Advertisement

ಈ ರಾಶಿಯವರು ಇಂದು ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡುವುದು ತುಂಬಾ ಮುಖ್ಯ

07:55 AM Oct 17, 2021 | Team Udayavani |

ಮೇಷ: ದೈಹಿಕ ಆರೋಗ್ಯ ಉತ್ತಮ. ಉದ್ಯೋಗ ವ್ಯವಹಾರಗಳಲ್ಲಿ ದುಃಖ, ಮೋಸ, ವಂಚನೆ, ಚರ್ಚೆ ಇತ್ಯಾದಿ ಗಳು ಆಗದಂತೆ ಎಚ್ಚರಿಕೆಯ ನಡೆ ಅಗತ್ಯ. ವಿಳಂಬದ ತಾಳ್ಮೆಯ ನಿರ್ಣಯದಿಂದ ಸುಖ ಫ‌ಲ ಒದಗೀತು. ಧನಸಂಪತ್ತಿನ ವೃದ್ಧಿ.

Advertisement

ವೃಷಭ: ಧೈರ್ಯದಿಂದ ಕೂಡಿದ ದಿನ. ವಿದ್ಯೆ ವಿನಯ ನಡೆಯಿಂದ ಸ್ಥಾನಮಾನ ವೃದ್ಧಿ. ನಿರೀಕ್ಷೆಗೂ ಮೀರಿದ ಧನ ಸಂಪತ್ತು ಲಭ್ಯ. ಸಂಪೂರ್ಣ ದೇವತಾನುಗ್ರಹದಿಂದ ಕೂಡಿದ ದಿನ. ಎಲ್ಲ ಕೆಲಸ ಕಾರ್ಯಗಳಲ್ಲೂ ಶ್ರೇಯಸ್ಸು. ಕೀರ್ತಿ ಲಭ್ಯ.

ಮಿಥುನ: ಆರೋಗ್ಯ ಗಮನಿಸಿ. ತಾಳ್ಮೆಯಿಂದ ಕಾರ್ಯ ನಿರ್ವಹಿಸಿ. ದಂಪತಿಗಳು ಪರಸ್ಪರ ಪ್ರೋತ್ಸಾಹಿಸಿ ನಿರೀಕ್ಷಿತ ಸುಖ ಅನುಭವವಾದೀತು. ಉತ್ತಮ ಧನಾರ್ಜನೆ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿ. ಅಧ್ಯಯನಶೀಲರಿಗೆ ಮನ್ನಣೆ.

ಕಟಕ: ಹಠ ಪ್ರವೃತ್ತಿಯಿಂದ ತೊಂದರೆ ಸಾಧ್ಯ. ಅನಗತ್ಯ ವಿಚಾರಗಳಿಗೆ ಕಿವಿ ಕೊಡದಿರಿ. ಹಣಕಾಸಿನ ವಿಚಾರದಲ್ಲಿ ಸ್ಪಷ್ಟತೆಗೆ ಆದ್ಯತೆ ನೀಡಿ. ಹೆಚ್ಚಿನ ಪರಿಶ್ರಮದಿಂದ ಕೂಡಿದ ಉದ್ಯೋಗ ವ್ಯವಹಾರದಿಂದ ದೇಹಾಯಾಸ ಸಂಭವ.

ಸಿಂಹ: ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ನಿಖರತೆ. ಚುರುಕುತನ ಲೆಕ್ಕಾಚಾರ ಸ್ವಭಾವದಿಂದ ನಿರೀಕ್ಷಿತ ಸ್ಥಾನ ಅಧಿಕಾರ ಲಭ್ಯ. ಧನಾರ್ಜನೆ ಮಧ್ಯಮ. ಬಂಧುಮಿತ್ರರ ಸಹಕಾರ. ಹಿರಿಯರ ಆರೋಗ್ಯ ಗಮನಿಸಿ.

Advertisement

ಕನ್ಯಾ: ದಾಂಪತ್ಯದಲ್ಲಿ ಅನುರಾಗ ವೃದ್ಧಿ. ಸಣ್ಣ ಪ್ರಯಾಣ ಸಂಭವ. ಅವಿವಾಹಿತರಿಗೆ ಉತ್ತಮ ಸಂಬಂಧ ಒದಗುವ ಕಾಲ. ನಿರೀಕ್ಷೆಗೂ ಮೀರಿದ ಧನಾರ್ಜನೆ. ಹಿರಿಯರ ಆರೋಗ್ಯ ಸುದೃಢ. ವಿದ್ಯಾರ್ಥಿಗಳಿಗೆ ಶ್ರಮಕ್ಕೆ ತಕ್ಕ ಪ್ರತಿಫ‌ಲ ಸಿಕ್ಕಿದ ಸಂತೋಷ.

