Advertisement

ನಿಮ್ಮ ಗ್ರಹಬಲ:  ಈ ರಾಶಿಯ ವಿವಾಹಾಪೇಕ್ಷಿಗಳಿಗೆ ಉತ್ತಮ ಕನ್ಯೆ ದೊರೆತಾಳು

07:18 AM May 19, 2021 | Team Udayavani |

19-05-2021

Advertisement

ಮೇಷ: ಕಾರ್ಯಕ್ಷೇತ್ರದಲ್ಲಿ ಕಾರ್ಯ ಒತ್ತಡದಿಂದ ದ್ವಂದ್ವ ವಿಚಾರಗಳು ತೋರಿಬಂದಾವು. ಹಣಕಾಸಿನ ವಿಚಾರದಲ್ಲಿ ವಿವಾದಗಳು ಹುಟ್ಟು ಹಾಕಲಿದೆ. ಜಾಗ್ರತೆ ವಹಿಸಿರಿ. ಹಣವೇ ಮುಖ್ಯವಲ್ಲ. ಮಾನವೇ ಮುಖ್ಯವೆಂದು ತಿಳಿದಿರಲಿ.

ವೃಷಭ: ಪಾಲುದಾರಿಕೆಯ ವ್ಯವಹಾರವು ಸಲ್ಲದು. ಮಾಡಿದ್ದಲ್ಲಿ ಲೆಕ್ಕಚಾರವನ್ನು ಸರಿಯಾಗಿಟ್ಟುಕೊಂಡು ಮುನ್ನಡೆದರೆ ಉತ್ತಮ. ಕ್ರಯ-ವಿಕ್ರಯಗಳಲ್ಲಿ ಪ್ರಗತಿ ಸಾಧಿಸಲಿದ್ದೀರಿ. ಆರ್ಥಿಕವಾಗಿ ಅಂತಹ ಉನ್ನತಿಯು ಗೋಚರಕ್ಕೆ ಬಾರದು.

ಮಿಥುನ: ಅವಿವಾಹಿತರಿಗೆ ವೈವಾಹಿಕ ಸಂಬಂಧಗಳು ಕೂಡಿಬಂದು ಮನಸ್ಸಿನ ಇಚ್ಛೆ ಪೂರೈಸುವುದು. ಸಾಂಸಾರಿಕವಾಗಿ ನೆಮ್ಮದಿಯು ಕಂಡುಬಂದೀತು. ಯೋಜನಾಬದ್ಧ ಕಾರ್ಯತಂತ್ರಗಳನ್ನು ರೂಪಿಸಿಕೊಂಡರೆ ಯಶಸ್ಸು ನಿಮ್ಮ ಪಾಲಿಗಿದೆ.

ಕರ್ಕ: ಹಣಕಾಸಿನ ವಿಚಾರದಲ್ಲಿ ಪ್ರಮಾದಕ್ಕೆ ಕಾರಣವಾಗದಂತೆ ಜಾಗ್ರತೆಯಾಗಿ ನಡೆಯಿರಿ. ಪ್ರಯಾಣವು ಕೂಡಿ ಬಂದರೆ ಅದು ಫ‌ಲ ನೀಡಲಿದೆ. ನಿರುದ್ಯೋಗಿಗಳ ಕನಸು ನನಸಾಗಲಿದೆ. ವಿವಾಹಾಪೇಕ್ಷಿಗಳಿಗೆ ಉತ್ತಮ ಕನ್ಯೆ ದೊರೆತಾಳು.

Advertisement

ಸಿಂಹ:ಆತ್ಮೀಯರ ಸಕಾಲಿಕ ನೆರವು ಹೆಚ್ಚಿನ ಕಾರ್ಯಸಿದ್ಧಿಗೆ  ಸಾಧಕವಾಗುತ್ತದೆ. ದೇವರ ದರ್ಶನ ಭಾಗ್ಯದ ಅವಕಾಶವು ನಿಮಗೆ ನಿಧಾನವಾಗಿ ಕೂಡಿ ಬರುವುದು. ಮನಸ್ಸು ಮರ್ಕಟದಂತೆ ಚಂಚಲತೆಯನ್ನು ತೋರಿಸಲಿದೆ. ಮುನ್ನಡೆಯಿರಿ.

ಕನ್ಯಾ: ಮನೆಯಲ್ಲಿ ನಿಮ್ಮ ಹಠ, ಕೋಪ ಹಾಗೂ ಉದ್ವೇಗದಿಂದ ವಾತಾವರಣ ಕೆಡಲಿದೆ. ನೀವೇ ತೋರಿಸಿಕೊಳ್ಳುವ ಕೆಟ್ಟ ಕೋಪವು ನಿಮ್ಮ ಜೀವನವನ್ನು ನರಕ ಮಾಡಲಿದೆ. ವೈಯಕ್ತಿಕವಾಗಿ ಮಾತು ಕಡಿಮೆ ಮಾಡಿದರೆ ಉತ್ತಮ.

