Advertisement

ಕಿಸ್ಮತ್‌ಗೆ ದರ್ಶನ್‌, ಶ್ರೀಮುರಳಿ ಸಾಥ್‌

11:24 AM Nov 28, 2018 | |

ನಟ ವಿಜಯರಾಘವೇಂದ್ರ ಮೊದಲ ಬಾರಿಗೆ ನಿರ್ಮಿಸಿ, ನಿರ್ದೇಶಿಸಿರುವ “ಕಿಸ್ಮತ್‌’ ಚಿತ್ರಕ್ಕೆ ದರ್ಶನ್‌ ಸಾಥ್‌ ನೀಡುತ್ತಿದ್ದಾರೆ. ಕಳೆದ ವಾರ ಬಿಡುಗಡೆಯಾದ “ಕಿಸ್ಮತ್‌’ ಚಿತ್ರವನ್ನು ವಿಜಯರಾಘವೇಂದ್ರ ಚಿತ್ರರಂಗದ ಒಂದಷ್ಟು ಮಂದಿಗೆ ವಿಶೇಷ ಪ್ರದರ್ಶನ ಏರ್ಪಡಿಸಿದ್ದರು. ಚಿತ್ರ ಬಿಡುಗಡೆ ನಂತರ ಚಿತ್ರದ ಬಗ್ಗೆ ಒಳ್ಳೆಯ ಮೆಚ್ಚುಗೆ ಕೇಳಿ ಬಂದಿತ್ತು.

Advertisement

ಅಂಬರೀಶ್‌ ಅವರ ನಿಧನದ ಹಿನ್ನೆಲೆಯಲ್ಲಿ ಚಿತ್ರಮಂದಿರಗಳು ಸ್ವ-ಇಚ್ಛೆಯಿಂದ ಬಂದ್‌ ಮಾಡುವ ಮೂಲಕ ಗೌರವ ಸಲ್ಲಿಸಿದ್ದವು. ಈಗ ಪುನಃ ಚಿತ್ರಮಂದಿರಗಳು ಕಾರ್ಯನಿರ್ವಹಿಸುತ್ತಿವೆ. ವಿಜಯರಾಘವೇಂದ್ರ ಮೊದಲ ಬಾರಿಗೆ ನಿರ್ದೇಶಿಸಿರುವ “ಕಿಸ್ಮತ್‌’ ಚಿತ್ರದ ಬಗ್ಗೆ ಸ್ವತಃ ದರ್ಶನ್‌ ಅವರೇ, “ಚಿತ್ರವನ್ನು ಯಾವಾಗ ತೋರಿಸುತ್ತೀಯ’ ಎಂಬ ಮಾತಿಗೆ, ವಿಜಯರಾಘವೇಂದ್ರ ಅವರು ಶುಕ್ರವಾರ ಚಿತ್ರ ತೋರಿಸುವುದಾಗಿ ಹೇಳಿದ್ದಾರೆ.

ಹಾಗಾಗಿ ಓರಿಯನ್‌ ಮಾಲ್‌ನಲ್ಲಿ ಶುಕ್ರವಾರ ಸಂಜೆ 7.30 ರ ಪ್ರದರ್ಶನಕ್ಕೆ ದರ್ಶನ್‌ ಆಗಮಿಸಿ ವೀಕ್ಷಣೆ ಮಾಡಲಿದ್ದಾರೆ. ಇನ್ನು, ಶ್ರೀಮುರಳಿ ಅವರು ಚಿತ್ರೀಕರಣದಲ್ಲಿ ಬಿಝಿಯಾಗಿದ್ದರಿಂದ “ಕಿಸ್ಮತ್‌’ ವೀಕ್ಷಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಶುಕ್ರವಾರ ಅವರೂ ಸಹ ಸಿನಿಮಾ ನೋಡಲಿದ್ದಾರೆ. ಇನ್ನು ಪುನೀತ್‌ರಾಜ್‌ಕುಮಾರ್‌ ಸಹ ಚಿತ್ರ ನೋಡಿ ಆ ಬಗ್ಗೆ ಮಾತನಾಡುವುದಾಗಿಯೂ ಹೇಳಿದ್ದಾರೆ’ ಎಂದು ವಿಜಯರಾಘವೇಂದ್ರ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next