Advertisement

ಈ ರಾಶಿಯವರಿಂದು ನೆರೆಹೊರೆಯ ಜನ ಹಾಗೂ ಬಂಧು ಬಳಗದವರ ನಡುವೆ ಮಿಂಚಲಿದ್ದೀರಿ

07:13 AM May 17, 2021 | Team Udayavani |

17-5-2021

Advertisement

ಮೇಷ: ಐಷಾರಾಮದಿಂದ ದೈಹಿಕ ಹಾಗೂ ಮಾನಸಿಕ ಪೀಡೆಗಳಿಗೆ ಒಳಗಾಗದಂತೆ ಕಾಳಜಿ ವಹಿಸಿದರೆ ಉತ್ತಮ. ದುಂದುವೆಚ್ಚ ಮಾಡುವ ಸಂದರ್ಭದಲ್ಲಿ ಹೆಚ್ಚಿನ ಆಲೋಚನೆ ಮಾಡಬೇಕು. ಕಾಳಜಿ ವಹಿಸುವುದು.

ವೃಷಭ: ಯೋಗ್ಯ ವಯಸ್ಕರಿಗೆ ಕಂಕಣಬಲದ ಪ್ರಾಪ್ತಿಯಾಗಲಿದೆ. ಸಾಮಾಜಿಕವಾಗಿ ಇತರರ ಕಷ್ಟಗಳಿಗೆ ನೆರವಾಗುವ ಸಂದರ್ಭ ಒದಗಿ ಬಂದೀತು. ತಾತ್ಕಾಲಿಕ ಉದ್ಯೋಗದಿಂದ ತುಸು ಸಮಾಧಾನವಾಗುವ ಸಮಯ ನಿಮ್ಮದು.

ಮಿಥುನ: ವಿದ್ಯಾರ್ಥಿಗಳ ಕ್ರಿಯಾಶೀಲತೆ ಶುಭದಾಯಕ  ಫ‌ಲಿತಾಂಶ ನೀಡಲಿದೆ. ವ್ಯಾಪಾರ ವ್ಯವಹಾರದಲ್ಲಿ ಲಾಭದಾಯಕ ವಾತಾವರಣವಿರುತ್ತದೆ. ವೃತ್ತಿರಂಗದಲ್ಲಿ ನಿಮ್ಮ ಅದೃಷ್ಟಬಲ ಹಾಗೂ ದೈವಾನುಗ್ರಹವು ನಿಮ್ಮನ್ನು ಕಾಪಾಡಲಿದೆ. ಶುಭವಿದೆ.

ಕರ್ಕ: ನೆರೆಹೊರೆಯ ಜನ ಹಾಗೂ ಬಂಧು ಬಳಗದವರ ನಡುವೆ ಮಿಂಚಲಿದ್ದೀರಿ. ತೀರ್ಥಯಾತ್ರಾ ಅಪೇಕ್ಷೆಯನ್ನು ಸ್ವಲ್ಪ ಮುಂದೂಡಿದರೆ ಉತ್ತಮ. ತಾರುಣ್ಯದ ಮಂದಿಗೆ ಉತ್ತಮ  ಬಾಳ ಸಂಗಾತಿಯು ದೊರೆತು ಸಂತಸವಾದೀತು. ಮುನ್ನಡೆಯಿರಿ.

Advertisement

ಸಿಂಹ: ವಿದ್ಯಾರ್ಥಿಗಳ ಅಭ್ಯಾಸ ಬಲಕ್ಕೆ ನಿಶ್ಚಿತ ರೂಪದಲ್ಲಿ ಉತ್ತಮ ಫ‌ಲಿತಾಂಶ ದೊರಕಲಿದೆ. ರಾಹುವು ಆಗಾಗ ಮನೋವಿಕಾರಕ್ಕೆ ಕಾರಣನಾದಾನು. ಆರ್ಥಿಕವಾಗಿ ಗಳಿಕೆ ಉತ್ತಮವಿದ್ದರೂ ಉಳಿತಾಯದ ಬಗ್ಗೆ ಲೆಕ್ಕಾಚಾರವಿದ್ದರೆ ಒಳ್ಳೆಯದು.

ಕನ್ಯಾ: ಬಾಳ ಸಂಗಾತಿಯ ಹುಡುಕಾಟದ ಬಗ್ಗೆ ಆತಂಕ ತಂದೀತು. ವಾಣಿಜ್ಯೋದ್ಯಮಿಗಳಿಗೆ, ಶಿಕ್ಷಣ ತಜ್ಞರಿಗೆ, ಸಾಹಿತಿಗಳಿಗೆ, ವಿದ್ಯಾರ್ಥಿಗಳಿಗೆ ಉತ್ತಮ ಯಶಸ್ಸು ಪ್ರಾಪ್ತವಾಗಲಿದೆ. ಹಿರಿಯರ ಮಾತನ್ನು ಸಮಾಧಾನದಿಂದ ಆಲಿಸುವುದು.

