Advertisement

ದಾವಣಗೆರೆ ಜಿಲ್ಲೆಯಲ್ಲಿ 574 ಮಂದಿ ಗುಣಮುಖ: 633 ಹೊಸ ಪ್ರಕರಣ

09:06 PM May 24, 2021 | Team Udayavani |

‌ದಾವಣಗೆರೆ: ಜಿಲ್ಲೆಯಲ್ಲಿ ಸೋಮವಾರ 574ಕೊರೋನಾ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈವರೆಗೆ ಜಿಲ್ಲೆಯಲ್ಲಿ 32895ಜನರು ಗುಣಮುಖರಾಗಿದ್ದಾರೆ.

Advertisement

‌ಸೋಮವಾರ ಜಿಲ್ಲೆಯಲ್ಲಿ 633ಹೊಸ ಪ್ರಕರಣಗಳು ಪತ್ತೆಯಾಗಿವೆ. ಮೂರು ಸಾವು ವರದಿಯಾಗಿದ್ದು ಹರಿಹರ, ಬುಳ್ಳಾಪುರದ ಇಬ್ಬರು ಪುರುಷರು ಹಾಗೂ ದಾವಣಗೆರೆಯ ಆಂಜನೇಯ ಬಡಾವಣೆಯ ಮಹಿಳೆ ಮೃತ ಪಟ್ಟಿದ್ದಾರೆ.

‌ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 315, ಹರಿಹರದಲ್ಲಿ 36, ಜಗಳೂರಿನಲ್ಲಿ 45, ಚನ್ನಗಿರಿಯಲ್ಲಿ 84, ಹೊನ್ನಾಳಿಯಲ್ಲಿ 59 ಹಾಗೂ ಹೊರ ಜಿಲ್ಲೆಯ 35 ಜನರು ಒಳಗೊಂಡಂತೆ 574 ಜನರು ಗುಣಮುಖರಾಗಿದ್ದಾರೆ.

ಇದನ್ನೂ ಓದಿ :ಯಾಸ್‌ ಚಂಡಮಾರುತದ ಪ್ರಭಾವ: ಕೇರಳದಲ್ಲಿ ಹೆಚ್ಚು ಮಳೆ :ಏಳು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ 

‌ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 436, ಹರಿಹರದಲ್ಲಿ 86, ಜಗಳೂರಿನಲ್ಲಿ 21, ಚನ್ನಗಿರಿಯಲ್ಲಿ 52, ಹೊನ್ನಾಳಿಯಲ್ಲಿ 28 ಹಾಗೂ ಹೊರ ಜಿಲ್ಲೆಯ 10 ಜನ ಒಳಗೊಂಡಂತೆ 633 ಜನರಲ್ಲಿ ಹೊಸದಾಗಿ ಕೊರೊನಾ ಪತ್ತೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 4508ಸಕ್ರಿಯ ಪ್ರಕರಣಗಳಿವೆ. ಈವರೆಗೆ ಕೊರಾನಾದಿಂದ 332ಜನರು ಮೃತಪಟ್ಟಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next