Advertisement

ಭ್ರಷ್ಟಾಚಾರ ತನಿಖೆಗೆ ಆಗ್ರಹಿಸಿ ದಲಿತ ಹಿಂದುಳಿದ ಒಕ್ಕೂಟ ಮನವಿ

03:47 PM Apr 14, 2022 | Team Udayavani |

ಸುರಪುರ: ಪಂಚಾಯತ್‌ ರಾಜ್‌, ಲೋಕೋಪ ಯೋಗಿ. ಕೆಬಿಜೆಎನ್‌ಎಲ್‌ ಹಾಗೂ ಇತರೆ ಇಲಾಖೆಯಲ್ಲಿನ ಭ್ರಷ್ಟಾಚಾರ ತನಿಖೆ ಮತ್ತು ಸಂತೋಷ ಪಾಟೀಲ ಹತ್ಮಹತ್ಯೆ ಪ್ರಕರಣ ಸಿಬಿಐಗೆ ವಹಿಸುವಂತೆ ಆಗ್ರಹಿಸಿ ದಲಿತ, ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಒಕ್ಕೂಟದ ಮುಖಂಡರು ನಗರದ ಬಸ್‌ ನಿಲ್ದಾಣ ಹತ್ತಿರದ ಮಡಿವಾಳ ಮಾಚಿದೇವ ವೃತ್ತದ ಬಳಿ ಪ್ರತಿಭಟಿಸಿದರು.

Advertisement

ಈ ವೇಳೆ ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ಗುತ್ತಿಗೆದಾರ ಸಂತೋಷ ಪಾಟೀಲ ಆತ್ಮಹತ್ಯೆಯಿಂದ ಸರಕಾರದ ಭ್ರಷ್ಟಾಚಾರ ಬಯಲಾಗಿದೆ. ಸಚಿವರು ಮತ್ತು ಆಯಾ ಕ್ಷೇತ್ರದಲ್ಲಿನ ಶಾಸಕರು ಕಾಮಗಾರಿಗೆ ಕಮೀಷನ್‌ ಪಡೆಯುತ್ತಿದ್ದಾರೆ ಎನ್ನುವುದಕ್ಕೆ ಸಾಕ್ಷಿ ಸಿಕ್ಕಂತ್ತಾಗಿದೆ. ಈ ಕುರಿತು ತನಿಖೆ ನಡೆಸ ಬೇಕೆಂದು ಒತ್ತಾಯಿಸಿದರು.

ಜಿಲ್ಲೆಯಲ್ಲಿ ಲೋಕೋಪಯೋಗಿ, ಪಂಚಾಯತ ರಾಜ್‌, ಕೆಬಿಜೆಎನ್‌ ಎಲ್‌ ಸೇರಿದಂತೆ ಇತರೆ ಇಲಾಖೆಯಲೂ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಈ ಬಗ್ಗೆ ಕೇಳಿದರೆ ಶಾಸಕರಿಗೆ ಇಂತಿಷ್ಟು ಕೊಡಬೇಕು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದ್ದರಿಂದ ಈ ಎಲ್ಲ ಇಲಾಖೆ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು, ನಿವೃತ್ತ ನ್ಯಾಯಾಧೀಶರ ಸಮಿತಿ ರಚಿಸಿ ಕಾಮಗಾರಿಗಳ ತನಿಖೆ ಮಾಡಿಸಬೇಕು. ಸಂತೋಷ ಆತ್ಮಹತ್ಯೆ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಆಗ್ರಹಿಸಿದರು. ಶಿರಸ್ತೇದಾರ್‌ ಸೋಮನಾಥ ದೊರೆ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next