Advertisement

ಇಂದಿನ ಗ್ರಹಬಲ: ಈ ರಾಶಿಯವರಿಗೆ ನಿರಂತರ ಆದಾಯವಿದ್ದರೂ ಋಣಭಾಧೆ ತಪ್ಪದು!

07:15 AM Apr 29, 2021 | Team Udayavani |

29-04-2021

Advertisement

ಮೇಷ: ನಿಮ್ಮ ಪ್ರಯತ್ನಬಲವಿದ್ದರೂ ಕಠಿಣ ಶ್ರಮದಿಂದಲೇ ಯಶಸ್ಸು ಸಿಗುವುದು ಎಂಬ ಅರಿವು ನಿಮಗಾದೀತು. ಆದಾಯದಲ್ಲಿ ಏರಿಳಿತ ಕಂಡುಬಂದರೂ ನಿಮ್ಮ ಕೈಗೆ ತೊಂದರೆಯಾಗದು. ವಿದ್ಯಾಭ್ಯಾಸದಲ್ಲ ಪ್ರಗತಿ ಕಂಡುಬಂದೀತು.

ವೃಷಭ: ಹೋಟೇಲ್‌ ಉದ್ದಿಮೆಯವರಿಗೆ ಕ್ಲೇಶವಿದೆ. ಕ್ರೀಡಾಪಟುಗಳಿಗೆ ಗೆಲುವಿನ ಲಕ್ಷಣವು ಕಂಡುಬಂದೀತು. ಸಾಂಸಾರಿಕವಾಗಿ ಹಿರಿಯರ ಆರೋಗ್ಯದ ಬಗ್ಗೆ ಜಾಗ್ರತೆ ಮಾಡಿರಿ. ಪ್ರವಾಸಾದಿಗಳಿಂದ ಲಾಭ ತಂದೀತು. ದಿನವೂ ಕಿರಿಕಿರಿ ಇರುತ್ತದೆ.

ಮಿಥುನ: ಸಾಂಸಾರಿಕವಾಗಿ ಆಪ್ತವರ್ಗದಲ್ಲಿ ಮನಸ್ತಾಪ ತಂದೀತು. ವರ್ತಕ ವರ್ಗಕ್ಕೆ ಸ್ವಲ್ಪ ಬಿಡುವು ದೊರಕಲಿದೆ. ಆಗಾಗ ಅನಾವಶ್ಯಕವಾಗಿ ಖರ್ಚುವೆಚ್ಚಗಳೇ ಅಧಿಕವಾಗಲಿದೆ. ಕಾರ್ಯವೈಫ‌ಲ್ಯದ ಅನುಭವವಾದರೂ ತಾಳ್ಮೆಯಿಂದ ಸಹಿಸಿರಿ.

ಕರ್ಕ: ಆರ್ಥಿಕ ಮುಗ್ಗಟ್ಟು ಕಂಡು ಬರುವುದು. ಆದರೂ ಅತಿಯಾದ ಜಾಗ್ರತೆ ಮಾಡಿದರೆ ಉತ್ತಮ. ಸ್ವತಂತ್ರ ವೃತ್ತಿಯವರಿಗೆ ನಿರಂತರ ಆದಾಯವಿದ್ದರೂ ಋಣಭಾಧೆ ತಪ್ಪದು. ಶೈಕ್ಷಣಿಕ ಕ್ಷೇತ್ರದವರಿಗೆ ಅಭಿವೃದ್ಧಿ ಕಂಡುಬರುವುದು.

Advertisement

ಸಿಂಹ: ವಿದ್ಯಾರ್ಥಿಗಳ ಅಭ್ಯಾಸ ಬಲಕ್ಕೆ ನಿರೀಕ್ಷಿತ ಯಶಸ್ಸು ಕಂಡುಬರುವುದು. ಮಂಗಲಕಾರ್ಯದ ಚಿಂತನೆಯು ಕಾರ್ಯಗತವಾಗಿ ಸಂಭ್ರಮದ ವಾತಾವರಣವಿರುತ್ತದೆ. ಪ್ರವಾಸಾದಿಗಳಿಂದ ಹರುಷವು ಇರುವುದು. ಶುಭವಿದೆ.

ಕನ್ಯಾ: ವೃತ್ತಿರಂಗದಲ್ಲಿ ಸುದಾರಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಕಂಡು ಬರುವುದು. ಅಗತ್ಯಕಾರ್ಯಗಳಿಗೆ ವಿಳಂಬ ತೋರಿಬರುವುದು. ಗೃಹ ಸುಖ ಶಾಂತಿ ತಕ್ಕಮಟ್ಟಿಗೆ ಕಂಡು ಬರುವುದು. ಆದಾಯ ಮಾರ್ಗಗಳೂ ಕಂಡುಬಂದಾವು.

