Advertisement

ಸೋಮವಾರದ ನಿಮ್ಮ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಿ

10:07 AM Jan 28, 2020 | Hari Prasad |

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದೇ ಜ್ಯೋತಿಷ್ಯ ಶಾಸ್ತ್ರ.

Advertisement

ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಅನೇಕ ಕುಟುಂಬಗಳು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಇಂದೇ ಕರೆ ಮಾಡಿ.
ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
888 488 9444

ಪಂಡಿತ್ ಶ್ರೀ ಶ್ರೀಬಿ. ಹೆಚ್. ಆಚಾರ್ಯ ಗುರೂಜಿ 888 488 9444
ಶ್ರೀ ಅಷ್ಟ ಲಕ್ಷ್ಮೀ ಜ್ಯೋತಿಷ್ಯ ಮಂದಿರ
ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
ಮನೆ #1191 26th main 9 ನೇ ಬ್ಲಾಕ್ ರಾಗಿಗುಡ್ಡ ಆರ್ಚ್ (ಬಸ್ ಸ್ಟಾಪ್) ಎದುರುಗಡೆ ಜಯನಗರ 9ನೇ ಬ್ಲಾಕ್ ಬೆಂಗಳೂರು 69


ಮೇಷ ರಾಶಿ

ಪ್ರಚಾರ ತೆಗೆದುಕೊಳ್ಳುವ ಉದ್ದೇಶದಿಂದ ಬಾಯಿಗೆ ಬಂದಂತೆ ಮಾತನಾಡುವುದು ತಪ್ಪಾಗುತ್ತದೆ, ಮಾತಿನಲ್ಲಿ ನಿಗಾ ಇರಲಿ. ಶತ್ರುಗಳು ನಿಮ್ಮ ಬೆಳವಣಿಗೆಯನ್ನು ಕುಂಠಿತಗೊಳಿಸುವ ಕುತಂತ್ರ ನಡೆಸಬಹುದು ಎಚ್ಚರಿಕೆಯ ನಡೆ ಅಗತ್ಯ. ಇಂದು ಹೆಚ್ಚುವರಿ ಕೆಲಸ ನಿಮಗೆ ಒತ್ತಡ ನೀಡಲಿದೆ. ಆರ್ಥಿಕ ವ್ಯವಹಾರಗಳು ಸುಗಮವಾಗಿ ಮತ್ತು ಲಾಭದಿಂದ ನಡೆಯುತ್ತದೆ.


ವೃಷಭ ರಾಶಿ

ಪರೋಪಕಾರದ ಗುಣಗಳಿಂದ ಇತರರಿಗೆ ಸಹಾಯ ಮಾಡುವ ಗುಣವನ್ನು ಶ್ಲಾಘಿಸುತ್ತಾರೆ. ನಿಮ್ಮ ವಿರುದ್ಧ ನಡೆಯುವ ಟೀಕೆ-ಟಿಪ್ಪಣಿಗಳು ನಿಮ್ಮ ಮನಃ ಶಾಂತಿಯನ್ನು ಕದಡುವುದು. ಅಪಾತ್ರ ವ್ಯಕ್ತಿಗಳಿಗೆ ಸಹಾಯ ಮಾಡುವುದನ್ನು ಆದಷ್ಟು ನಿಲ್ಲಿಸುವುದು ಸೂಕ್ತ. ಮಕ್ಕಳೊಡನೆ ಉತ್ತಮ ರೀತಿಯ ಕಾಲ ಕಳೆಯುವಿರಿ. ಸಭಾ ಗೋಷ್ಠಿ ಸಮಾರಂಭಗಳಿಗೆ ತೆರಳುವ ಸಾಧ್ಯತೆ ಕಾಣಬಹುದು. ಆರ್ಥಿಕ ಸ್ಥಿತಿಯು ಮಧ್ಯಮ ಗತಿಯಲ್ಲಿ ಸಾಗಲಿದೆ.