ತುಲಾ: ಗ್ರಹಗಳ ಪ್ರತಿಕೂಲತೆ ಆರ್ಥಿಕವಾಗಿ ಕಂಡು ಬಂದು ಮನಸ್ಸನ್ನು ದೃತಿಗೆಡಿಸಲಿದೆ. ಮನೆಯಲ್ಲಿ ಸುಖ ಸೌಭಾಗ್ಯ ವೃದ್ಧಿಯಾಗಲಿದೆ. ಮಹತ್ವದ ಕೆಲಸ ಕಾರ್ಯಗಳ ಚಿಂತನೆ ನಡೆದೀತು. ಉಷ್ಣ ಪಿತ್ತಾಧಿಕ್ಯ ದೇಹಾಯಾಸ ತರಲಿದೆ.

ವೃಶ್ಚಿಕ: ಬೆಳ್ಳಿ , ಚಿನ್ನದ ವರ್ತಕರಿಗೆ ಲಾಭಾಂಶ ಕಡಿಮೆಯಾಗಲಿದೆ. ವ್ಯವಹಾರದಲ್ಲಿ ನಷ್ಟ ಸಂಭವಿಸಿ ಜೀವನ ನಿರ್ವಹಣೆಯು ಕಷ್ಟಕರವಾದೀತು. ಈತನ್ಮಧ್ಯೆ ಮಳೆಯು ಬಂದು ಬೆಳೆಗಳ ನಷ್ಟ ಸಂಭವಿಸಿ ದುಬಾರಿಯಾದಾವು.

ಧನು: ಬೇಸಾಯ, ಕೃಷಿಕ ಹಾಗೂ ಗೊಬ್ಬರ ವರ್ತಕರಿಗೆ ನಷ್ಟ ಸಂಭವಿಸಲಿದೆ. ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾದೀತು. ಹಾಗಾಗಿ ತುಂಬಾ ಜಾಗ್ರತೆ ವಹಿಸಬೇಕಾದೀತು. ವಿದ್ಯಾಭ್ಯಾಸದಲ್ಲಿ ಮುನ್ನಡೆ ಇದ್ದೀತು.

ಮಕರ: ಅಲರ್ಜಿ ಪೀಡೆಯಿಂದ ಅನಾರೋಗ್ಯದ ಸಾಧ್ಯತೆ ಕಂಡುಬಂದೀತು. ಹಾಲು, ದಿನಸಿ, ತರಕಾರಿ, ಹಣ್ಣು ವ್ಯಾಪಾರಸ್ಥರಿಗೆ ನಷ್ಟವಾಗದು. ಸಾಮಾಜಿಕವಾಗಿ ಸಕಾಲಿಕ ಪ್ರತಿಭೆ ಯಶಸ್ಸನ್ನು ಗೌರವವನ್ನು ದ್ವಿಗುಣಗೊಳಿಸಲಿದೆ.

ಕುಂಭ: ವೃತ್ತಿರಂಗದಲ್ಲಿ ದೃಢ ನಿರ್ಧಾರಗಳು, ಆಜ್ಞಾಧೋರಣೆಯ ಪ್ರವೃತ್ತಿ ಅಗತ್ಯವೆನಿಸಿದರೂ ಹೊಂದಾಣಿಕೆಯ ಮನೋಭಾವವು ಬೇಕಾದೀತು. ನೀವು ನಿರೀಕ್ಷಿಸಿದ ಫ‌ಲವು ನಿಮಗೆ ಸಿಗಲಿದೆ. ನಿಧಾನವಾಗಿಯಾದರೂ ಸಿಗಲೇ ಬೇಕು.

ಮೀನ: ಕಾರ್ಯಕ್ಷೇತ್ರದಲ್ಲಿ ಚಟುವಟಿಕೆ ಸ್ಥಗಿತಗೊಂಡರೂ ಆದಾಯಕ್ಕೆ ಕೊರತೆ ಬಾರದು. ಸತಿ-ಪತಿಯರೊಳಗೆ ಅನ್ಯೋನ್ಯತೆಗೆ ಭಂಗ ತಂದೀತು. ವಿಳಂಬ, ಮಾನಸಿಕ ಒತ್ತಡ, ಆರೋಗ್ಯದಲ್ಲಿ ಏರುಪೇರು ತಂದೀತು.

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next