Advertisement

ದಕ್ಷಿಣ ಕನ್ನಡದಲ್ಲಿ ಸೋಂಕಿತರ ಸಂಖ್ಯೆ ಏರಿಕೆ : ಉಡುಪಿ ಜಿಲ್ಲೆಯಲ್ಲಿ ಗುಣಮುಖರು ಹೆಚ್ಚಳ

10:15 PM May 28, 2021 | Team Udayavani |

ಮಂಗಳೂರು/ಉಡುಪಿ/ಕಾಸರಗೋಡು/ ಮಡಿಕೇರಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಸೋಂಕಿತರ ಸಂಖ್ಯೆಯಲ್ಲಿ (799) ಏರಿಕೆ ಕಂಡಿದೆ. ಗುರುವಾರ 555 ಮಂದಿಗೆ ಸೋಂಕು ತಗಲಿತ್ತು. ಗುಣಮುಖರಾದವರ ಸಂಖ್ಯೆಯಲ್ಲೂ ಇಳಿಮುಖವಾಗಿದೆ. ಕೇವಲ 745 ಮಂದಿ ಗುಣಮುಖರಾಗಿದ್ದರೆ 5 ಮಂದಿ ಮೃತಪಟ್ಟಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ (766) ಇಳಿಮುಖವಾಗಿದ್ದರೆ ಸಾವಿನ ಸಂಖ್ಯೆಯಲ್ಲಿ (4) ಕೊಂಚ ಏರಿಕೆಯಾಗಿದೆ. 835 ಮಂದಿ ಗುಣಮುಖರಾಗಿರುವುದು ಉತ್ತಮ ಬೆಳವಣಿಗೆ.

Advertisement

ಕಾಸರಗೋಡು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಕೊಂಚ ಇಳಿಕೆಯಾಗಿದೆ. 534 ಮಂದಿಗೆ ಸೋಂಕು ದೃಢಪಟ್ಟಿದ್ದರೆ ಹೆಚ್ಚಿನ ಮಂದಿ ಗುಣಮುಖ (580) ರಾಗಿರುವುದು ಒಳ್ಳೆಯ ಅಂಶವಾಗಿದೆ. ಸಾವು ಪ್ರಕರಣದಲ್ಲಿ ಕೊಂಚ ಇಳಿಕೆ (4) ಆಗಿದೆ. ಕೊಡಗು ಜಿಲ್ಲೆಯಲ್ಲೂ ಸೋಂಕಿತರ ಸಂಖ್ಯೆಯಲ್ಲಿ (209) ಇಳಿಕೆಯಾಗಿದೆ. 375 ಮಂದಿ ಗುಣಮುಖರಾಗಿರುವುದು ಉತ್ತಮ ಬೆಳವಣಿಗೆ. ಆದರೆ ಸಾವು ಪ್ರಕರಣದಲ್ಲಿ (5) ಏರಿಕೆಯಾಗಿದೆ.

ಇದನ್ನೂ ಓದಿ :ಕೋವಿಡ್ ರೋಗಿಗಳಿಗೆ ಉತ್ತಮ ಗುಣಮಟ್ಟದ ಚಿಕಿತ್ಸೆ ನೀಡಿ: ಕೋಟ ಸೂಚನೆ

ದ.ಕ. ಜಿಲ್ಲೆಯಲ್ಲಿ ಈವರೆಗೆ ಮಾಸ್ಕ್ ನಿಯಮ ಉಲ್ಲಂಘಿಸಿದ 59,417 ಮಂದಿಯಿಂದ 69,56,217 ರೂ. ದಂಡ ವಿಧಿಸಲಾಗಿದೆ.

7 ಕಡೆ ಕಂಟೈನ್‌ಮೆಂಟ್‌ ವಲಯ
ದಕ್ಷಿಣ ಕನ್ನಡ ಜಿಲ್ಲೆಯ 7 ಕಡೆಗಳಲ್ಲಿ ಶುಕ್ರವಾರ ಕಂಟೈನ್‌ಮೆಂಟ್‌ ವಲಯವನ್ನಾಗಿ ಘೋಷಣೆ ಮಾಡಲಾಗಿದೆ. ಮಂಗಳೂರಿನ 5 ಮತ್ತು ಬಂಟ್ವಾಳದ 2 ಕಡೆಗಳಲ್ಲಿ ಕಂಟೈನ್‌ಮೆಂಟ್‌ ವಲಯವನ್ನಾಗಿ ಘೋಷಣೆ ಮಾಡಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next