Advertisement

ಇಂದಿನ ಗ್ರಹಬಲ: ಆರ್ಥಿಕವಾಗಿ ಏರುಪೇರು ಒಮ್ಮೊಮ್ಮೆ ಆತಂಕ ಪರಿಸ್ಥಿತಿಯನ್ನು ತಂದೊಡ್ಡಲಿದೆ!

07:21 AM May 01, 2021 | Team Udayavani |

01-05-2021

Advertisement

ಮೇಷ: ಸಾಂಸಾರಿಕವಾಗಿ ದುಃಖ, ಮನಸ್ತಾಪ, ಮಾನಸಿಕ ವ್ಯಥೆ ಎಲ್ಲವೂ ಒಂದೊಂದಾಗಿ ನಿವಾರಣೆಯಾಗಲಿದೆ. ನಿಮ್ಮ ಖಚಿತ ನಿರ್ಧಾರಗಳು ಕಾರ್ಯಾನುಕೂಲಕ್ಕೆ ಪೂರಕವಾಗಲಿದೆ. ವ್ಯಾಪಾರ, ವ್ಯವಹಾರದಲ್ಲಿ ಏರುಪೇರು ಕಾಣಬಹುದು.

ವೃಷಭ: ಆರ್ಥಿಕವಾಗಿ ಸ್ವಲ್ಪ ಕಡಿಮೆ ವ್ಯವಹಾರಗಳು ಕಂಡುಬರುವುದು. ಆದರೂ ಅಧೈರ್ಯ ಪಡುವುದು ಬೇಡ. ನಿಮ್ಮ ಭರವಸೆ, ವಿಶ್ವಾಸಗಳು ನಿಮ್ಮನ್ನು ಕಾಪಾಡಲಿದೆ. ಅಧೈರ್ಯದ ಹೆಜ್ಜೆ ಬೇಡ. ಮುನ್ನಡೆಯುವುದು.

ಮಿಥುನ: ನಿರುದ್ಯೋಗಿಗಳಿಗೆ ತಪ್ಪಿದ ಅವಕಾಶಗಳು ಪುನಃ ಲಭಿಸಲಿದೆ. ದಾಂಪತ್ಯದಲ್ಲಿ ಸಿಹಿಯು ಹೆಚ್ಚಲಿದೆ. ಅಧಿಕ ತಿರುಗಾಟವು ಕಂಡುಬರುವುದು. ದೇಹಾಯಾಸವು ಕಂಡು ಬರುವುದು. ಕಾರ್ಯರಂಗದಲ್ಲಿ ಮುನ್ನಡೆ.

ಕರ್ಕ: ವಿದ್ಯಾಭ್ಯಾಸಿಗಳು ಹೆಚ್ಚಿನ ಪ್ರಗತಿ ಸಾಧಿಸಲಿದ್ದೀರಿ. ಅಧಿಕ ಪರಿಶ್ರಮವು ಬೇಕಾಗುವುದು. ನಿಮ್ಮ ಸಮಸ್ಯೆಗಳು ಒಂದೊಂದಾಗಿ ಪರಿಹಾರ ಕಾಣಲಿದೆ. ಪುತ್ರನ ಪ್ರಗತಿ ಕಂಡು ಸಂತಸವಾಗಲಿದೆ. ಶುಭಕಾರ್ಯಕ್ಕೆ ನಾಂದಿ ಹಾಡಿರಿ.

Advertisement

ಸಿಂಹ: ದೂರ ಸಂಚಾರದ ಕೆಲಸ ಕಾರ್ಯಗಳು ಸ್ವಲ್ಪ ಹಿನ್ನಡೆ ಕಂಡಾವು. ಭೂಸಂಬಂಧಿ ವ್ಯವಹಾರಗಳು ಲಾಭಕರವಾದಾವು. ವಿದ್ಯಾರ್ಥಿಗಳು ಉತ್ತಮ ಅಂಕ ಪಡೆದು ಕೃತಾರ್ಥರಾದಾರು. ಅದರೊಂದಿಗೆ ಉದ್ಯೋಗದ ಸಿಹಿ ವಾರ್ತೆ ಇದೆ.

