Advertisement

ದಲಿತ ಬಂದ್‌ : ರಾಜಸ್ಥಾನದಲ್ಲಿ 1 ಸಾವು, 26 ಮಂದಿಗೆ ಗಾಯ

06:28 PM Apr 02, 2018 | Team Udayavani |

ಜೈಪುರ : ಎಸ್‌ಸಿ/ಎಸ್‌ಟಿ ಕಾಯಿದೆಯನ್ನು ದುರ್ಬಲಗೊಳಿಸಿರುವ ಸುಪ್ರೀಂ ಕೋರ್ಟ್‌ ಆದೇಶದ ವಿರುದ್ಧ ಇಂದು ನಡೆದ ಭಾರತ್‌ ಬಂದ್‌ ಪ್ರಯುಕ್ತ ರಾಜಸ್ಥಾನದಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆಗೆ ಒಬ್ಬ ವ್ಯಕ್ತಿ ಬಲಿಯಾಗಿ ಇತರ 26 ಮಂದಿ ಗಾಯಗೊಂಡರು. ಗಾಯಾಳುಗಳಲ್ಲಿ 9 ಮಂದಿ ಪೊಲೀಸರೂ ಸೇರಿದ್ದಾರೆ.

Advertisement

ರಾಜಸ್ಥಾನದ ಆಲ್ವಾರ್‌ ಜಿಲ್ಲೆಯ ಖೈರ್‌ತಾಲ್‌ ಗರಿಷ್ಠ  ಹಿಂಸಾತ್ಮಕ ಪ್ರತಿಭಟನೆಯನ್ನು ಕಂಡಿತು. ಹಿಂಸೆಗೆ ಬಲಿಯಾದ 28ರ ತರುಣನನ್ನು ಪವನ್‌ ಜಾತವ್‌ ಎಂದು ಗುರುತಿಸಲಾಗಿದೆ. ಈತ ಮಾಜಿ ಸರಪಂಚರೋರ್ವರ ಮಗ ಎಂದು ಗೊತ್ತಾಗಿದೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

ಉದ್ರಿಕ್ತ ಪ್ರತಿಭಟನಕಾರರು ಪೊಲೀಸರ ಮೇಲೆ ಗುಂಡು ಹಾರಿಸಿದರು; ವಾಹನಗಳಿಗೆ ಮತ್ತು ಪೊಲೀಸ್‌ ಠಾಣೆ ಸ್ಟೋರ್‌ಗೆ ಬೆಂಕಿ ಹಚ್ಚಿದರು; ಆ ಸಂದರ್ಭದಲ್ಲಿ ಪೊಲೀಸರು ಬೇರೆ ಉಪಾಯವಿಲ್ಲದೆ ಫೈರಿಂಗ್‌ ನಡೆಸಿದರು ಎಂದು ಖೈರ್‌ತಾಲ್‌ ಪೊಲೀಸ್‌ ಠಾಣೆ ಅಧಿಕಾರಿ ಜಿತೇಂದ್ರ ಕುಮಾರ್‌ ತಿಳಿಸಿದರು. 

9 ಮಂದಿ ಪೊಲೀಸ್‌ ಗಾಯಾಳುಗಳಲ್ಲಿ ಓರ್ವ ಡಿವೈಎಸ್ಪಿ, ಓರ್ವ ಹೆಡ್‌ ಕಾನ್‌ಸ್ಟೆಬಲ್‌ ಮತ್ತು 6 ಕಾನ್‌ಸ್ಟೆಬಲ್‌ಗ‌ಳು ಸೇರಿದ್ದಾರೆ. ಇವರ ಮೇಲೆ ಪ್ರತಿಭಟಕಾರರು ಕಲ್ಲೆಸೆತ ನಡೆಸಿದ್ದರು ಎಂದು ಜಿತೇಂದ್ರ ಕುಮಾರ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next