Advertisement

Dandeli: ಬಸ್ ನಿಲ್ದಾಣದಲ್ಲಿ ತಂಗಿರುವ ಒಂಟಿ ಮಹಿಳೆ… ವಾರಿಸುದಾರರ ಪತ್ತೆಗೆ ಮನವಿ

06:07 PM Sep 27, 2024 | Team Udayavani |

ದಾಂಡೇಲಿ : ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಿನ್ನೆ ಗುರುವಾರ ಮಧ್ಯಾಹ್ನದಿಂದ ಒಂಟಿ ಮಹಿಳೆಯೋರ್ವರು ತಂಗಿದ್ದು, ಈ ಮಹಿಳೆಯ ವಾರಿಸುದಾರರು ಯಾರಾದ್ರೂ ಇದ್ದಲ್ಲಿ ಕೂಡಲೇ ಕರೆದುಕೊಂಡು ಹೋಗುವಂತೆ ಸಾರಿಗೆ ಸಂಸ್ಥೆಯ ಸಾರಿಗೆ ನಿಯಂತ್ರಕರು ಮಾಧ್ಯಮದ ಮೂಲಕ ಶುಕ್ರವಾರ ಮನವಿಯನ್ನು ಮಾಡಿದ್ದಾರೆ.

Advertisement

ಮಹಿಳೆಯನ್ನು ಮಾತನಾಡಿಸಲು ಪ್ರಯತ್ನಿಸಿದಾಗ, ಮಾನಸಿಕ ಅಸ್ವಸ್ಥಳೆಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಒಂದು ಬಾರಿ ತಾನು ಅಂಬಿಕಾನಗರದವಳೆಂದು ಹೇಳುವ ಈ ಮಹಿಳೆ ಬೆಂಗಳೂರಿಗೆ ಹೋಗಬೇಕಾಗಿದ್ದು, ಬಸ್ಸಿಗಾಗಿ ಕಾಯುತ್ತಿದ್ದೇನೆ ಎಂದು ಹೇಳಿದ್ದಾರೆ. ಕೂಡಲೇ ಸಂಬಂಧಪಟ್ಟವರು ಈ ಮಹಿಳೆಯ ಬಗ್ಗೆ ಗಮನಹರಿಸಬೇಕಾಗಿದೆ.

ಇದನ್ನೂ ಓದಿ: Black Magic: ಶಾಲೆಗೆ ಒಳ್ಳೆ ಹೆಸರು ಬರಲೆಂದು 2ನೇ ತರಗತಿ ಬಾಲಕನನ್ನೇ ಬಲಿ ಕೊಟ್ಟ ಶಿಕ್ಷಕರು

Advertisement

Udayavani is now on Telegram. Click here to join our channel and stay updated with the latest news.

Next