ತುಲಾ: ಗೃಹದಲ್ಲಿ ಮಂಗಲ ಕಾರ್ಯದ ಚಿಂತನೆ ಕಾರ್ಯಗತವಾಗುವ ಸಮಯವಿದು. ಸಾಮಾಜಿಕ ಸ್ತರದಲ್ಲಿ ನಿಮ್ಮ ವರ್ಚಸ್ಸು ವೃದ್ಧಿಸಲಿದೆ. ಗೃಹಗಳ ಲಾಭಸ್ಥಾನದ ಫ‌ಲದಿಂದ ಆರ್ಥಿಕ ಅಭಿವೃದ್ಧಿಯು ಕಂಡುಬರುವುದು.

ವೃಶ್ಚಿಕ: ಆರ್ಥಿಕ ಸ್ಥಿತಿಯು ಉನ್ನತಿಗೇರಿದರೂ ಆಕಸ್ಮಿಕಖರ್ಚುವೆಚ್ಚಗಳು ಅಧಿಕವಾಗಲಿದೆ. ಹಿಡಿದ ಕೆಲಸವನ್ನು ನಾಳೆಗೆ ಎನ್ನದೆ ಇಂದೇ ಕಾರ್ಯಪ್ರವೃತ್ತರಾಗಿರಿ. ಉನ್ನತ ಫ‌ಲಿತಾಂಶವು ಪ್ರಾಪ್ತವಾಗಲಿದೆ. ದೈಹಿಕ ಆರೋಗ್ಯ ಉತ್ತಮ.

ಧನು: ಮಾನಸಿಕ ಅಸ್ಥಿರತೆ ಹಾಗೂ ಋಣಾತ್ಮಕ ಚಿಂತನೆಗಳು ಮಹಿಳೆಯರ ಮನಸ್ಸನ್ನು ಕೆಡಿಸಲಿದೆ. ಧನಾತ್ಮಕವಾಗಿ ಚಿಂತಿಸಿ ಮುನ್ನಡೆಯಿರಿ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರಿಶ್ರಮ, ಪ್ರತಿಭೆ, ಸಾರ್ಥಕವಾದರೂ ಹಿತಶತ್ರುಗಳು ಗಮನಿಸಲಿದ್ದಾರೆ.

ಮಕರ: ಯಾವುದೇ ಕೆಲಸ ಕಾರ್ಯಗಳು ಅಡೆತಡೆ ವಿಳಂಬ ಗತಿಯಲ್ಲಿ ನಡೆದು ಪೂರ್ಣವಾಗಲಿದೆ. ಬದಲಾವಣೆ ಜೀವನ ನಿಯಮ. ಬದಲಾಗುತ್ತಿರುವ ಬಾಳಿನೊಡನೆ ಹೊಂದಿಕೊಂಡು  ಹೋಗಬೇಕಾಗುತ್ತದೆ. ಶುಭ ವಾರ್ತಾ ಶ್ರವಣ.

ಕುಂಭ: ರಾಜಕೀಯ ಭವಿಷ್ಯವು ಮುಸುಕಾದೀತು. ಆಸ್ತಿ, ನಿವೇಶನ, ಫ್ಲ್ಯಾಟ್‌ ಖರೀದಿಗಾಗಿ ಧನವ್ಯಯ ಉಂಟಾದೀತು. ವಿದ್ಯಾರ್ಥಿಗಳಿಗೆ ಸತತ ಓದು ಉತ್ತಮ ಫ‌ಲಿತಾಂಶಕ್ಕೆಕಾರಣವಾಗಲಿದೆ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಪ್ರಗತಿ.

ಮೀನ: ಆರೋಗ್ಯ ಭಾಗ್ಯವನ್ನು ವರ್ಧಿಸಿಕೊಳ್ಳುವುದು  ನಿಮ್ಮ ಕೈಯಲ್ಲಿರುತ್ತದೆ. ಧರ್ಮಪತ್ನಿ ಯೊಂದಿಗೆ ಸಹಮತವಿರಲಿ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿಯೂ ಬದಲಾವಣೆಯ ಸೂಚನೆಗಳೂ ಗೋಚಾರಕ್ಕೆ ಬಂದಾವು.

 

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next