Advertisement

ಮಾರ್ಚ್ 02: ಸೋಮವಾರದ ದಿನ ಭವಿಷ್ಯ

09:52 AM Mar 03, 2020 | Hari Prasad |

ಸಮಸ್ಯೆಗಳಿಲ್ಲದ ಮನುಷ್ಯ ಇರುವುದೇ ಇಲ್ಲ. ಒಂದಿಲ್ಲ ಒಂದು ಸಮಸ್ಯೆಗೆ ಸಿಲುಕಿ ಮನುಷ್ಯ ಪರಿತಪಿಸುತ್ತೀರುವನು ಇಂತಹ ಕಷ್ಟಕರ ಸಂದರ್ಭದಲ್ಲಿ ನಮ್ಮನ್ನು ಕೈ ಹಿಡಿಯುವುದೇ ಜ್ಯೋತಿಷ್ಯ ಶಾಸ್ತ್ರ.

Advertisement

ಗುರೂಜಿಯವರ ಸಲಹೆ ಹಾಗೂ ಪರಿಹಾರ ಪಡೆದುಕೊಂಡಂತಹ ಅನೇಕ ಕುಟುಂಬಗಳು ಇಂದಿಗೂ ಸಹ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಇಂದೇ ಕರೆ ಮಾಡಿ.

ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
888 488 9444

ಶ್ರೀ ಅಷ್ಟ ಲಕ್ಷ್ಮೀ ಜ್ಯೋತಿಷ್ಯ ಮಂದಿರ

ಶ್ರೀ ಶ್ರೀ ಬಿ.ಹೆಚ್.ಆಚಾರ್ಯ ಗುರೂಜಿ
ಮನೆ #1191 26th main 9 ನೇ ಬ್ಲಾಕ್ ರಾಗಿಗುಡ್ಡ ಆರ್ಚ್ (ಬಸ್ ಸ್ಟಾಪ್) ಎದುರುಗಡೆ ಜಯನಗರ 9ನೇ ಬ್ಲಾಕ್ ಬೆಂಗಳೂರು 69

ಇಂದಿನ ರಾಶಿ ಭವಿಷ್ಯ ಹೀಗಿದೆ. ಯಾವ ರಾಶಿಯವರು ಏನು ಮಾಡಬೇಕು? ಏನು ಮಾಡಬಾರದು ಎಂಬದನ್ನು ತಿಳಿದುಕೊಳ್ಳಿ.

ಮೇಷ


ಗುರುಬಲದಿಂದ ಹೆಚ್ಚಿನ ಮನೋಕಾಮನೆಗಳು ನೆರವೇರಲಿವೆ. ಲೇವಾದೇವಿಯಲ್ಲಿ ಬಡ್ಡಿವ್ಯವಹಾರದಲ್ಲಿ ಹೆಚ್ಚಿನ ಆದಾಯ ವಿರುತ್ತದೆ. ನಿವೇಶನ ಖರೀದಿಯ ಸಾಧ್ಯತೆ ಇರುತ್ತದೆ. ಶುಭವಿದೆ.

ವೃಷಭ


ಆಗಾಗ ಧನವಿನಿಯೋಗವಿದ್ದರೂ ಧನಾಗಮನವು ಉತ್ತಮ ವಿರುತ್ತದೆ. ಚಾಡಿ ಮಾತಿ ನಿಂದ ನೆಂಟಸ್ತಿಕೆಗೆ ಸಮಸ್ಯೆ ತರಲಿದೆ. ವೃತ್ತಿರಂಗದಲ್ಲಿ ಕ್ರಿಯಾಶೀಲತೆ, ಪ್ರಯತ್ನಬಲ ಮುನ್ನಡೆ ತರಲಿದೆ..

Advertisement

ಮಿಥುನ


ವಿದ್ಯಾರ್ಥಿಗಳ ಅಭ್ಯಾಸದಲ್ಲಿ ಮುನ್ನಡೆ ಕಂಡು ಬರುತ್ತದೆ. ನಿರುದ್ಯೋಗಿಗಳಿಗೆ ವಿದೇಶಯಾನವಿದೆ. ಸರಕಾರಿ ಕೆಲಸ ಕಾರ್ಯಗಳಿಗೆ ಅಪಜಯದ ಛಾಯೆ ಕಾಣಿಸಲಿದೆ. ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ.

ಕಟಕ


ಸಂಚಾರ, ಪ್ರವಾಸಾದಿಗಳಿಂದ ಧನವ್ಯಯವಿದೆ. ಹಿರಿಯರಿಗೆ ವಾತ, ಪ್ರಕೋಪದಿಂದ ದೇಹಪೀಡೆ ತೋರಿ ಬಂದೀತು. ಆಸ್ತಿ ವಿವಾದಗಳು ದಾಯಾದಿಗಳೊಡನೆ ನಿಷ್ಠುರಕ್ಕೆ ಕಾರಣವಾಗಲಿದೆ. ಜಾಗ್ರತೆ.

