Advertisement

Davanagere; ಬಿಸಿ ಸಾರು ಬಿದ್ದು ಗಾಯಗೊಂಡಿದ್ದ 4ನೇ ತರಗತಿ ಬಾಲಕ ಸಾವು

01:31 PM Nov 03, 2023 | Team Udayavani |

ದಾವಣಗೆರೆ: ಆಕಸ್ಮಿಕವಾಗಿ ಮೈ‌ಮೇಲೆ ಬಿಸಿ ಸಾರು ಬಿದ್ದು ಗಾಯಗೊಂಡಿದ್ದ ಬಾಲಕ ಮೃತಪಟ್ಟ ಘಟನೆ ಚನ್ನಗಿರಿ ತಾಲೂಕಿನ ಯಲೋದಹಳ್ಳಿಯಲ್ಲಿ ನಡೆದಿದೆ.

Advertisement

ಗ್ರಾಮದ ಹನುಮಂತಪ್ಪ ಎಂಬುವರ ಪುತ್ರ ಸಮರ್ಥ್ ಮೃತಪಟ್ಟ ಬಾಲಕ. ಯಲೋದಹಳ್ಳಿ ಗ್ರಾಮದಲ್ಲಿ ಕಳೆದ ಎಂಟು ದಿನದ ಹಿಂದೆ ದೇವರ ಕಾರ್ಯಕ್ರಮದ ಸಂದರ್ಭದಲ್ಲಿ ಊಟದ ನಂತರ ಪಕ್ಕದಲ್ಲಿರುವ ಅಜ್ಜಿಯ ಮನೆಗೆ ಸಾರು ತೆಗೆದುಕೊಂಡು ಹೋಗವಾಗ ಅಕಸ್ಮಾತ್ತಾಗಿ ಸಮರ್ಥ ಮೈ ಮೇಲೆ ಬಿದ್ದಿತ್ತು.

ಇದನ್ನೂ ಓದಿ:Shimoga; ನಮ್ಮಲ್ಲಿ ಹೈಕಮಾಂಡ್ ‌ಇದೆ. ಎಲ್ಲವನ್ನೂ ಅದೇ ನೋಡಿಕೊಳ್ಳುತ್ತದೆ: ಮಧು ಬಂಗಾರಪ್ಪ

ಏನೂ ಆಗುವುದಿಲ್ಲ ಎಂದು ಪೋಷಕರು ಸುಮ್ಮನಾಗಿದ್ದರು. ಗುರುವಾರ ತೀವ್ರ ನೋವು ಕಾಣಿಸಿಕೊಂಡಾಗ ದಾವಣಗೆರೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಸಮರ್ಥ್ ಗುರುವಾರ ರಾತ್ರಿ ಸಾವನ್ನಪ್ಪಿದ್ದಾನೆ.

ಮೃತ ಸಮರ್ಥ್ ಯಲೋದಹಳ್ಳಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದನು. ಸಮರ್ಥ ಮೈ ಮೇಲೆ ಸಾರು ಬೀಳಿಸಿಕೊಂಡು ಗಾಯಗೊಂಡಿದ್ದರೂ ಸಹ ದಿನಾಲು ಗೆಳೆಯರ ಜೊತೆ ಆಟವಾಡುವುದು, ಶಾಲೆಗೆ ಹೋಗುವುದು ಮಾಡುತ್ತಿದ್ದ. ಆದರೆ, ಗುರುವಾರ ತುಂಬಾ ನೊವು ಕಾಣಸಿ ಕೊಂಡ ಕಾರಣ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆಗೆ ದಾಖಲು ಮಾಡಿದ್ದೆವು. ಆದರೆ, ಉಳಿಯಲಿಲ್ಲ ಎಂದು ತಂದೆ ಹನುಮಂತಪ್ಪ ಮಾಹಿತಿ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next