Advertisement

ತುಳಸಿಗೇರಿ ಹನಮಂತದೇವರ ದರ್ಶನ

10:23 AM Jun 09, 2020 | Suhan S |

ಕಲಾದಗಿ: ಕೋವಿಡ್‌-19 ಹರಡುವಿಕೆ ತಡೆಗಟ್ಟಲು ಲಾಕ್‌ ಡೌನ್‌ ಹಾಗೂ ಸರಕಾರದ ಆದೇಶದಂತೆ ಕಳೆದ 81 ದಿನದಿಂದ ಭಕ್ತರ ದರ್ಶನಕ್ಕೆ ಬಂದ್‌ ಆಗಿದ್ದ ತುಳಸಿಗೇರಿ ಶ್ರೀ ಮಾರುತೇಶ್ವರ ದೇವಾಲಯ ಸೋಮವಾರ ಬೆಳಗ್ಗೆಯಿಂದ ಸಾರ್ವಜನಿಕ ಭಕ್ತರ ದರ್ಶನಕ್ಕೆ ಬಾಗಿಲು ತೆರೆದಿದ್ದು ನೂರಾರು ಭಕ್ತರು ದೇವರ ದರ್ಶನ ಪಡೆದರು.

Advertisement

ಭಕ್ತ ಗಣಕ್ಕೆ ದೇವರ ದರ್ಶನಕ್ಕೆ ತಾಲೂಕಾಡಳಿತ ಸರ್ವ ಸಿದ್ಧತೆಯನ್ನು ಮಾಡಿಕೊಂಡು ದರ್ಶನ ಭಾಗ್ಯ ಕಲ್ಪಿಸಿದಕ್ಕೆ ಭಕ್ತ ಸಮುದಾಯ ಸಂತಸ ವ್ಯಕ್ತ ಪಡಿಸಿದೆ. ಕಂದಾಯ ಇಲಾಖೆ ಸಿಬ್ಬಂದಿ ಭಕ್ತರಿಗೆ ಸ್ಯಾನಿಟೈಸರ್‌ಹಾಕಿ, ಸರಿಯಾಗಿ ಮಾಸ್ಕ್ ಧರಿಸಲು ಹೇಳಿ, ಥರ್ಮಲ್‌ ಸ್ಕ್ರೀನಿಂಗ್‌ ಹಾಗೂ ಹೆಸರು, ಮೊಬೈಲ್‌ ನಂಬರ್‌ ನೋಂದಣಿ ಮಾಡಿಕೊಂಡು ಒಳ ಪ್ರವೇಶಿಸಲು ಅನುಮತಿ ನೀಡಿದರು. ವೃತ್ತಾಕಾರದಲ್ಲಿಯೇ ಸರದಿ ಸಾಲಿನಲ್ಲಿ ಮುಂದೆ ಸಾಗಿ ದೇವರ ದರ್ಶನ ಪಡೆದು ಬರಲು ಸೂಚನೆಗಳನ್ನು ನೀಡಿದರು. ಭಕ್ತರು ಮಾರ್ಗಸೂಚಿ ಪಾಲನೆ ಮಾಡುತ್ತಾ ದೇವರ ದರ್ಶನ ಪಡೆದರು, ಬೆಳಿಗ್ಗೆ 7ರಿಂದ ಸಂಜೆ 7ರವರೆಗೂ 459 ಜನ ಭಕ್ತರು ಹನಮಪ್ಪನ ದರ್ಶನ ಪಡೆದಿದ್ದಾರೆ ಎಂದು ಕಂದಾಯ ಇಲಾಖೆ ಸಿಬ್ಬಂದಿ ತಿಳಿಸಿದ್ದಾರೆ.

ಬೆಳಗ್ಗೆ ದೇವಾಲಯಕ್ಕೆ ಭೇಟಿ ನೀಡಿದ ಉಪತಹಶೀಲ್ದಾರ್‌ ಪಿ.ಬಿ.ಸಿಂಗ್ರಿ ಮತ್ತು ಕಂದಾಯ ನಿರೀಕ್ಷಕ ಆರ್‌.ಆರ್‌.ಕುಲಕರ್ಣಿ ದೇವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಕಂದಾಯ ಇಲಾಖೆ ಸಿಬ್ಬಂದಿಗೆ ಕೆಲವು ಅಗತ್ಯ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next