Advertisement

Daily Horoscope; ಈ ರಾಶಿಯ ಅವಿವಾಹಿತ ಹುಡುಗರಿಗೆ ವಿವಾಹ ನಿಶ್ಚಯ

07:18 AM Mar 23, 2024 | Team Udayavani |

23-03-2024

Advertisement

ಮೇಷ: ಉದ್ಯೋಗ ಸ್ಥಾನದಲ್ಲಿ ಅಪೇಕ್ಷೆಯಂತೆ ಏರ್ಪಾಡುಗಳು. ಉದ್ಯಮ, ವ್ಯವಹಾರ ಎರಡು ಕ್ಷೇತ್ರಗಳಲ್ಲೂ ಉತ್ತಮ ಲಾಭ. ಲೇವಾದೇವಿ ವ್ಯವಹಾರದಲ್ಲಿ ಕೊಂಚ ಹಿನ್ನಡೆ. ಅಧ್ಯಾತ್ಮದ ಕಡೆಗೆ ಒಲವು. ಹೊಸ ಪಾಲುದಾರರಿಗಾಗಿ ಹುಡುಕಾಟ.

ವೃಷಭ: ವೇತನಾದಿ ಸೌಲಭ್ಯ ಸುಧಾರಣೆ. ಸರಕಾರಿ ಅಧಿಕಾರಿಗಳಿಗೆ ಇರಿಸು ಮುರಿಸು. ಉದ್ಯೋಗಾಸಕ್ತರಿಗೆ ಅವಕಾಶಗಳು ಗೋಚರ. ಅವಿವಾಹಿತ ಹುಡುಗರಿಗೆ ವಿವಾಹ ನಿಶ್ಚಯ. ಕೃಷ್ಯುತ್ಪನ್ನಗಳ ಬೆಲೆ ಏರಿಕೆ.

ಮಿಥುನ: ನಿರ್ದಿಷ್ಟ ಸಂದರ್ಭಗಳಲ್ಲಿ ವಿಜಯ ಪ್ರಾಪ್ತಿ. ಉದ್ಯೋಗ ಸ್ಥಾನದಲ್ಲಿ ಯಥಾಸ್ಥಿತಿ. ಸ್ವಂತ ಉದ್ಯಮದ ಪರಿಸ್ಥಿತಿ ಸುಧಾರಣೆ. ಅಲ್ಪಕಾಲಿಕ ಹೂಡಿಕೆಗಳು ಬೇಡ. ದೇವತಾರ್ಚನೆ, ಧ್ಯಾನ, ಸತ್ಸಂಗದಲ್ಲಿ ಆಸಕ್ತಿ. ಆರೋಗ್ಯ ಉತ್ತಮ.

ಕರ್ಕಾಟಕ: ಉದ್ಯೋಗ ಸ್ಥಾನದಲ್ಲಿ ಹಿತಶತ್ರುಗಳ ಬಾಧೆ. ಉದ್ಯಮಗಳಿಗೆ ಅನುಕೂಲದ ವಾತಾವರಣ. ಖಾದಿ, ಗ್ರಾಮೋದ್ಯೋಗ ಗಳಿಗೆ ಅಭಿವೃದ್ಧಿಯ ಕಾಲ. ವಸ್ತ್ರ ಸಿದ್ಧ ಉಡುಪು ವ್ಯಾಪಾರಸ್ಥರಿಗೆ ವಿಪುಲ ಲಾಭ.

Advertisement

ಸಿಂಹ: ಉದ್ಯೋಗ ಸ್ಥಾನದಲ್ಲಿ ಹೊಸ ಜವಾಬ್ದಾರಿ. ಉದ್ಯಮದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಳ. ಟೈಲರಿಂಗ್‌ ಬಲ್ಲವರಿಗೆ ಉದ್ಯೋಗಾವ ಕಾಶ. ಮಹಿಳೆಯರ ಗೃಹೋದ್ಯಮಗಳ ಜನಪ್ರಿಯತೆ ವೃದ್ಧಿ. ಎಲ್ಲರ ಆರೋಗ್ಯ ಉತ್ತಮ.

ಕನ್ಯಾ: ಸರಕಾರಿ ಉದ್ಯೋಗಿಗಳಿಗೆ ಕಿರಿಕಿರಿ. ವಿದ್ಯುತ್‌ ಮತ್ತು ಇಲೆಕ್ಟ್ರಾನಿಕ್ಸ್‌ ಉದ್ಯಮಗಳಿಗೆ ಅಧಿಕ ಲಾಭ. ದೀರ್ಘಾವಧಿ ಉಳಿತಾಯ ಯೋಜನೆಗಳಿಂದ ಲಾಭ. ನ್ಯಾಯಾಲಯ ವ್ಯವಹಾರದಲ್ಲಿ ಜಯ. ಹಿರಿಯರು, ಮಹಿಳೆಯರು, ಮಕ್ಕಳಿಗೆ ಸಂತೃಪ್ತಿ.