Advertisement


ಮಿಥುನ ರಾಶಿ
ನೆಂಟರಿಷ್ಟರ ಆಗಮನದಿಂದ ಮನೆಯಲ್ಲಿ ಸಂತಸದ ವಾತಾವರಣ ಮೂಡಿಬರಲಿದೆ. ದಾಖಲೆಪತ್ರಗಳನ್ನು ಆದಷ್ಟು ಜತನವಾಗಿ ಕಾಪಾಡಿಕೊಳ್ಳಿ. ಹಳೆಯ ಮಿತ್ರರು ಭೇಟಿಯಾಗುವ ಸಾಧ್ಯತೆ ಕಂಡುಬರುತ್ತದೆ. ನಿಮ್ಮ ಕೆಲವು ವೈಯಕ್ತಿಕ ಆಂತರಿಕ ಸಮಸ್ಯೆಗಳಿಗೆ ಕುಟುಂಬದಿಂದ ಹಾಗೂ ಸ್ನೇಹಿತರಿಂದ ಪರಿಣಾಮಾತ್ಮಕ ವಾದಂತಹ ಪರಿಹಾರ ದೊರೆಯಲಿದೆ. ಆರ್ಥಿಕವಾಗಿ ಬೆಳವಣಿಗೆಗೆ ಕೆಲವರಿಂದ ಅಸಹಕಾರ ಬರಬಹುದು ಎಚ್ಚರವಿರಲಿ.


ಕಟಕ ರಾಶಿ
ಬಹುದಿನದಿಂದ ಕಷ್ಟಪಡುತ್ತಿದ್ದ ಕಾರ್ಯಗಳು ಈ ದಿನ ನೆರವೇರುವ ಸಾಧ್ಯತೆಗಳು ಕಂಡು ಬರುತ್ತದೆ. ಕಛೇರಿ ಅಥವಾ ಕೌಟುಂಬಿಕ ಕೆಲಸಗಳಲ್ಲಿ ನಿರೀಕ್ಷಿತ ಗೆಲುವು ನಿಮ್ಮದಾಗಲಿದೆ. ನಿಮ್ಮಲ್ಲಿನ ಆರೋಗ್ಯಯುತ ಜೀವನಶೈಲಿಯಿಂದ ಕಾರ್ಯಗಳಲ್ಲಿ ಚೈತನ್ಯ ಬಳಸಿಕೊಳ್ಳುವಿರಿ. ಬಾಕಿ ಬರಬೇಕಾಗಿರುವ ಹಣಕಾಸುಗಳು ಬಂದು ಸೇರುವುದು ಕಂಡುಬರುತ್ತದೆ.

ಸಮಸ್ಯೆ ಯಾವುದೇ ಇರಲಿ ಎಷ್ಟೆ ಕಠಿಣವಾಗಿರಲಿ ಭಯ ಪಡುವ ಅವಶ್ಯಕತೆ ಇಲ್ಲ ಒಮ್ಮೆ
ಪಂಡಿತ್ ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿಯವರನ್ನು
888 488 9444 ಸಂಪರ್ಕಿಸಿ


ಸಿಂಹ ರಾಶಿ
ಕೆಲವರು ನಿಮ್ಮಿಂದ ಸಹಕಾರ ಪಡೆದು ನಿಮ್ಮ ವಿರುದ್ಧವೇ ತಿರುಗಿ ಬೀಳುವ ಸಾಧ್ಯತೆಗಳನ್ನು ಕಾಣಬಹುದು. ಕೆಲಸದಲ್ಲಿ ಪೈಪೋಟಿಗಳು ಹೆಚ್ಚಾಗಲಿದೆ, ಇದಕ್ಕಾಗಿ ನೀವು ತಯಾರಿ ನಡೆಸಬೇಕಾದ ಅನಿವಾರ್ಯತೆ ಕಂಡುಬರುತ್ತದೆ. ಆರ್ಥಿಕ ವ್ಯವಹಾರಗಳನ್ನು ವಿಸ್ತರಣೆ ಗೊಳಿಸಲು ಪ್ರಯತ್ನ ಪಡಬೇಕಾಗಿದೆ. ನಿಮ್ಮ ನಿರ್ದಿಷ್ಟ ಗುರಿಯನ್ನು ತಲುಪಲು ಇನ್ನಷ್ಟು ಶ್ರಮಪಡಬೇಕಾದ ಅನಿವಾರ್ಯತೆ ಇದೆ, ತಡಮಾಡದೆ ಮುನ್ನಡೆಯಿರಿ. ಸಾಮಾಜಿಕ ಕ್ಷೇತ್ರದಲ್ಲಿ ಮನ್ನಣೆ ಗಳಿಸುವಿರಿ.


