Advertisement

Dandeli: ಅಪರಿಚಿತ ವಾಹನ ದ್ವಿಚಕ್ರ ವಾಹನಕ್ಕೆ ಡಿಕ್ಕಿ; ಸವಾರ ಗಂಭೀರ

01:15 PM Oct 20, 2024 | Team Udayavani |

ದಾಂಡೇಲಿ: ತಾಲೂಕಿನ ಆಲೂರು ಕರ್ಕಾ ಮಧ್ಯೆ ಅಪರಿಚಿತ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿ ದ್ವಿಚಕ್ರ ವಾಹನದ ಸವಾರ ಗಂಭೀರ ಗಾಯಗೊಂಡ ಘಟನೆ ಭಾನುವಾರ(ಅ.20) ಬೆಳಿಗ್ಗೆ ನಡೆದಿದೆ.

Advertisement

ದಾಂಡೇಲಿ ತಾಲೂಕಿನ ಬಡಕಾನಶಿರಡಾದ ನಿವಾಸಿ 46 ವರ್ಷ ವಯಸ್ಸಿನ ವಿಲಾಸ ಅರ್ಜುನ ಧರ್ಮೇಕರ ಎಂಬವರು ಗಂಭೀರ ಗಾಯಗೊಂಡ ದ್ವಿಚಕ್ರ ವಾಹನ ಸವಾರ.

ಇವರು ಭಾನುವಾರ ಬೆಳಿಗ್ಗೆ ಬಡಕಾನಶಿರಡಾದಿಂದ ಕಲಘಟಗಿಗೆ ಹೋಗುತ್ತಿರುವ ಸಂದರ್ಭದಲ್ಲಿ ಆಲೂರು ಕರ್ಕಾ ಮಧ್ಯೆ ಅಪರಿಚಿತ ವಾಹನವೊಂದು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ವಿಲಾಸ ಅರ್ಜುನ ಧರ್ಮೇಕರ ಅವರ ಕಾಲಿಗೆ ಮತ್ತು ಕೈಗೆ ಗಂಭೀರ ಗಾಯವಾಗಿದ್ದು, ದಾಂಡೇಲಿಯ ಸಾರ್ವಜನಿಕ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಗಿದೆ. ಗಂಭೀರ ಗಾಯಗೊಂಡ ಹಿನ್ನಲೆಯಲ್ಲಿ ಹೆಚ್ಚಿನ ಚಿಕಿತ್ಸೆಗೆ ಧಾರವಾಡಕ್ಕೆ ರವಾನಿಸಲಾಗಿದೆ.

ಸಾರ್ವಜನಿಕ ಆಸ್ಪತ್ರೆಗೆ ದಾಂಡೇಲಿ ಗ್ರಾಮೀಣ ಠಾಣೆಯ ಪಿಎಸ್ಐ ಜಗದೀಶ್ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಅಪರಿಚಿತ ವಾಹನವು ಗೂಡ್ಸ್ ಟೆಂಪೋ ಆಗಿದ್ದು, ತರಕಾರಿ ಹೇರಿಕೊಂಡು ದಾಂಡೇಲಿಗೆ ಬರುತ್ತಿತ್ತು ಎಂಬ ಮಾಹಿತಿ ಲಭಿಸಿದ್ದು, ಈ ಬಗ್ಗೆ ಪೋಲಿಸ್ ತನಿಖೆಯಿಂದ ಸ್ಪಷ್ಟ ಮಾಹಿತಿ ಇನ್ನಷ್ಟೇ ಹೊರ ಬರಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next