಯ ಕದರಮಂಡಲಗಿಯ 58ವರ್ಷದ ವ್ಯಕ್ತಿ (ಪಿ-440566) ಮಂಗಳವಾರ ನಗರದ ಸಿಜಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮಂಗಳವಾರ ದಾವಣಗೆರೆ ತಾಲೂಕಿನಲ್ಲಿ 183, ಹರಿಹರ ತಾಲೂಕಿನಲ್ಲಿ 72, ಜಗಳೂರು ತಾಲೂಕಿನಲ್ಲಿ 77, ಚನ್ನಗಿರಿ ತಾಲೂಕಿನಲ್ಲಿ 24, ಹೊನ್ನಾಳಿ ತಾಲೂಕಿನಲ್ಲಿ 45, ಹೊರಜಿಲ್ಲೆಯ ನಾಲ್ಕು ಸೇರಿದಂತೆ ಒಟ್ಟು 405 ಹೊಸ ಪ್ರಕರಣಗಳು ಕಂಡು ಬಂದಿವೆ.

ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 13627ಕ್ಕೆ ಏರಿದೆ. ಈವರೆಗೆ 10648ಜನರು ಗುಣ ಮುಖರಾಗಿದ್ದಾರೆ. 2752ಪ್ರಕರಣಗಳು ಸಕ್ರಿಯವಾಗಿವೆ. ಈವರೆಗೆ ಜಿಲ್ಲೆಯಲ್ಲಿ 227 ಜನರು ಸೋಂಕಿಗೆ ಬಲಿಯಾಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next