ಕನ್ಯಾ ರಾಶಿ
ಹೆಚ್ಚಿನ ಓಡಾಟದಿಂದ ನಿಮ್ಮ ದೇಹಾಯಾಸ ಹೆಚ್ಚಾಗಬಹುದು. ಆರೋಗ್ಯವನ್ನು ಆದಷ್ಟು ಕಾಪಾಡಿಕೊಳ್ಳಿ. ಈ ದಿನ ಗೆಳೆಯರ ಔತಣಕೂಟದ ಆಮಂತ್ರಣ ನಿಮಗೆ ಸಿಗಲಿದೆ ಇದರಿಂದ ಮೋಜು ಮಸ್ತಿಗಳಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಕಾಣಬಹುದು. ಅತಿಯಾದ ಮೋಜು ಒಳಿತಲ್ಲ ನೆನಪಿಡಿ. ನಿಮ್ಮ ಕೆಲವು ಮಾತುಗಳು ಅಪಹಾಸ್ಯ ಆಗಬಹುದು ಆದಷ್ಟು ಎಚ್ಚರಿಕೆಯಿಂದ ಮಾತನಾಡಿ.


ತುಲಾ ರಾಶಿ
ಕೆಲಸದಲ್ಲಿ ಶಿಸ್ತನ್ನು ಬೆಳೆಸಿಕೊಳ್ಳಿ. ಕೆಲವು ಅಭ್ಯಾಸಗಳು ನಿಮಗೆ ಮಾರಕವಾಗಬಹುದು ಆದಷ್ಟು ಆರೋಗ್ಯಯುತ ಜೀವನ ಸಾಗಿಸುವ ಪ್ರಯತ್ನ ನಡೆಸಿ. ವ್ಯಾಜ್ಯಗಳಲ್ಲಿ ಗೆಲುವು ನಿಮ್ಮ ಪಕ್ಷದಲ್ಲಿದೆ. ಸ್ವಂತ ಉದ್ಯೋಗದ ಕನಸು ನನಸಾಗುವ ಸಾಧ್ಯತೆಗಳು ಕಾಣಬಹುದು. ಕೆಲವು ಜನಗಳಿಂದ ಆರ್ಥಿಕ ವ್ಯವಹಾರಗಳು ಹಿನ್ನಡೆಯಾಗುವ ಸಾಧ್ಯತೆ ಕಂಡುಬರುತ್ತದೆ.

ವಾಕ್ಯ ಸಿದ್ದಿ ,ಮಂತ್ರ ಸಿದ್ದಿ ,ಯಂತ್ರ ಸಿದ್ದಿಯಿಂದ ಪ್ರಖ್ಯಾತಿ ಪಡೆದಿರುವ
ಭಾರತದ ಪ್ರಖ್ಯಾತ ದೈವ ಶಕ್ತಿ ಜ್ಯೋತಿಷ್ಯರು
ಪಂಡಿತ್ ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
888 488 9444


ವೃಶ್ಚಿಕ ರಾಶಿ
ವ್ಯವಹಾರದ ನಿಮಿತ್ತ ದೂರದ ಪ್ರಯಾಣ ಸಾಗಬೇಕಾದ ಅನಿವಾರ್ಯತೆ ಬರಬಹುದು. ಬಂಧುಮಿತ್ರರ ಸಹಕಾರದಿಂದ ಉತ್ತಮ ಯೋಜನೆಯನ್ನು ಪಡೆದುಕೊಳ್ಳುವಿರಿ. ಕೌಟುಂಬಿಕ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆಗಳು ಕಂಡುಬರುತ್ತದೆ. ಕುಟುಂಬದಲ್ಲಿ ಶುಭ ಕಾರ್ಯದ ಬಗ್ಗೆ ಚಿಂತನೆ ನಡೆಯುವ ಸಾಧ್ಯತೆ ಕಾಣಬಹುದು.


ಧನಸ್ಸು ರಾಶಿ
ವ್ಯವಹಾರ ಕ್ಷೇತ್ರದಲ್ಲಿ ಉತ್ತಮವಾದ ಸಾಧನೆ ಮತ್ತು ಆದಾಯ ಕಂಡುಬರಲಿದೆ. ಹೂಡಿಕೆಗಳು ನಿಮ್ಮ ಜಾಗ್ರತೆ ಹಾಗೂ ನಿಪುಣರ ಸಲಹೆ ಅವಶ್ಯವಿದೆ. ಗಣ್ಯವ್ಯಕ್ತಿಗಳೊಡನೆ ಒಡನಾಟ ಹೆಚ್ಚಾಗಲಿದೆ. ಕೆಲವು ಹೊಗಳು ಭಟರಿಂದ ನೀವು ಆದಷ್ಟು ಅಂತರ ಕಾಯ್ದುಕೊಳ್ಳುವುದು ಒಳಿತು. ಮನರಂಜನೆಗಾಗಿ ಈ ದಿನ ಅವಕಾಶಗಳು ಸಿಗಬಹುದಾದ ಸಾಧ್ಯತೆ ಇದೆ. ಸಂಗಾತಿಯೊಡನೆ ಉತ್ತಮವಾದ ಒಡನಾಟ ಮತ್ತು ಬಾಂಧವ್ಯ ಅವಿಸ್ಮರಣೀಯ ಎನಿಸಬಹುದು.


