Advertisement

ಅವಿವಾಹಿತರಿಗೆ ಕಂಕಣಬಲ, ಉದ್ಯೋಗಿ ಮಹಿಳೆಯರಿಗೆ ಭಡ್ತಿ: ಹೇಗಿದೆ ಇಂದಿನ ನಿಮ್ಮ ರಾಶಿ ಭವಿಷ್ಯ !

07:30 AM Jan 27, 2021 | Team Udayavani |

ಮೇಷ: ಜಗಳ, ಕಿರಿಕಿರಿಯನ್ನು ನ್ಯಾಯವಾಗಿ ಪರಿಹರಿಸುವ ಬಗೆಯನ್ನು ಯೋಚಿಸಿರಿ. ವೈಯಕ್ತಿಕವಾಗಿ ಘನತೆ, ಗೌರವಗಳನ್ನು ಕಾಪಾಡಿಕೊಂಡು ಬರುವ ಮನೋವೃತ್ತಿ ಉಳ್ಳವರಾಗಿರುತ್ತಾರೆ. ಅನಾವಶ್ಯಕ ವೆಚ್ಚ ಬೇಡ.

Advertisement

ವೃಷಭ: ಆರ್ಥಿಕ ವಿಚಾರದಲ್ಲಿ ಮಿತವ್ಯಯಿಗಳಾದರೂ ಸಂದರ್ಭ ಬಂದಾಗ ದಾರಾಳಿಯಾದ ನೀವು ತುಂಬಾ ನಂಬಿ ಕಳಕೊಳ್ಳುವಿರಿ. ಎಲ್ಲರೊಂದಿಗೆ ಮಧುರ ಭಾಂದವ್ಯವನ್ನು ಹೊಂದಿರುವಿರಿ. ದಾರಾಳಿತನವನ್ನು ಬಿಡಿರಿ.

ಮಿಥುನ: ನಿಮ್ಮ ಸ್ವಬಲದಿಂದಲೇ ಉನ್ನತಿಯನ್ನು ಹೊಂದುವ ಗುಣ ಇವರದ್ದು. ಬರವಣಿಗೆಯು ನಿಮಗೆ ಲಾಭವನ್ನು ತರಲಿದೆ. ನೀವು ನಂಬಿಕೊಂಡು ಬಂದ ಜನರೇ ನಿಮಗೆ ದ್ರೋಹ ಮಾಡುವರು. ಮುನ್ನಡೆಯಿರಿ.

ಕರ್ಕ: ಮಿಶ್ರಫ‌ಲಗಳ ಅನುಭವ ನಿಮಗಾಗಲಿದೆ. ದೈವಾನುಗ್ರಹದಿಂದ ಲಾಭಗಳು ದಾರಾಳವಾಗಿ ನಿಮ್ಮ ಕೈ ಸೇರುವುದು. ಹೊಸ ವೃತ್ತಿಯ ಪ್ರಾರಂಭಕ್ಕೆ ಇದು ಸಕಾಲವಲ್ಲಾ. ಕುಟುಂಬದಲ್ಲಿ ಮಂಗಲ ಕಾರ್ಯದ ಸಂಭ್ರಮವು ಕೂಡಿ ಬಂದೀತು.

ಸಿಂಹ: ಸ್ವತಂತ್ರ ಜೀವನದ ಅಪೇಕ್ಷೆಯಿಂದ, ಪರಿಶ್ರಮದಿಂದ ಎಲ್ಲವನ್ನೂ ಪಡೆಯುವ ಆಸಕ್ತಿ ನಿಮ್ಮದಾಗಲಿದೆ. ತಂದೆ ತಾಯಿಯವರಲ್ಲಿ ಗೌರವ ಹಾಗೂ ಸ್ವಂತ ಕುಟುಂಬದಲ್ಲಿ ಆಸಕ್ತಿ, ಪ್ರೀತಿ ಹೊಂದಿರುವಿರಿ. ಒಳ್ಳೆಯ ಕೆಲಸ.

