Advertisement

Hunsur: ಭಾರೀ ಮಳೆಗೆ ಮನೆ ಗೋಡೆ, ಮೇಲ್ಚಾವಣಿ ಹಾನಿ; ನಷ್ಟ

11:23 AM Oct 10, 2023 | Team Udayavani |

ಹುಣಸೂರು: ಭಾರೀ ಮಳೆಗೆ ನಗರದ ಮೂರು ಮನೆಗಳಿಗೆ ಹಾನಿಯಾದ ಘಟನೆ ಬ್ರಾಹ್ಮಣರ ಬಡಾವಣೆಯಲ್ಲಿ ಆ.9ರ ಸೋಮವಾರ ಸಂಜೆ ಸಂಭವಿಸಿದೆ.

Advertisement

ಮದುಸೂಧನ್ ಎಂಬವರು ಮನೆಗೋಡೆ ಬಾಗಶಃ ಬಿದ್ದು ಹೋಗಿದೆ.

ಈ ಮನೆಯ ಪಕ್ಕದ ಕುಮಾರಿ ಎಂಬವರ ಮನೆಯಲ್ಲಿ ಅಡುಗೆ ಮಾಡುತ್ತಿದ್ದ ವೇಳೆಯೇ ಮೇಲ್ಚಾವಣಿ ಕುಸಿದು ಬಿದ್ದಿದ್ದು ಈಕೆ ಹೊರಗೋಡಿ ಬಂದಿದ್ದರಿಂದ ಯಾವುದೇ ಪ್ರಾಣ ಹಾನಿಯಾಗಿಲ್ಲ. ಮನೆಯ ಪಾತ್ರೆ ಸೇರಿದಂತೆ ಪದಾರ್ಥ,ದಿನಸಿ ಸಾಮಗ್ರಿಗಳು ಹಾಳಾಗಿದೆ.

ಇದಕ್ಕೆ ಹೊಂದಿಕೊಂಡಂತಿರುವ ಆರ್.ಆರ್. ಫಾಸ್ಟ್ ಫುಡ್ ಮಾಲಿಕ ಅಶೋಕ್ ಎಂಬವರ ಮನೆ ಮೇಲ್ಚಾವಣಿ ಕುಸಿದು ಬಿದ್ದು, ದಿನಸಿ ಪದಾರ್ಥ, ಗ್ರೈಂಡರ್, ಪಾತ್ರೆಗಳು ನಜ್ಜು ಗುಜ್ಜಾಗಿದ್ದು ಸಾಕಷ್ಟು ನಷ್ಟವಾಗಿದೆ.

ಸಂಕಷ್ಟಕ್ಕೊಳಗಾದ ಮನೆಯವರೆಲ್ಲರೂ ಬಡವರಾಗಿದ್ದು, ತಾಲೂಕು ಆಡಳಿತ ಸೂಕ್ತ ಪರಿಹಾರ ಕಲ್ಪಿಸುವಂತೆ ಬಡಾವಣೆ ನಿವಾಸಿಗಳು ಮನವಿ ಮಾಡಿದ್ದಾರೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next