ಮಕರ ರಾಶಿ
ಸಂಗೀತ, ಸಾಹಿತ್ಯ, ಚಿತ್ರಕಲೆ ಇಂತಹ ಕಲಾತ್ಮಕ ಚಟುವಟಿಕೆಗಳಲ್ಲಿ ನೀವು ಪಾಲ್ಗೊಳ್ಳುವ ಸಾಧ್ಯತೆ ಕಾಣಬಹುದು. ಮನಸ್ಸಿನ ಅಭಿಲಾಷೆ ಈಡೇರುವ ಸುಸಂದರ್ಭ ದೊರೆಯುತ್ತದೆ. ಹಿರಿಯರು ಸ್ನೇಹಿತರ ಉತ್ತಮ ಮಾರ್ಗದರ್ಶನದಿಂದ ಪ್ರಗತಿಯತ್ತ ಸಾಗುವಿರಿ.


ಕುಂಭ ರಾಶಿ
ಪಿತ್ರಾರ್ಜಿತ ಆಸ್ತಿಗಳಲ್ಲಿನ ವ್ಯಾಜ್ಯಗಳು ಸರಿಹೋಗಲಿದೆ. ಕೌಟುಂಬಿಕ ಕುಲಕಸುಬುಗಳನ್ನು ಆಧುನೀಕರಣ ಮಾಡುವ ಪ್ರಯತ್ನ ಸಾಗಲಿದೆ. ಉತ್ತಮ ಆದಾಯಗಳಿಕೆಗೆ ಹೊಸ ತರನಾದ ಪ್ರಯೋಗಗಳು ಜಯಪ್ರಾಪ್ತಿಯಾಗುವ ಸ್ಥಿತಿ ನಿರ್ಮಾಣ ಮಾಡುತ್ತದೆ. ದೈವ ದರ್ಶನ ಹಾಗೂ ಕುಟುಂಬದೊಂದಿಗೆ ಪ್ರವಾಸದ ಸಿಹಿ ಅನುಭವ ನಿರೀಕ್ಷಿಸಬಹುದು.


ಮೀನ ರಾಶಿ
ಸ್ಥಿರ ಮನಸ್ಸಿನಿಂದ ಕಾರ್ಯ ಪ್ರವೃತ್ತರಾಗಿ. ಆರ್ಥಿಕವಾಗಿ ಬಳಲುವಿಕೆ ಕಂಡುಬರುತ್ತದೆ. ನಿಮಗೆ ಸಹಕಾರ ನೀಡಲು ಕುಟುಂಬಸ್ಥರು ಸಿದ್ಧರಿರುತ್ತಾರೆ. ಧೈರ್ಯ ಮತ್ತು ಮಾತುಗಾರಿಕೆ ನಿಮ್ಮನ್ನು ಎತ್ತರ ಸ್ಥಾನದಲ್ಲಿ ಇಡುತ್ತದೆ. ಸಣ್ಣ ವಿಷಯಕ್ಕೆ ಬಂದು ವರ್ಗದಲ್ಲಿ ರಾದ್ಧಾಂತ ನಡೆಯಬಹುದು ಎಚ್ಚರವಿರಿ. ದುರ್ಬಲ ಆರ್ಥಿಕತೆಯ ನಡುವೆಯೂ ಭವಿಷ್ಯದ ದೃಷ್ಟಿಯಿಂದ ಪರಿಪಕ್ವ ಬೆಳವಣಿಗೆ ಸಾಗಲಿದೆ. ಪತ್ನಿಯ ಮಾತಿಗೆ ಬೆಲೆ ನೀಡಿ.

Advertisement

Udayavani is now on Telegram. Click here to join our channel and stay updated with the latest news.

Next