Advertisement

Darbethadka: ಹೃದಯಾಘಾತದಿಂದ ಸಾವು ಮರಣೋತ್ತರ ವರದಿಯಲ್ಲ ಉಲ್ಲೇಖ

11:18 PM May 24, 2024 | Team Udayavani |

ಪುತ್ತೂರು: ಒಳಮೊಗ್ರು ಗ್ರಾಮದ ದರ್ಬೆತ್ತಡ್ಕದಲ್ಲಿ ಮಂಗಳವಾರ ಸಂಜೆ ಕೂಲಿ ಕಾರ್ಮಿಕನೋರ್ವ ಮೃತಪಟ್ಟ ಪ್ರಕರಣದಲ್ಲಿ ಸಾವಿಗೆ ಸಿಡಿಲು ಬಡಿತವೇ ಕಾರಣ ಎಂಬ ಪ್ರಚಾರ ಪಡೆದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಗುರುವಾರ ಅಧಿಕೃತ ವರದಿ ಬಂದಿದ್ದು ಸಾವಿಗೆ ಹೃದಯಾಘಾತ ಕಾರಣ ಎನ್ನುವುದು ದೃಢಪಟ್ಟಿದೆ.

Advertisement

ಕೂಲಿ ಕಾರ್ಮಿಕ ದರ್ಬೆತ್ತಡ್ಕ ನಿವಾಸಿ ಪಿ. ಬಾಬು (55) ಮೃತಪಟ್ಟ ವ್ಯಕ್ತಿ. ಮನೆ ಪರಿಸರದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಮೃತಪಟ್ಟಿದ್ದರು. ಸಿಡಿಲಿನ ಆಘಾತದಿಂದ ಮೃತಪಟ್ಟಿದ್ದಾರೆ ಎಂಬ ಸುದ್ದಿ ತಿಳಿದು ತಹಶಿಲ್ದಾರ್‌ ಕುಂಞಿ ಅಹ್ಮದ್‌ ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದರು.

ಸಿಡಿಲಾಘಾತದ ಸಾವು ಅನ್ನುವ ಬಗ್ಗೆ ಸಾಕ್ಷಿ ಇಲ್ಲದ ಕಾರಣ ಮರಣೋತ್ತರ ಪರೀಕ್ಷೆಗೆ ನಿರ್ಧರಿಸಲಾಗಿತ್ತು. ಬುಧವಾರ ಪುತ್ತೂರು ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಮೇ 23ರಂದು ಮರಣೋತ್ತರ ವರದಿ ಬಂದಿದ್ದು, ಸಾವಿಗೆ ಹೃದಯಾಘಾತ ಕಾರಣ ಎಂದು ಉಲ್ಲೇಖಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next