Advertisement

ಉತ್ತರ ಪ್ರದೇಶ: ಇಬ್ಬರಿಂದ ಅತ್ಯಾಚಾರ; ದಲಿತ ಮಹಿಳೆ ಆತ್ಮಹತ್ಯೆ

12:16 PM Apr 14, 2018 | udayavani editorial |

ಮುಜಫ‌ರನಗರ : ಜಿಲ್ಲೆಯ ರಾಯಪುರ ಗ್ರಾಮದಲ್ಲಿ ಇಬ್ಬರು ಕಾಮಾಂಧರಿಂದ ಅತ್ಯಾಚಾರಕ್ಕೆ ಗುರಿಯಾದ ದಲಿತ ವಿವಾಹಿತೆಯೊಬ್ಬಳು ತನ್ನ ಮನೆಯಲ್ಲಿ  ಸೂರಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. 

Advertisement

ಇಟ್ಟಿಗೆ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ದಲಿತ ಮಹಿಳೆಯು ತನ್ನ ಮೇಲೆ ಅತ್ಯಾಚಾರ ನಡೆದ ಬಗ್ಗೆ  ದೂರು ನೀಡಲು ಪತಿಯ ಜತೆಗೆ ಫ‌ುಗಾನಾ ಪೊಲೀಸ್‌ ಠಾಣೆಗೆ ಹೋಗಿದ್ದಳು. ಆದರೆ ಅಲ್ಲಿನ ಪೊಲೀಸರು ದೂರು ದಾಖಲಿಸಿಕೊಳ್ಳಲು ನಿರಾಕರಿಸಿದ್ದರು. 

ಘಟನೆಗೆ ಸಂಬಂಧಿಸಿ ಪೊಲೀಸ್‌ ಎಸ್‌ಐ ಸುಭಾಷ್‌ ಚಂದ್‌ ಎಂಬವರನ್ನು ಅಮಾನತು ಮಾಡಲಾಗಿದೆ. ಮಹಿಳೆಯ ಬರೆದಿಟ್ಟಿದ್ದ ಡೆತ್‌ ನೋಟ್‌ ಪೊಲೀಸರಿಗೆ ಸಿಕ್ಕಿಲ್ಲ. ಆ ಡೆತ್‌ ನೋಟಿನಲ್ಲಿ ಆಕೆ ಇಬ್ಬರು ವ್ಯಕ್ತಿಗಳು ತನ್ನ ಮೇಲೆ ಅತ್ಯಾಚಾರ ನಡೆಸಿದ್ದುದಾಗಿ ಹೇಳಿದ್ದಾಳೆ. 

ಪೊಲೀಸರು ಇಬ್ಬರೂ ಆರೋಪಿಗಳನ್ನು ಬಂಧಿಸಿದ್ದು ಅವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಮತ್ತು ಲೈಂಗಿಕ ದೌರ್ಜನ್ಯದ ಕೇಸನ್ನು ದಾಖಲಿಸಿದ್ದಾರೆ. ತನಿಖೆ ನಡೆಯುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next