Advertisement

ಚಿಕ್ಕಮಗಳೂರಿನ ಕೋವಿಡ್ ಕೇರ್ ಸೆಂಟರ್ ನಲ್ಲಿ ಅಧಿಕಾರಿಗಳ ಸಖತ್ ಡ್ಯಾನ್ಸ್

09:55 AM Jun 06, 2021 | Team Udayavani |

ಚಿಕ್ಕಮಗಳೂರು: ಕೋವಿಡ್ 19 ಸೋಂಕಿತರಾದವರಿಗೆ ಆತ್ಮಸ್ಥೈರ್ಯ ತುಂಬುವುದು ಬಹುಮುಖ್ಯ. ಧೈರ್ಯದಿಂದ ಇದ್ದರೆ ಸೋಂಕು ಎದುರಿಸಲು ಸುಲಭ ಎನ್ನುತ್ತಾರೆ ತಜ್ಞರು. ಹೀಗಾಗಿಯೇ  ನಗರದ ಬೇಲೂರು ರಸ್ತೆಯಲ್ಲಿರುವ ಕೋವಿಡ್ ಸೋಂಕಿತರ ಆರೈಕೆ ಕೇಂದ್ರದಲ್ಲಿ ಎಸಿ, ತಹಶೀಲ್ದಾರರು ಸೇರಿ ಡ್ಯಾನ್ಸ್ ಮಾಡಿ ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು.

Advertisement

ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದ ತಹಶೀಲ್ದಾರ್, ಎಸಿ ಮತ್ತು ಇತರ ಅಧಿಕಾರಿಗಳು ಸೋಂಕಿತರೊಂದಿಗೆ ಮಾತುಕತೆ ನಡೆಸಿದರು. ಬಳಿಕ ಎಸಿ ನಾಗರಾಜ್ ಅವರು ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಡ್ಯಾನ್ಸ್ ಮಾಡಿದರು. ಈ ವೇಳೆ ತಹಶೀಲ್ದಾರ್ ಕಾಂತರಾಜ್ ಅವರು ಕೂಡಾ ಹಾಡು ಹೇಳಿ ನೃತ್ಯ ಮಾಡಿದರು.

ಇದನ್ನೂ ಓದಿ:ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ಜೀವ ಉಳಿಸಿತು14,000 ಕಿ.ಮೀ ದೂರದಿಂದ ಬಂದ ಫೋನ್ ಕರೆ..!

ಎಸಿ, ತಹಶೀಲ್ದಾರರಿಗೆ ಸಾಥ್ ನೀಡಿದ ವಿವಿಧ ಇಲಾಖೆಯ ಅಧಿಕಾರಿಗಳು ಕೂಡಾ ನೃತ್ಯ ಮಾಡಿ ಸೋಂಕಿತರಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಅಷ್ಟೇ ಅಲ್ಲದೆ ಸೋಂಕಿತರ ಬಳಿಯೂ ಅಧಿಕಾರಿಗಳು ಹಾಡು ಹಾಡಿಸಿದರು.  ಶೀಘ್ರದಲ್ಲೇ ಎಲ್ಲರೂ ಗುಣಮುಖರಾಗುತ್ತೀರಿ, ಧೈರ್ಯವಾಗಿರಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next