Advertisement

Daily Horoscope; ವೈದ್ಯರೊಂದಿಗೆ ಸಮಾಲೋಚನೆಯಿಂದ ಸಂಶಯ ನಿವಾರಣೆ

07:16 AM Sep 04, 2024 | Team Udayavani |

ಮೇಷ: ಮುದ ನೀಡುವ ಅನಿರೀಕ್ಷಿತ ಘಟನೆಗಳು. ಉದ್ಯೋಗಸ್ಥರಿಗೆ ಸಹವರ್ತಿ ಗಳಿಂದ ಸಕಾಲಿಕ ನೆರವು. ವ್ಯವಹಾರ ಸ್ಥರಿಗೆ ದೇವತೋಪಾಸನೆಯಿಂದ ಕ್ಷಿಪ್ರಾನುಗ್ರಹ. ಹಿರಿಯರಿಗೆ, ಗೃಹಿಣಿ, ಮಕ್ಕಳಿಗೆ ಹರ್ಷದ ಸನ್ನಿವೇಶ.

Advertisement

ವೃಷಭ: ಭೌತಿಕ ಅನುಕೂಲತೆಗಳನ್ನು ಕಲ್ಪಿಸುವ ಯೋಜನೆಗಳಿಗೆ ಚಾಲನೆ. ದೀರ್ಘಾವಧಿ ಹೂಡಿಕೆಗಳಲ್ಲಿ ವಿಶೇಷ ಆಸಕ್ತಿ. ಹಿರಿಯರ, ಗೃಹಿಣಿಯರ ಆರೋಗ್ಯ ಉತ್ತಮ. ಉಳಿತಾಯ ಯೋಜನೆಗಳ ಏಜೆಂಟರಿಗೆ ಒಳ್ಳೆಯ ದಿನ.

ಮಿಥುನ: ಮನೋಬಲವೃದ್ಧಿಯಿಂದ ಸಕಲ ಕಾರ್ಯಸಿದ್ಧಿ ಉದ್ಯೋಗ ರಂಗದಲ್ಲಿ ಹೆಚ್ಚಿನ ಜವಾಬ್ದಾರಿ. ಕರಕುಶಲ ಸಾಮಗ್ರಿಗಳ ನಿರ್ಮಾಪಕರಿಗೆ ಏಳಿಗೆಯ ಕಾಲ. ಗೃಹಿಣಿಯರಿಗೆ ಸ್ವಂತ ಆದಾಯ ಗಳಿಕೆಯಲ್ಲಿ ಆಸಕ್ತಿ.

ಕರ್ಕಾಟಕ: ಉಳಿತಾಯ ಯೋಜನೆಗಳಲ್ಲಿ ಆಸಕ್ತಿ. ಕಟ್ಟಡ ನಿರ್ಮಾಣ, ಆಸ್ತಿ ಖರೀದಿ-ಮಾರಾಟ ವ್ಯವಹಾರ ನಿಧಾನ ಪ್ರಗತಿ. ವೈದ್ಯರ ಕೀರ್ತಿ ವರ್ಧನೆ. ಉದ್ಯೋಗ ಅರಸುತ್ತಿರುವವರಿಗೆ ಸದವಕಾಶ. ಪೂರ್ವದಿಕ್ಕಿನಿಂದ ಶುಭಸಮಾಚಾರ.

ಸಿಂಹ: ಉದ್ಯೋಗ, ವ್ಯವಹಾರಗಳ ಪ್ರಗತಿ ನಿರಾತಂಕ. ಪಾರದರ್ಶಕ ನಡೆಯಿಂದ ವಿಶ್ವಾಸ ವೃದ್ಧಿ. ದೂರದ ಬಂಧುಗಳ ಆಗಮನದಿಂದ ಸಂತಸ. ವ್ಯವಹಾರ ಕ್ಷೇತ್ರ ವಿಸ್ತರಣೆಯ ಕುರಿತು ವಿಮರ್ಶೆ. ಮಕ್ಕಳಿಗೆ ವ್ಯಾಸಂಗ, ಮನೋರಂಜನೆ ಎರಡರಲ್ಲೂ ಆಸಕ್ತಿ.

Advertisement

ಕನ್ಯಾ: ಮನೋರಂಜನೆ ಕೇಂದ್ರಿತ ಉದ್ಯಮಗಳಿಗೆ ಪ್ರಗತಿ.ಕ್ರೀಡಾ ಸಾಮಗ್ರಿ ಉತ್ಪಾದಕರಿಗೆ ಆರ್ಥಿಕ ಲಾಭ. ಮಕ್ಕಳ ವಿವಾಹ ಮಾತುಕತೆಯಲ್ಲಿ ಮುನ್ನಡೆ. ಗೃಹೋಪಕರಣಗಳ ಖರೀದಿಗೆ ಧನವ್ಯಯ. ವ್ಯವಹಾರ ಸಂಬಂಧ ಉತ್ತರಕ್ಕೆ ಪ್ರಯಾಣ.

