Advertisement

ದಿನಭವಿಷ್ಯ: ಅಪರಿಚಿತರೊಡನೆ ಅನಾವಶ್ಯಕವಾಗಿ ಸ್ನೇಹಕ್ಕೆ ಅವಕಾಶವನ್ನು ಕೊಡದಿರಿ

07:31 AM Feb 10, 2021 | Team Udayavani |

ಮೇಷ: ರಾಜಕೀಯ ವಲಯದಲ್ಲಿ ಆಗಾಗ ನಿಮ್ಮ ವರ್ಚಸ್ಸು ಕಳೆಗುಂದಲಿದೆ. ಆರೋಗ್ಯದ ಮೇಲೆ ನಕಾರಾತ್ಮಕ ಪ್ರಭಾವ ಉಂಟು ಮಾಡಲಿದೆ. ಅಪರಿಚಿತರೊಡನೆ ಅನಾವಶ್ಯಕವಾಗಿ ಸ್ನೇಹಕ್ಕೆ ಅವಕಾಶವನ್ನು ಕೊಡದಿರಿ.

Advertisement

ವೃಷಭ: ಆಗಾಗ ಆತಂಕಗಳನ್ನು ಸೃಷ್ಟಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಇದಕ್ಕೆಲ್ಲಾ ರಾಹು ಗ್ರಹದ ಪ್ರತಿಕೂಲತೆಯು ಕಾರಣವಾಗಲಿದೆ. ಮಾನಸಿಕ ಅಸ್ಥಿರತೆಯು ಉದ್ವೇಗಕ್ಕೆ ಕಾರಣವಾಗಲಿದೆ. ಕಿರು ಸಂಚಾರವಿದೆ.

ಮಿಥುನ: ವ್ಯಾಪಾರ, ವ್ಯವಹಾರದಲ್ಲಿ ಯಾರನ್ನೂ ನಂಬದಂತಹ ಪರಿಸ್ಥಿತಿಯು ಉದ್ಭವವಾಗಲಿದೆ. ಕಾರ್ಯ ರಂಗದಲ್ಲಿ ಹೊಸಬರು ನಿಮ್ಮನ್ನು ಸಕಾರಾತ್ಮಕವಾಗಿ ಸ್ಪಂದಿಸಲಿದ್ದಾರೆ. ಅನೇಕ ರೀತಿಯಲ್ಲಿ ವಿರೋಧಿಗಳು ಕಿರುಕುಳ ನೀಡಿಯಾರು.

ಕರ್ಕ: ಬಿಡುವಿನ ವೇಳೆಯಲ್ಲಿ ಕೆಲವೊಂದು ವಿಚಾರಗಳಲ್ಲಿ ಆದಾಯ ತರುವ ನಿರ್ದಿಷ್ಟ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿರಿ. ವಿದ್ಯಾರ್ಥಿಗಳಿಗಂತೂ ಏಕಾಗ್ರತೆ ಅಸಾಧ್ಯ ಅನಿಸಬಹುದು. ಆತ್ಮಸ್ಥೈರ್ಯ ಹಾಗೂ ಪರಿಶ್ರಮ ಅಗತ್ಯವಿದೆ.

ಸಿಂಹ: ಹಣಕಾಸಿನ ವಿಚಾರದಲ್ಲಿ ಹಲವು ದಾರಿಗಳು ತೆರೆದರೂ ಖರ್ಚುವೆಚ್ಚಗಳು ಅಧಿಕವಾಗಿ ತೋರಿಬರಲಿದೆ. ವೃತ್ತಿರಂಗದಲ್ಲಿ ನಿಮ್ಮ ನಡೆ ಎಚ್ಚರಿಕೆಯದಾಗಿರಲಿ. ಸಾಂಸಾರಿಕವಾಗಿ ಸಂತೋಷ, ತೃಪ್ತಿ ಇದ್ದರೂ ಉದ್ವೇಗವಿರುತ್ತದೆ.

Advertisement

ಕನ್ಯಾ: ಇತರರ ಸಾಲಕ್ಕೆ ಜಾಮೀನುದಾರರಾಗಿ ನಿಲ್ಲಬೇಡಿರಿ. ವಂಚನೆಗೆ ಅಸ್ಪದವಾದೀತು. ರಾಜಕೀಯ ವರ್ಗದವರಿಗೆ ಯಶಸ್ಸು ತೋರಿಬರಲಿದೆ. ಹಿರಿಯರ ಆರೋಗ್ಯಭಾಗ್ಯಕ್ಕಾಗಿ ಚಿಕಿತ್ಸೆಯ ಖರ್ಚು ತರುವುದು.