ಕನ್ಯಾ: ವೃತ್ತಿರಂಗದಲ್ಲಿ ವ್ಯಕ್ತಿ ವಿಕಾಸ, ಸ್ವಜನ, ಬಂಧುವರ್ಗದವರ ಸಹಕಾರ ನಿಮ್ಮ ಮುನ್ನಡೆಗೆ ಕಾರಣವಾಗಲಿದೆ. ಹಿರಿಯರಿಂದ ಬಳುವಳಿಯಾಗಿ ಸ್ವಲ್ಪ ಹಣವೂ ಕೈ ಸೇರಲಿದೆ. ಮನೆಯಲ್ಲಿ ಪತ್ನಿ, ಮಕ್ಕಳಿಂದ ಸಂತಸವಿದೆ.

ತುಲಾ: ನ್ಯಾಯಾಲಯದ ಕೆಲಸ ಕಾರ್ಯಗಳಲ್ಲಿ ಹಾಗೂ ಇನ್ನಿತರ ಕಾರ್ಯಗಳಲ್ಲೂ ಸಹ ಅಧಿಕ ರೀತಿಯಲ್ಲಿ ಧನವ್ಯಯ ಉಂಟಾಗಲಿದೆ. ತುಲನೆ ಮಾಡಿ ಜೀವನ ನಡೆಸುವ ಅಗತ್ಯವಿದೆ. ಅದರಿಂದ ಸಮತೋಲನ ಸಾಧಿಸುವಿರಿ. ಶುಭವಿದೆ.

ವೃಶ್ಚಿಕ: ಆರ್ಥಿಕವಾಗಿ ಏರುಪೇರು ಒಮ್ಮೊಮ್ಮೆ ಆತಂಕ ಪರಿಸ್ಥಿತಿಯನ್ನು ತಂದೊಡ್ಡಲಿದೆ. ಬಂಧುಜನರಿಂದ ಕಿರುಕುಳ ಅನುಭವಿಸಿ ಬೇಸರವಾದೀತು. ಮೌನಕ್ಕಿಂತ ಮಾತು ಲೇಸು ಎಂಬಂತೆ ವರ್ತಿಸಿರಿ. ಒಳ್ಳೆಯದಾದೀತು.

ಧನು: ಕಾರ್ಯ ಒತ್ತಡದಿಂದ ಮನಸ್ಸಿಗೆ ಸಮಾಧಾನವಿರದು. ಮಿತ್ರರು ವಿಮುಖರಾದಾರು. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಅಡಚಣೆ ಕಂಡಾರು. ಮಿತ್ರರೊಂದಿಗೆ ಕಲಹ, ಮನಸ್ತಾಪಗಳು ಉಂಟಾಗಲಿದೆ. ಮುಂದುವರಿಯಿರಿ.

ಮಕರ: ವಾಹನ, ಸ್ಥಿರಾಸ್ತಿ ವ್ಯವಹಾರ ಮುಂತಾದವುಗಳಲ್ಲಿ ಪ್ರಗತಿ ಕಾಣುವಿರಿ. ಹಾಗೂ ಮುನ್ನಡೆಯಲು ಅವಕಾಶವನ್ನು ಗಳಿಸುವಿರಿ. ನೀವು ಚಿಂತಿಸಿದ ಕೆಲಸ ಕಾರ್ಯಗಳಲ್ಲಿ ಅಡೆತಡೆಗಳನ್ನು ಎದುರಿಸಬೇಕಾದೀತು.

ಕುಂಭ: ಮನೋವಿಕಾರತೆ, ಅಸ್ಥಿರತೆ, ಉದ್ವೇಗಕ್ಕೆ ಕಾರಣವಾಗಬಹುದು. ಚಿಂತಿತ ಕೆಲಸ ಕಾರ್ಯಗಳು ಅಡೆತಡೆಗಳಿಂದಲೇ ವಿಳಂಬಗತಿಯಲ್ಲಿ ನಡೆದೀತು. ದೈವಾನುಗ್ರಹದಿಂದ ವೃತ್ತಿರಂಗದಲ್ಲಿ ಮುಂಭಡ್ತಿ ಇದೆ.

ಮೀನ: ವೃತ್ತಿರಂಗದಲ್ಲಿ ಹಂತ ಹಂತವಾಗಿ ಅಭಿವೃದ್ಧಿ ಕಂಡುಬರುವುದು. ನೀವು ಉತ್ತಮ ಕೆಲಸ ಮಾಡಿದರೂ ನಿಮಗೆ ಅಪಮಾನ, ಅವಮಾನಗಳು ಎದುರಾಗಲಿದೆ. ನಿರೀಕ್ಷಿತ ಕಾರ್ಯಸಾಧನೆಯಿಂದ ಸಂತೃಪ್ತಿ ಕಾಣುವಿರಿ.

 

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next