Advertisement

Actor Darshan: ಮನೆಯೂಟ ಕೋರಿ ದರ್ಶನ್‌ ಕೋರ್ಟ್ ಗೆ ಬರೆದ ಪತ್ರ ವೈರಲ್‌

10:58 AM Jul 31, 2024 | Team Udayavani |

ಬೆಂಗಳೂರು: ರೇಣುಕಸ್ವಾಮಿ  ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್‌ ಮನೆ ಊಟ ಕೋರಿ 24ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶರು, ಕಾರಾಗೃಹ ಡಿಜಿಪಿ, ಜೈಲಿನ ವೈದ್ಯಾಧಿಕಾರಿಗಳು, ಅಧೀಕ್ಷಕರಿಗೆ ಪತ್ರ ಬರೆದಿದ್ದು, ಪತ್ರ ವೈರಲ್‌ ಆಗಿದೆ.

Advertisement

ಜೈಲಿನಲ್ಲಿ ನಾನು ವಿಚಾರಣಾಧಿನ ಕೈದಿ ಆಗಿದ್ದೇನೆ. ಮೂರು ತಿಂಗಳ ಹಿಂದೆ ನನಗೆ ಮೂಳೆ ಸಂಬಂಧಿಸಿದ ಆಪರೇಷನ್‌ ಆಗಿದೆ. ಹೀಗಾಗಿ ನಾನು ನಿತ್ಯ ಕೆಲಸದ ನಿಮಿತ್ತ ಕಸರತ್ತು ನಡೆಸುತ್ತಿದ್ದು, ನನ್ನ ದೇಹಕ್ಕೆ ಪ್ರೋಟೀನ ಡಯಟ್‌ ಅವಶ್ಯಕತೆ ಇದೆ. ಜೈಲಿಗೆ ಬಂದ ದಿನದಿಂದ ನಾನು ಜೈಲಿನಲ್ಲಿ ನೀಡುತ್ತಿರುವ ಆಹಾರವನ್ನು ಸೇವಿಸುತ್ತಿದ್ದೇನೆ. ಅದರಿಂದ ನನ್ನ ಆರೋಗ್ಯ ಮತ್ತು ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬಿರುತ್ತಿದೆ. ನನ್ನ ದೈಹಿಕ ಆರೋಗ್ಯ ಕಾಪಾಡಿ ಕೊಳ್ಳಲು ಜೈಲಿನಲ್ಲಿ ದೊರೆಯುವ ಆಹಾರದ ಜತೆಗೆ ಹೆಚ್ಚಿನ ಪ್ರೋಟೀನ್‌ ಆಹಾರ ನೀಡಬೇಕು. ಆದರೆ ಜೈಲಿನಲ್ಲಿ ನನಗೆ ಬೇಕಾದ ಆಹಾರದ ಕೊರತೆ ಇದ್ದು, ಸುಮಾರು 10 ಕೆ.ಜಿ. ತೂಕ ಕಡಿಮೆ ಆಗಿದ್ದೇನೆ. ಅದರಿಂದ ನನಗೆ ಮನೆ ಊಟದ ವ್ಯವಸ್ಥೆ ಮಾಡಕೊಡುವಂತೆ ಮನವಿ ಮಾಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next