Advertisement

Bharat Ratna ಸುದ್ದಿ ಕೇಳಿ ಭಾವುಕರಾದ ಅಡ್ವಾಣಿ ; ವಿಡಿಯೋ ನೋಡಿ

02:18 PM Feb 03, 2024 | Team Udayavani |

ಹೊಸದಿಲ್ಲಿ: ಭಾರತ ಸರಕಾರ ಭಾರತ ರತ್ನ ಘೋಷಿಸಿದ ಸುದ್ದಿಯನ್ನು ಕೇಳಿ ಹಿರಿಯ ಬಿಜೆಪಿ ನಾಯಕ ಎಲ್‌ಕೆ ಅಡ್ವಾಣಿ ಅವರು ಭಾವನಾತ್ಮಕ ಕ್ಷಣಗಳಿಗೆ ಜಾರಿದ್ದು, ಆನಂದ ಭಾಷ್ಪ ಸುರಿಸಿದ್ದಾರೆ. ಪುತ್ರಿ ಪ್ರತಿಭಾ ಅಡ್ವಾಣಿ ಅವರು ತಂದೆಗೆ ಸಿಹಿತಿನ್ನಿಸಿ ಅಪ್ಪಿಕೊಂಡು ಸಂಭ್ರಮ ಅನುಭವಿಸಿದರು.

Advertisement

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪ್ರತಿಭಾ ಅಡ್ವಾಣಿ ” ಅಡ್ವಾಣಿ ಅವರು ತುಂಬಾ ಭಾವನಾತ್ಮಕ ಕ್ಷಣವನ್ನು ಅನುಭವಿಸುತ್ತಿದ್ದಾರೆ. ಅವರು ಮಿತಭಾಷಿ. ಅವರ ಕಣ್ಣಲ್ಲಿ ನೀರು ಬಂತು. ಅವರು ತಮ್ಮ ಇಡೀ ಜೀವನವನ್ನು ರಾಷ್ಟ್ರದ ಸೇವೆಗೆ ಮುಡಿಪಾಗಿಟ್ಟ ಸಂತೋಷ ಮತ್ತು ತೃಪ್ತಿಯನ್ನು ಹೊಂದಿದ್ದಾರೆ. ನಾವು ತುಂಬಾ ಸಂತೋಷವಾಗಿದ್ದೇವೆ ಎಂದಿದ್ದಾರೆ.

ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಸಿಕ್ಕಿರುವುದಕ್ಕೆ ಇಡೀ ಕುಟುಂಬಕ್ಕೆ ಮತ್ತು ನನಗೆ ತುಂಬಾ ಸಂತೋಷವಾಗಿದೆ. ತಂದೆಯವರಿಗೂ ತುಂಬಾ ಖುಷಿಯಾಗಿದೆ.ಜೀವನದ ಇಳಿ ವಯಸ್ಸಿನಲ್ಲಿ ಪ್ರಶಸ್ತಿಯನ್ನು ನೀಡುತ್ತಿರುವುದಕ್ಕೆ ಅವರು ಪ್ರಧಾನಿ ಹಾಗೂ ದೇಶದ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ ಎಂದರು.

ರಾಮ ಮಂದಿರ ತಂದೆಯ ಜೀವಿತಾವಧಿಯಲ್ಲಿ ಸಾಧ್ಯವಾಯಿತು : ಜಯಂತ್ ಅಡ್ವಾಣಿ

Advertisement

ಅಡ್ವಾಣಿ ಅವರ ಪುತ್ರ ಜಯಂತ್ ಅಡ್ವಾಣಿ ಅವರು ಪ್ರತಿಕ್ರಿಯಿಸಿ, ”ಇದು ನಮ್ಮ ಕುಟುಂಬ ಮತ್ತು ದೇಶದ ಎಲ್ಲರಿಗೂ ಬಹಳ ಸಂತೋಷದ ವಿಷಯ. ರಾಮಮಂದಿರ ಆಂದೋಲನ ಮತ್ತು ಪ್ರಾಣಪ್ರತಿಷ್ಠೆಯಲ್ಲಿ ಬಿಜೆಪಿ ನಾಯಕರ ಪಾತ್ರದ ಕುರಿತು ಅವರು ಹೇಳುತ್ತಾರೆ,ಇಂದು ದೇವಸ್ಥಾನವು ನಮ್ಮ ಮುಂದಿದೆ ಮತ್ತು ಇದು ಅವರ ಜೀವಿತಾವಧಿಯಲ್ಲೇ  ಸಾಧ್ಯವಾಯಿತು. ಹಾಗಾಗಿ ನಾವು ತುಂಬಾ ಸಂತೋಷವಾಗಿದ್ದೇವೆ” ಎಂದರು.

Advertisement

Udayavani is now on Telegram. Click here to join our channel and stay updated with the latest news.

Next