ತುಲಾ: ವೈವಾಹಿಕ ಭಾಗ್ಯಕ್ಕಾಗಿ ಯೋಗ್ಯ ವಯಸ್ಕರು ಹೊಂದಿಕೊಳ್ಳಬೇಕಾದೀತು. ಪ್ರಯತ್ನಬಲದಿಂದ ಹಿಡಿದ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ ಇರುತ್ತದೆ. ಇತರ ವ್ಯವಹಾರಗಳಲ್ಲಿ ಲಾಭದಾಯಕ ಆದಾಯ ಕಂಡುಬರಲಿದೆ.

ವೃಶ್ಚಿಕ: ದೂರ ಸಂಚಾರದಲ್ಲಿ ಕಾರ್ಯನುಕೂಲವಾಗಿ ಸಮಾಧಾನಕ್ಕೆ ಕಾರಣವಾಗಲಿದೆ. ತೀರ್ಥಕ್ಷೇತ್ರದ ಭೇಟಿ ಇರುತ್ತದೆ. ಕೆಲವೊಂದು ಅಶುಭ ಗ್ರಹಗಳ ನಡೆಯ ಸಂದರ್ಭದಿಂದ ತುಸುಮಟ್ಟಿನ ಏರುಪೇರು ಕಂಡುಬಂದೀತು.

ಧನು: ಗುರುವಿನ ಲಾಭಸ್ಥಾನದಿಂದ ವ್ಯಾಪಾರ, ವ್ಯವಹಾರ, ವಾಣಿಜ್ಯೋದ್ಯಮಿಗಳಿಗೆ, ಶಿಕ್ಷಣ ತಜ್ಞರಿಗೆ ಇದು ಉತ್ತಮ ಕಾಲವಾಗಿದೆ. ಅವಿವಾಹಿತರು ಮಂಗಲಕಾರ್ಯವನ್ನು ಶೀಘ್ರವಾಗಿ ಮುಗಿಸುವ ಚಿಂತನೆ ಮಾಡಿಯಾರು.

ಮಕರ: ಸರಕಾರಿ ಉದ್ಯೋಗಿಗಳಿಗೆ ಮುನ್ನಡೆ ಕಂಡು ಬರುವುದು. ಅಲರ್ಜಿಯಿಂದ ಆರೋಗ್ಯ ಸ್ಥಿತಿಯಲ್ಲಿ ಏರುಪೇರು ಕಂಡುಬರಲಿದೆ. ಬಾಳಸಂಗಾತಿಯ ಕಿರಿಕಿರಿಗಳು ಆಗಾಗ ತಲೆತಿನ್ನಲಿವೆ. ಎಲ್ಲಾ ಸಮಸ್ಯೆಗಳನ್ನು ಎದುರಿಸುವುದು.

ಕುಂಭ: ಗೃಹದಲ್ಲಿ ಶಾಂತಿ, ಸಮಾಧಾನಗಳು ಗೋಚರಕ್ಕೆ ಬರಲಿದೆ. ಆರ್ಥಿಕ ಬಿಕ್ಕಟ್ಟು ಆಗಾಗ ಆತಂಕ ತಂದರೂ ಧನಾಗಮನ ಇದ್ದೇ ಇರುತ್ತದೆ. ಚಿಕ್ಕಪುಟ್ಟ ಬಂಡವಾಳದವರಿಗೆ ಸ್ವಲ್ಪ ಲಾಭವಿರುತ್ತದೆ. ಕುಟುಂಬದಲ್ಲಿ ನೆಮ್ಮದಿ ಇರುತ್ತದೆ.

ಮೀನ: ದೈವಾನುಗ್ರಹವು ಹೆಚ್ಚಿನ ಆತ್ಮವಿಶ್ವಾಸವನ್ನು ನೀಡಲಿದೆ. ಇಳಿತಗಳ್ಳೋ ವಿಳಂಬಗಳ್ಳೋ ಆಗಾಗ ಕಾಣಿಸಿ ಕೊಂಡರೂ ಹಂತಹಂತವಾಗಿ ನೆಮ್ಮದಿ ಪಡೆಯಲಿದ್ದೀರಿ. ವೃತ್ತಿರಂಗದಲ್ಲಿ ಲವಲವಿಕೆ, ಉತ್ಸಾಹ ಕಂಡುಬರಲಿ.

Advertisement

Udayavani is now on Telegram. Click here to join our channel and stay updated with the latest news.

Next