Advertisement

ದ್ವಿಚಕ್ರ ವಾಹನಗಳ ಪೆಟ್ರೋಲ್ ಕಳ್ಳತನ: ಅಳಲು ತೋಡಿಕೊಳ್ಳುತ್ತಿರುವ ಸ್ಥಳೀಯರು

07:16 PM Oct 24, 2021 | Team Udayavani |

ದಾಂಡೇಲಿ:  ನಗರದ ಅಲ್ಲಲ್ಲಿ ಪ್ರತಿನಿತ್ಯ ನಿಲ್ಲಿಸಿಟ್ಟಿದ್ದ ದ್ವಿಚಕ್ರ ವಾಹನಗಳ ಪೆಟ್ರೋಲ್ ಕದಿಯುವ ಜಾಲವೊಂದಿದ್ದು, ಈ ಜಾಲದ ಕಳ್ಳತನ ಕೃತ್ಯದಿಂದ ನಗರದ ಜನತೆ ಬಸವಳಿದಿದ್ದಾರೆ.

Advertisement

ಅದೇ ರೀತಿ ಭಾನುವಾರ ನಸುಕಿನ ವೇಳೆಯಲ್ಲಿ ನಗರದ  14ನೇ ಬ್ಲಾಕ್ ಪ್ರದೇಶದ ಶೇಖರ್ ಆಸ್ಪತ್ರೆಯ ಪ್ರದೇಶ ವ್ಯಾಪ್ತಿಯಲ್ಲಿ ನಿಲ್ಲಿಸಿಟ್ಟಿದ್ದ ನಾಲ್ಕು ದ್ವಿಚಕ್ರ ವಾಹನಗಳ ಪೆಟ್ರೋಲನ್ನು ಕದ್ದಿರುವ ಘಟನೆ ನಡೆದಿದೆ.

ಬಹುತೇಕ ಹೆಚ್ಚಿನ ದಿನಗಳಲ್ಲಿ ಇಲ್ಲಿ ಪೆಟ್ರೋಲ್ ಕಳ್ಳತನವಾಗುತ್ತಿದ್ದು, ಇಂದು ನಸುಕಿನ ವೇಳೆಯಲ್ಲಿ ಬಹುತೇಕ ದ್ವಿಚಕ್ರ ವಾಹನಗಳ ಪೆಟ್ರೋಲ್ ಕಳ್ಳತನವಾಗಿರುವುದರ ಬಗ್ಗೆ ಸ್ಥಳೀಯರು ನಗರ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ.

ತಕ್ಷಣವೆ ಸ್ಥಳಕ್ಕಾಗಮಿಸಿದ ನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿ, ಹತ್ತಿರದಲ್ಲಿದ್ದ ಸಿಸಿ ಕ್ಯಾಮೆರದ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಸಿಸಿ ಕ್ಯಾಮೆರಾದಲ್ಲಿ ಕಳ್ಳರು ಪೆಟ್ರೋಲ್ ಕದಿಯಲು ಬರುತ್ತಿರುವುದು ಸೆರೆಯಾಗಿದೆ. ಒಟ್ಟಿನಲ್ಲಿ ಪೆಟ್ರೋಲ್ ಕದಿಯುವ ಪುಂಡ ಪೊಕೋರಿಗಳನ್ನು ಶೀಘ್ರವಾಗಿ ಹಿಡಿದು ಪೊಲೀಸ್ ರುಚಿ ತೋರಿಸಬೇಕೆಂಬ ಮನವಿಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next