Advertisement

ಕನ್ಯಾ: ವೃತ್ತಿರಂಗದಲ್ಲಿ ಸ್ವಲ್ಪ ಕಿರಿಕಿರಿ ಕಂಡು ಬರಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಕೊಂಚ ಹಿನ್ನಡೆ ತೋರಿ ಬರಲಿದೆ. ಮನೆಯಲ್ಲಿ ಪತ್ನಿಯಿಂದ ಉತ್ತಮ ಸಹಕಾರ ದೊರಕಲಿದೆ. ವಿಹಾರಾರ್ಥವಾಗಿ ಪ್ರಯಾಣ ಮಾಡಲಿದ್ದೀರಿ. ಸಂತಸವಿದೆ.

ತುಲಾ: ದೂರ ಪ್ರಯಾಣ ಒದಗಿಬರಲಿದೆ. ಆಭರಣಗಳ ಖರೀದಿ ಇರುತ್ತದೆ. ಅವಿವಾಹಿತರಿಗೆ ಕಂಕಣಬಲ ಒದಗಿ ಬರಲಿದೆ. ಉದ್ಯೋಗಿ ಮಹಿಳೆಯರಿಗೆ ಭಡ್ತಿ ಸಂಭವವಿದೆ. ವಿವಿಧ ಮೂಲಗಳಿಂದ ಧನಪ್ರಾಪ್ತಿ.

ವೃಶ್ಚಿಕ: ಹೊಸ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವಿರಿ. ಲಾಭ ಯಥೇತ್ಛ ಕಂಡು ಬಾರದಿದ್ದರೂ ನಷ್ಟ ಇರದು. ದಿನೇ ದಿನೇ ಆರೋಗ್ಯದಲ್ಲಿ ಅಭಿವೃದ್ಧಿ ಕಂಡು ಬರಲಿದೆ. ದೈವಾನುಗ್ರಹಕ್ಕಾಗಿ ಧರ್ಮಕಾರ್ಯಗಳು ನಡೆಯಲಿವೆ.

ಧನು: ದಿನೇ ದಿನೇ ಅಭಿವೃದ್ಧಿ ತೋರಿಬರುವುದು. ಪತ್ನಿಗೆ  ಉದ್ಯೋಗವು ದೊರೆತು ಸಮಾಧಾನವಾದೀತು. ನೌಕರ ವರ್ಗಕ್ಕೆ ಉತ್ತಮ ದಿನವಾಗಿದೆ. ವಿದ್ಯಾಭ್ಯಾಸದಲ್ಲಿ ಏಕಾಗ್ರತೆಯು ಹೆಚ್ಚಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ.

ಮಕರ: ಮನಸ್ಸು ಸಮಾಧಾನದಿಂದ ಇರುವುದು. ಕೆಲಸ ಕಾರ್ಯಗಳಲ್ಲಿ ಉತ್ಸಾಹವು ತೋರಿಬರುವುದು. ಮಾತಾಪಿತರ ಮಾತುಗಳನ್ನು ನಡೆಸಿಕೊಡುವಿರಿ. ಯಾರೊಂದಿಗೂ ವಾದ ವಿವಾದಕ್ಕೆ ಹೋಗದಿದ್ದರೆ ಉತ್ತಮ.

ಕುಂಭ: ಗೃಹ ನಿರ್ಮಾಣ ಕಾರ್ಯಕ್ಕೆ ಅಡ್ಡಿ ಆತಂಕಗಳು ಒದಗಿಬಂದೀತು. ಮನೆಯಲ್ಲಿ ಶುಭಮಂಗಲ ಕಾರ್ಯದ ಚಿಂತನೆ ನಡೆಯಲಿದೆ. ಆರ್ಥಿಕವಾಗಿ ಖರ್ಚುಗಳೇಅಧಿಕವಾದಾವು. ಸಂಚಾರದಲ್ಲಿ ಜಾಗ್ರತೆ ಮಾಡುವುದು.

ಮೀನ: ದೇವತಾನುಗ್ರಹದಿಂದ ಕೆಲಸ ಕಾರ್ಯಗಳು ಪ್ರಯತ್ನ ಬಲದಿಂದಲೇ ನಡೆಯಬಹುದು. ಆರ್ಥಿಕ ವಾಗಿ ಖರ್ಚುವೆಚ್ಚಗಳು ಅಧಿಕವಾದಾವು. ದೂರ ಸಂಚಾರದಲ್ಲಿ ಕಾರ್ಯಸಿದ್ಧಿ ಇರುತ್ತದೆ. ಹಳೇ ಸ್ನೇಹಿತರ ಭೇಟಿ ಇರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next