ತುಲಾ: ಅತಿಯಾದ ಆತ್ಮಾಭಿಮಾನ ಸಲ್ಲದು. ತಾಳ್ಮೆ ಸಹನೆಯಿಂದ ನಡೆ ಹೆಚ್ಚಿನ ಪ್ರಗತಿ ಗೌರವ ಪ್ರಾಪ್ತಿ. ಧನಾರ್ಜನೆಗೆ ಸರಿಸಮವಾದ ಖರ್ಚು ತೋರೀತು. ಗುರುಹಿರಿಯರಿಂದ ಪ್ರಾಪ್ತವಾದ ಉತ್ತಮ ಮಾರ್ಗದರ್ಶನ.

ವೃಶ್ಚಿಕ: ಗುರುಹಿರಿಯರ ಸಹಕಾರದಿಂದ ಸುಖವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ಜವಾಬ್ದಾರಿ. ಬುದ್ಧಿವಂತಿಕೆ ಯಿಂದ ಕೂಡಿದ ಕಾರ್ಯವೈಖರಿ. ಪರಿಶ್ರಮಕ್ಕೆ ತಕ್ಕ ಧನಾರ್ಜನೆ ಪ್ರಾಪ್ತಿ. ಭೂಮಿ ಆಸ್ತಿ ವಿಚಾರಗಳಲ್ಲಿ ಮುನ್ನಡೆ.

ಧನು: ದೀರ್ಘ‌ ಪ್ರಯಾಣ. ಉದ್ಯೋಗ ವ್ಯವಹಾರ ದಲ್ಲಿ ಪ್ರಗತಿ. ಆದರೆ ದೇಹಾಯಾಸ ಸಂಭವ. ಸಹೋದ್ಯೋಗಿಗಳ ಸಹಕಾರ ಪರಿಶ್ರಮದಿಂದ ಕಾರ್ಯ ಸಫ‌ಲತೆ. ಗೃಹೋಪವಸ್ತುಗಳ ಸಂಗ್ರಹಕ್ಕೆ ಅಧಿಕ ಧನವ್ಯಯ ಸಂಭವ.

ಮಕರ: ದೈಹಿಕ ಮಾನಸಿಕ ಆರೋಗ್ಯ ವೃದ್ಧಿ. ಉದ್ಯೋಗ ವ್ಯವಹಾರಗಳಲ್ಲಿ ನಿರೀಕ್ಷೆಗೂ ಮೀರಿದ ಪ್ರಗತಿ. ಜನಮನ್ನಣೆ ಗೌರವಾದಿ ವೃದ್ಧಿ. ಅಧಿಕ ಧನ ಸಂಚಯನ. ಮಕ್ಕಳಿಂದ ಸುಖ ಸಂತೋಷ. ಸಣ್ಣ ಪ್ರಯಾಣ ಸಂಭವ.

ಕುಂಭ: ಅಭಿವೃದ್ಧಿದಾಯಕ ಚಟುವಟಿಕೆಗಳು. ಆರೋಗ್ಯ ದಲ್ಲಿ ಸುಧಾರಣೆ. ಸಂದಭೋìಚಿತವಾದ ಕಾರ್ಯ ವೈಖರಿ. ಉತ್ತಮ ಧನ ಲಾಭ. ಎಲ್ಲ ಪ್ರೀತಿ ಸಂಪಾದನೆ. ಗುರುಹಿರಿಯ ರಿಂದ ಪ್ರೋತ್ಸಾಹ. ಗೃಹದಲ್ಲಿ ಸಂಭ್ರಮದ ವಾತಾವರಣ. 
ಮೀನ: ಅನಗತ್ಯ ಒತ್ತಡದಿಂದ ದೇಹಾಯಾಸ ಸಂಭವ. ಆರೋಗ್ಯ ವಿಚಾರದಲ್ಲಿ ಉದಾಸೀನತೆ ತೋರದಿರಿ. ದೂರದ ವ್ಯವಹಾರದಿಂದ ಧನಾರ್ಜನೆ ವೃದ್ಧಿ. ತಾಳ್ಮೆ ಸಹನೆಯಿಂದ ಕಾರ್ಯ ಪ್ರವೃತ್ತರಾದರೆ ಅಭವೃದ್ಧಿ ಸಂಭವ.
Advertisement

Udayavani is now on Telegram. Click here to join our channel and stay updated with the latest news.

Next