ತುಲಾ: ಉದ್ಯೋಗದಲ್ಲಿ ಕೊಂಚ ಸಮಾಧಾನ. ಹೆಚ್ಚುವರಿ ಆದಾಯ ಗಳಿಕೆಗೆ ಪ್ರಯತ್ನ. ಉದ್ಯೋಗ ಸ್ಥಾನಕ್ಕೆ ಗಣ್ಯರ ಭೇಟಿ. ಮಕ್ಕಳ ಶೈಕ್ಷಣಿಕ ಸಾಧನೆಯಿಂದ ಆನಂದ. ವ್ಯವಹಾರಾರ್ಥ ಸಣ್ಣ ಪ್ರಯಾಣ ನಿರೀಕ್ಷೆ.

ವೃಶ್ಚಿಕ: ಉದ್ಯೋಗ ಸ್ಥಾನದಲ್ಲಿ ಕೊಂಚ ಮುನ್ನಡೆ. ಉದ್ಯಮ ಸ್ಥಾನದಲ್ಲಿ ಹೊಸ ವ್ಯವಸ್ಥೆ. ಪಾಲುದಾರಿಕೆ ವ್ಯವಹಾರದಲ್ಲಿ ಸಾಮಾನ್ಯ ಲಾಭ. ಹಳೆಯ ಆತ್ಮೀಯರ ಅಕಸ್ಮಾತ್‌ ಭೇಟಿ. ಉದ್ಯೋಗಾಸಕ್ತರಿಗೆ ಶುಭ ಸಮಾಚಾರ.

ಧನು: ಉದ್ಯೋಗದಲ್ಲಿ ಗೌರವದ ಸ್ಥಾನ ಭದ್ರ. ಗೃಹೋದ್ಯಮಗಳಿಗೆ ಉತ್ತಮ ಲಾಭ. ವಸ್ತ್ರ, ಸಿದ್ಧ ಉಡುಪು ಆಭರಣ ವ್ಯಾಪಾರಿಗಳಿಗೆ ಹೇರಳ ಲಾಭ. ಊರಿನ ದೇವಾಲಯಕ್ಕೆ ಸಂದರ್ಶನ. ಬಂಧುವರ್ಗದವರ ಭೇಟಿ.

ಮಕರ: ಉತ್ಸಾಹದೊಂದಿಗೆ ದಿನಾರಂಭ. ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿಗಳು. ಸಹೋದ್ಯಮದ ಸಂಸ್ಥೆಯ ಉತ್ಪಾದನೆ ವೃದ್ಧಿ. ವಸ್ತ್ರ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿದ ಲಾಭ. ವ್ಯವಹಾರ ಸಂಬಂಧ ದೂರ ಪ್ರಯಾಣ.

ಕುಂಭ: ಉದ್ಯೋಗಸ್ಥಾನದಲ್ಲಿ ಮುಂದುವರಿದ ಗುರುಸ್ಥಾನ. ಮುದ್ರಣ ಸಾಮಗ್ರಿಗಳಿಗೆ ಅಧಿಕ ಬೇಡಿಕೆ. ಉದ್ಯೋಗಾಸಕ್ತರಿಗೆ ಅವಕಾಶ ಹುಡುಕಲು ಮಾರ್ಗದರ್ಶನ. ಜೇನು ವ್ಯವಸಾಯ, ಹೈನುಗಾರಿಕೆ ಕೈಗೊಳ್ಳಲು ಆಸಕ್ತಿ.

ಮೀನ: ಕೆಲಸದ ಹೊರೆ ನಿಭಾಯಿಸಲು ವೃತ್ತಿ ಬಾಂಧವರ ಸರ್ವವಿಧ ಸಹಾಯ. ಇಲಾಖೆಗಳವರಿಂದ ಸಕಾರಾತ್ಮಕ ಸ್ಪಂದನ. ಜನಸೇವಾ ಕಾರ್ಯಗಳು ಮುಂದುವರಿಕೆ. ಕೃಷಿ ಭೂಮಿ ಖರೀದಿಗೆ ಚಿಂತನೆ. ಮನೆಮಂದಿಯೆಲ್ಲರ ಆರೋಗ್ಯ ಉತ್ತಮ. ಮಕ್ಕಳ ಕಲಿಕೆ ಆಸಕ್ತಿ ವೃದ್ಧಿ.

Advertisement

Udayavani is now on Telegram. Click here to join our channel and stay updated with the latest news.

Next