Advertisement

ಮಾರ್ಚ್ 09: ಮಂಗಳವಾರದ ನಿಮ್ಮ ರಾಶಿ ಭವಿಷ್ಯ

05:23 PM Mar 10, 2020 | Hari Prasad |

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದೇ ಜ್ಯೋತಿಷ್ಯ ಶಾಸ್ತ್ರ.

Advertisement

ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಅನೇಕ ಕುಟುಂಬಗಳು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಇಂದೇ ಕರೆ ಮಾಡಿ.

ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
888 488 9444

ಶ್ರೀ ಅಷ್ಟ ಲಕ್ಷ್ಮೀ ಜ್ಯೋತಿಷ್ಯ ಮಂದಿರ

ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
ಮನೆ #1191 26th main 9 ನೇ ಬ್ಲಾಕ್ ರಾಗಿಗುಡ್ಡ ಆರ್ಚ್ (ಬಸ್ ಸ್ಟಾಪ್) ಎದುರುಗಡೆ ಜಯನಗರ 9ನೇ ಬ್ಲಾಕ್ ಬೆಂಗಳೂರು 69

ಇಂದಿನ ರಾಶಿ ಭವಿಷ್ಯ ಹೀಗಿದೆ. ಯಾವ ರಾಶಿಯವರು ಏನು ಮಾಡಬೇಕು? ಏನು ಮಾಡಬಾರದು ಎಂಬದನ್ನು ತಿಳಿದುಕೊಳ್ಳಿ.

ಮೇಷ


ನಿಮ್ಮ ಪ್ರಭಾವ ಎಲ್ಲಾ ರೀತಿಯಲ್ಲಿ ಉತ್ತಮ ಅಭಿವೃದ್ಧಿಯನ್ನು ನೀಡಲಿದೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ವಿಶ್ವಾಸದ ದುರುಪಯೋಗವಾಗದಂತೆ ಹೆಚ್ಚಿನ ಗಮನ ಹರಿಸಬೇಕು.

ವೃಷಭ


ಆರ್ಥಿಕವಾಗಿ ಬೆಳವಣಿಕೆಗೆ ಸಮಾಧಾನ ತರುತ್ತದೆ. ಕ್ರಯವಿಕ್ರಯಗಳಲ್ಲಿ ಉತ್ತಮ ಲಾಭವಿದೆ. ಸಂಚಾರದಲ್ಲಿ ಜಾಗ್ರತೆ ಇರಲಿ.

Advertisement

ಮಿಥುನ


ಅನಿರೀಕ್ಷಿತ ಧನಾಗಮನದಿಂದ ಪರಿಸ್ಥಿತಿಯು ಸುಧಾರಿಸುವುದು. ವ್ಯಾಪಾರ ವ್ಯವಹಾರಗಳು ಹಂತ ಹಂತವಾಗಿ ಸುಧಾರಿಸುತ್ತಾ ಹೋಗುತ್ತವೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭವಿದೆ.

ಕಟಕ


ಇತರರು ನಿಮಗೆ ವಂಚನೆ ಮಾಡಲಿದ್ದಾರೆ ಜಾಗ್ರತೆ. ಕೆಲಸಕಾರ್ಯಗಳು ಹಂತಹಂತವಾಗಿ ನೇರವೇರಲಿವೆ. ದಾಯಾದಿಗಳಿಂದ ಅವಮಾನ ಕಿರಿಕಿರಿಯನ್ನು ಅನುಭವಿಸುವಿರಿ

ಸಿಂಹ


ಕಾರ್ಯಕ್ಷೇತ್ರದಲ್ಲಿ ಹಲವಾರು ತರದ ಕೆಲಸಕಾರ್ಯ ಗಳು ನಿಮ್ಮ ಪಾಲಿಗೆ ಬರುತ್ತವೆ. ಮನೆಯಲ್ಲಿ ಶುಭಮಂಗಳ ಕಾರ್ಯಗಳ ಚಟುವಟಿಕೆ ಗಳಿಂದ ಉಲ್ಲಾಸಿತರಾಗುವಿರಿ.

ಕನ್ಯಾ


ಕೌಟುಂಬಿಕ ವಿಚಾರದಲ್ಲಿ ಅಸಮಾಧಾನಕರ ವಾತಾವರಣದಿಂದ ಕಿರಿಕಿರಿ ಇರುತ್ತದೆ. ಸಣ್ಣ ಪುಟ್ಟ ತಪ್ಪು ತಿಳುವಳಿಕೆಗಳು ತೋರಿ ಬರುತ್ತವೆ. ವಿದ್ಯಾರ್ಥಿಗಳು ನಿರುತ್ಸಾಹ ತೋರಿಸುವರು.