ತುಲಾ: ಉದ್ಯೋಗ ಸ್ಥಾನದಲ್ಲಿ ಅನುಕೂಲ. ಬಂಧುವರ್ಗದವರೊಡನೆ ದೇವಾಲಯ ದರ್ಶನ. ಲೇವಾದೇವಿ ವ್ಯವಹಾರಸ್ಥರಿಗೆ ಹಿನ್ನಡೆ. ವೈದ್ಯರೊಂದಿಗೆ ಸಮಾಲೋಚನೆಯಿಂದ ಸಂಶಯ ನಿವಾರಣೆ.ಅವಿವಾಹಿತರಿಗೆ ವಿವಾಹ ಯೋಗ.

ವೃಶ್ಚಿಕ: ಅರ್ಹರಿಗೆ ಉಪಕಾರ ಮಾಡುವ ಅವಕಾಶ ಪ್ರಾಪ್ತಿ. ಮಕ್ಕಳ ಹೊಸ ಉದ್ಯಮ ಯೋಜನೆಗೆ ಚಾಲನೆ. ವಸ್ತ್ರ ಆಭರಣ, ಶೋಕಿ ಸಾಮಗ್ರಿ ವ್ಯಾಪಾರಿಗಳ ಆದಾಯ ವೃದ್ಧಿ. ಕರಕುಶಲ ಸಾಮಗ್ರಿ ತಯಾರಕರಿಗೆ ಉದ್ಯೋಗಾವಕಾಶ.

ಧನು: ಉದ್ಯೋಗದಲ್ಲಿ ಯೋಗ್ಯತೆಗೆ ಸರಿಯಾದ ಸ್ಥಾನ ಲಭ್ಯ. ಸಣ್ಣ ಪ್ರಮಾಣದ ಗೃಹೋದ್ಯಮ ಆರಂಭ. ಸ್ವಂತ ಮನೆ ಹೊಂದುವ ಹಂಬಲ ಈಡೇರುವ ಭರವಸೆ. ಊರಿನ ದೇವಾಲಯಕ್ಕೆ ಸಂದರ್ಶನ.

ಮಕರ: ನಿಗದಿತ ಸಮಯದಲ್ಲಿ ಕೆಲಸ ಮುಗಿಸುವ ಸಮಾಧಾನ. ಮಕ್ಕಳ ಶೈಕ್ಷಣಿಕ ಪ್ರಗತಿಯ ಚಿಂತೆ. ಸಿವಿಲ್‌ ಎಂಜಿನಿಯರರು, ಕಂಟ್ರಾಕ್ಟರುಗಳಿಗೆ ಹೊಸ ಕೆಲಸಕ್ಕೆ ಆಹ್ವಾನ.ಲೇವಾದೇವಿ ವ್ಯವಹಾರದಲ್ಲಿ ಕಿಂಚಿತ್‌ ಲಾಭ.

ಕುಂಭ: ನಿತ್ಯದ ವ್ಯವಹಾರಗಳಲ್ಲಿ ಕೊಂಚ ಕಿರಿಕಿರಿ. ಉದ್ಯೋಗಸ್ಥರಿಗೆ ಹಿತಶತ್ರುಗಳಿಂದ ತೊಂದರೆ. ಸಾಮಾಜಿಕ ಕ್ಷೇತ್ರದಲ್ಲಿ ಶುಭಸೂಚನೆಯ ವಿದ್ಯಮಾನಗಳು. ಮುದ್ರಣ ಸಾಮಗ್ರಿ, ಸ್ಟೇಶನರಿ ವ್ಯಾಪಾರಿಗಳಿಗೆ ಬೇಡಿಕೆ ಹೆಚ್ಚಳ.

ಮೀನ: ದಿನನಿತ್ಯದ ವ್ಯವಹಾರಗಳಲ್ಲಿ ಯಶಸ್ಸು.ಸರಕಾರಿ ಕಾರ್ಯಾಲಯಗಳಲ್ಲಿ ಸಹಕಾರ.ಹಣಕಾಸು ವ್ಯವಹಾರ
ನಡೆಸುವವರಿಗೆ ಕೊಂಚ ಹಿನ್ನಡೆ. ಕೃಷ್ಯುತ್ಪನ್ನ ಮಾರಾಟದಿಂದ ಮಧ್ಯಮ ಲಾಭ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ ವೃದ್ಧಿಯಿಂದ ನೆಮ್ಮದಿ.

Advertisement

Udayavani is now on Telegram. Click here to join our channel and stay updated with the latest news.

Next