ಸಿಂಹ


ಸಾಂಸಾರಿಕವಾಗಿ ನಿಮ್ಮದಾರಿ ಸರಿಯಿದ್ದರೂ ಕಾಲಾತೀತ ದೋಷದಿಂದ ಕಿರಿಕಿರಿ ಎನಿಸಲಿದೆ. ತಾತ್ಕಾಲಿಕ ಹುದ್ದೆಯವರಿಗೆ ಉದ್ಯೋಗವು ಖಾಯಂ ಆದೀತು. ಚಿನ್ನ, ಬೆಳ್ಳಿಯನ್ನು ಖರೀದಿಸುವ ಸಾಧ್ಯತೆ ಇದೆ.

ಕನ್ಯಾ


ಬಂಧುವಿರಸದಿಂದ ಕ್ಲೇಶಾದಿಗಳು ಕಂಡು ಬಂದಾವು. ಹತ್ತರ ರಾಹುವಿನಿಂದ ಆಶಾಭಂಗವಿದೆ. ಹೊಸ ನಿವೇಶನ ಖರೀದಿಗಾಗಿ ಖರ್ಚು ತಂದೀತು. ಆರ್ಥಿಕವಾಗಿ ನಾನಾ ರೀತಿಯ ಕಷ್ಟನಷ್ಟಗಳಿವೆ.

ತುಲಾ


ಖರ್ಚುವೆಚ್ಚಗಳು ಹೆಚ್ಚಾಗಲಿವೆ. ನೂತನ ಗೃಹೋಪಕರಣಗಳು ಮನೆಯನ್ನು ಆಲಂಕರಿಸಲಿವೆ. ಸಂದೇಹ ಪಡದೆ, ವಿವೇಚನೆಯಿಂದ ನಡೆದಲ್ಲಿ ಗುರಿ ಸಾಧಿಸಬಹುದು. ವ್ಯವಹಾರದಲ್ಲಿ ಶುತ್ರಗಳ ಕಾಟವಿದೆ.

ವೃಶ್ಚಿಕ


ವಾಹನ ಸಂಚಾರದ ಬಗ್ಗೆ ಹೆಚ್ಚಿನ ಜಾಗ್ರತೆ ಇರಲಿ. ಗೃಹ ನಿರ್ಮಾಣ ಕಾರ್ಯಗಳಿಗೆ ಕಟ್ಟಡ ಕಾಮಗಾರಿಕೆಯ ಚಾಲನೆಗೆ ಒಳ್ಳೆಯ ಕಾಲ ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಉತ್ತಮ ಯಶಸ್ಸು ಇದೆ.

ಧನು


ಮನೆಯಲ್ಲಿ ಚೋರ ಭಯ ತಂದೀತು. ನೆರೆಹೊರೆಯವರು ಕಾಲ್ಕೆರೆದು ಜಗಳಕ್ಕೆ ಬಂದಾರು. ಹೆಚ್ಚಿನ ಎಲ್ಲಾ ಕೆಲಸಕಾರ್ಯಗಳಿಗೆ ಪದೇಪದೇ ವಿಘ್ನ ಸಂಭವ. ಧರ್ಮಕಾರ್ಯದಲ್ಲಿ ಆಸಕ್ತಿ ಇರಲಿದೆ.

ಮಕರ


ಕುದುರಿದ ವಿವಾಹ ಸಂಬಂಧ ಮಂಗಲಮಯವಾಗಿ ಜರಗಲಿದೆ. ರಾಜಕೀಯದಲ್ಲಿ ಗೊಂದಲದ ಸ್ಥಿತಿ ಇರುತ್ತದೆ. ವಿದೇಶಯಾತ್ರೆಯ ಕನಸು ಕೈಗೂಡಲಿದೆ. ಹಿರಿಯರಿಗೆ ಅನಾರೋಗ್ಯ ಇದ್ದೀತು.

ಕುಂಭ


ಹಿರಿಯರು ಪ್ರವಾಸ, ಯಾತ್ರಾದಿಗಳನ್ನು ಕೈಗೊಳ್ಳಲಿದ್ದಾರೆ. ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ. ಶುಭಮಂಗಲ ಕಾರ್ಯಗಳಿಂದ, ಬಂಧುಮಿತ್ರರ ಆಗಮನದಿಂದ ಸಂತಸವಾದೀತು. ಶುಭವಾರ್ತೆ ಇದೆ.

ಮೀನ


ಉದ್ಯೋಗಿ ವರ್ಗದವರಿಗೆ ಮೇಲಧಿಕಾರಿಗಳಿಂದ ಕಿರಿಕಿರಿ ಹೆಚ್ಚಲಿದೆ. ದೇಹಾರೋಗ್ಯದ ಬಗ್ಗೆ ಜಾಗ್ರತೆ ವಹಿಸಿರಿ. ತಂದೆ, ಮಕ್ಕಳೊಳಗೆ ಸ್ವಾಭಿಮಾನದ ತಿಕ್ಕಾಟವಾದೀತು. ನೌಕರ ವರ್ಗಕ್ಕೆ ವರ್ಗಾವಣೆಯ ಸಂಭವ.

Advertisement

Udayavani is now on Telegram. Click here to join our channel and stay updated with the latest news.

Next