Advertisement

 ದಕ್ಷಿಣ ಕನ್ನಡ: ನಿವೇಶನ ಹಂಚಿಕೆಗೆ 149.55 ಎಕ್ರೆ ಲಭ್ಯ

01:45 AM Apr 19, 2022 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿವೇಶನ ರಹಿತರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಒಟ್ಟು 149.55 ಎಕ್ರೆ ಸರಕಾರಿ ಜಮೀನು ಲಭ್ಯವಿದ್ದು ರಾಜೀವ್‌ ಗಾಂಧಿ ವಸತಿ ನಿಗಮದ ಅನುದಾನದೊಂದಿಗೆ ಇದನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ.

Advertisement

ಲಭ್ಯ ಜಮೀನಿನಲ್ಲಿ 2,783 ನಿವೇಶನಗಳನ್ನು ಅಭಿವೃದ್ಧಿಪಡಿಸಿ ವಿತರಿಸಲು ಅವಕಾಶವಿದೆ. 618 ನಿವೇಶನಗಳನ್ನು ಅಭಿವೃದ್ಧಿಪಡಿಸಿ ಅರ್ಹರಿಗೆ ನೀಡಲಾಗಿದೆ. ಬಾಕಿ ಜಮೀನಿನಲ್ಲಿ ಅಭಿವೃದ್ಧಿ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಅಭಿವೃದ್ಧಿಗೆ 3,000 ರೂ.
ಪ್ರತೀ ನಿವೇಶನಗಳ ಅಭಿವೃದ್ಧಿಗೆ ರಾಜೀವ್‌ ಗಾಂಧಿ ವಸತಿ ನಿಗಮದಿಂದ 3,000 ರೂ. ಬಿಡುಗಡೆ ಮಾಡಲಾಗುತ್ತಿದೆ. ಅದರಂತೆ ನಿವೇಶನಕ್ಕೆ ಹಸ್ತಾಂತರವಾಗಿರುವ ಒಟ್ಟು 149.55 ಎಕ್ರೆ ಪ್ರದೇಶದ ಅಭಿವೃದ್ಧಿಗೆ 83,10,000 ರೂ. ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಈಗಾಗಲೇ 54,21,000 ರೂ. ಬಿಡುಗಡೆಯಾಗಿದ್ದು 28,89,000 ರೂ. ಬಾಕಿ ಇದೆ. ಬಿಡುಗಡೆಯಾಗಿರುವ ಅನುದಾನದಲ್ಲಿ 618 ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗಿದೆ.

ನಿವೇಶನ ಅಭಿವೃದ್ಧಿಗೆ ರಾಜೀವ್‌ ಗಾಂಧಿ ವಸತಿ ನಿಗಮ ನೀಡುವ 3,000 ರೂ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭೌಗೋಳಿಕ ಪರಿಸ್ಥಿತಿಯನ್ನು ಪರಿಗಣಿಸಿದರೆ ಸಾಕಾಗುವುದಿಲ್ಲ. ಅನುದಾನವನ್ನು ಹೆಚ್ಚಿಸಬೇಕು ಎಂದು ಈಗಾಗಲೇ ನಿಗಮಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
-ಡಾ| ಕುಮಾರ್‌, ದ.ಕ. ಜಿ.ಪಂ. ಸಿಇಒ

Advertisement

Udayavani is now on Telegram. Click here to join our channel and stay updated with the latest news.

Next