ತುಲಾ


ಹಿತಶತ್ರುಗಳು ನಿಮ್ಮನ್ನು ಗಮನಿಸಲಿದ್ದಾರೆ. ದೂರ ಸಂಚಾರದಲ್ಲಿ ವಾಹನ ಚಾಲನೆ ಹಾಗೂ ಆರೋಗ್ಯಭಾಗ್ಯ ಕೈಕೊಟ್ಟಿತು. ನಿರುದ್ಯೋಗಿಗಳು ಬಂದ ಉದ್ಯೋಗವನ್ನು ಸದುಪಯೋಗಿಸಬೇಕು.

ವೃಶ್ಚಿಕ


ಎಲ್ಲಾ ವಿಚಾರದಲ್ಲಿ ಉತ್ತಮ ಫ‌ಲಗಳು ಗೋಚರಕ್ಕೆ ಬರುತ್ತವೆ. ವಿದ್ಯಾರ್ಥಿಗಳು ನಿರೀಕ್ಷಿತ ಫ‌ಲವನ್ನು ಪಡೆಯಲಿದ್ದಾರೆ. ನೂತನ ಕೆಲಸ ಕಾರ್ಯ ಗಳು ಚೆನ್ನಾಗಿ ನೆರವೇರುತ್ತವೆ. .

ಧನು


ಆರೋಗ್ಯಭಾಗ್ಯವನ್ನು ಕಾಪಾಡಿಕೊಳ್ಳಿ. ಆರ್ಥಿಕವಾಗಿ ನೆಮ್ಮದಿಯ ದಿನಗಳಿವು. ಆಗಾಗ ಹಿರಿಯರಿಗೆ ದೇವತಾದರ್ಶನ ಭಾಗ್ಯವಿದೆ. ಹೊಸ ಉದ್ಯೋಗದ ಬಗ್ಗೆ ಉತ್ಸಾಹ ತೋರಿ ಬರಲಿದೆ. ಸಂಚಾರದಲ್ಲಿ ಹೆಚ್ಚಿನ ಜಾಗ್ರತೆ ಮಾಡಿರಿ.

ಮಕರ


ಬಹುಕಾಲದ ಬಳಿಕ ನಿಮ್ಮ ಚಿಂತನೆಗಳು ಸದ್ಯದಲ್ಲೇ ಚಾಲನೆಗೆ ಬರಲಿವೆ. ಆಗಾಗ ಧನಾಗಮನದ ಸಾಧ್ಯತೆ ಇರುತ್ತದೆ. ಅನಿರೀಕ್ಷಿತ ರೂಪದಲ್ಲಿ ವೈವಾಹಿಕ ಭಾಗ್ಯ ಅವಿವಾಹಿತರಿಗೆ ಬರಲಿದೆ. ವಿದ್ಯಾರ್ಥಿಗಳು ತಮ್ಮ ಪ್ರಯತ್ನಕ್ಕೆ ಫ‌ಲ ಪಡೆಯಲಿದ್ದಾರೆ.

ಕುಂಭ


ಹೊಸ ಚಿಂತನೆಗಳು ಕಾರ್ಯಗತವಾಗಲಿವೆ. ಮುಖ್ಯವಾಗಿ ನಿಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಿರಿ. ಹೊರಗಿನ ಆಹಾರ ಸೇವಿಸುವ ಬಗ್ಗೆ ಜಾಗ್ರತೆ ಮಾಡಿರಿ. ಸಂಗಾತಿಯ ಬೇಡಿಕೆಯನ್ನು ಈಡೇರಿಸುವ ಸಮಯವಿದು.

ಮೀನ


ಕೌಟುಂಬಿಕ ಶಾಂತಿ ತುಸು ಸಮಾಧಾನ ತರಲಿದೆ. ನಿಮ್ಮೊಳಗಿನ ಶಾಂತತೆಯನ್ನು ಕಾಪಾಡಿಕೊಳ್ಳಿರಿ. ಆದರೂ ಆಪ್ತರ ಸಲಹೆ, ಸೂಚನೆಗಳಿಗೆ ಸ್ಪಂದಿಸುವುದು ಅಗತ್ಯವಿದೆ. ಇಲ್ಲದಿದ್ದಲ್ಲಿ ಅನಾವಶ್ಯಕ ಗೊಂದಲಕ್ಕೆ ಕಾರಣರಾಗುವಿರಿ.

Advertisement

Udayavani is now on Telegram. Click here to join our channel and stay updated with the latest news.

Next