ತುಲಾ: ವೃತ್ತಿ ನಿರತರಿಗೆ ಅನಿರೀಕ್ಷಿತ ರೀತಿಯಲ್ಲಿ, ಹೇರಳ ಸಂಪಾದನೆ ಇದ್ದೀತು. ಆಗಾಗ ಸರಕಾರಿ ಸಹಾಯದ ವಿನಾಯಿತಿಯನ್ನು ತೋರಿಸೀತು. ಕೃಷಿ, ಬೇಸಾಯ ಕಾರ್ಯಗಳಲ್ಲಿ ಚಟುವಟಿಕೆ ಕಂಡುಬರುವುದು. ಬಂದ ಅವಕಾಶಕ್ಕೆ ಹೊಂದಿಕೊಳ್ಳಿರಿ.

ವೃಶ್ಚಿಕ: ಸಾಂಸಾರಿಕವಾಗಿ ಪತ್ನಿ, ಮಕ್ಕಳ ಸಹಕಾರವಿದ್ದರೂ ಸದಾ ಉದ್ವೇಗಕ್ಕೆ ಒಳಗಾಗುವ ಪರಿಸ್ಥಿಯು ನಿಮ್ಮದಾಗಲಿದೆ. ವೃತ್ತಿರಂಗದಲ್ಲಿ ಸ್ಥಾನ- ಉದ್ಯೋಗ ಬದಲಾವಣೆಯ ಕನಸು ನನಸಾಗಲಿದೆ. ಖರ್ಚಿನ ಬಾಬ್ತುಗಳು ಹಲವು ಅನಾವಶ್ಯಕಗಳೇ.

ಧನು: ಗೃಹದಲ್ಲಿ ಬಂಧುಗಳ ಆಗಮನದಿಂದ ಹರುಷವಾದೀತು. ಹಿತಮಿತ್ರರ ಮಾತುಗಳಿಂದ ಸಮಾಧಾನವಾಗಲಿದೆ. ನಿರುದ್ಯೋಗಿಗಳಿಗೆ ಇದು ಉದ್ಯೋಗಾರಂಭದ ಭರವಸೆಯ ಕಾಲ. ಸದುಪಯೋಗಿಸಿಕೊಳ್ಳಿರಿ. ವಿವಾಹ ಪ್ರಸ್ತಾಪ ಬಂದೀತು.

ಮಕರ: ಉದ್ಯೋಗರಂಗದಲ್ಲಿ ನಿಮ್ಮ ದುಡಿಮೆ, ಸಲಹೆ ಸೂಚನೆಗಳಿಗೆ ಭಂಗ ಬಂದೀತು. ಯೋಗ್ಯ ವಯಸ್ಕರಿಗೆ ವೈವಾಹಿಕ ಭಾಗ್ಯ ಕಂಡು ಬಂದೀತು. ದಾಂಪತ್ಯ ಜೀವನದಲ್ಲಿ ಕೆಲವೊಂದು ಬದಲಾವಣೆಗಳಿಗೆ ಹೊಂದಿಕೊಳ್ಳಬೇಕಾದೀತು.

ಕುಂಭ: ಆರ್ಥಿಕವಾಗಿ ಹಣಕಾಸಿನ ಪರಿಸ್ಥಿತಿಯಲ್ಲಿ ಏರುಪೇರು ಕಂಡುಬಂದೀತು. ಅನಿರೀಕ್ಷಿತ ಕಾರ್ಯಸಾಧನೆ ನಿಮಗೇ ಅಚ್ಚರಿ ತಂದೀತು. ದೈಹಿಕವಾಗಿ, ಮಾನಸಿಕವಾಗಿ ಆಗಾಗ ವ್ಯಾಕುಲ ಹಾಗೂ ಉದ್ವೇಗದಿಂದ ಮನಸ್ಸು ಸಮಾಧಾನಗೊಂಡೀತು.

ಮೀನ: ವಿದ್ಯಾರ್ಥಿಗಳ ಮನೋಕಾಮನೆಗಳು ಪೂರ್ಣಗೊಳ್ಳಲಿದೆ. ಆರ್ಥಿಕವಾಗಿ ಎಷ್ಟು ಖರ್ಚುಗಳಿದ್ದರೂ ಆದಾಯವು ಅಷ್ಟೇ ಕಂಡು ಬರುವುದು. ಹಿತಶತ್ರುಗಳ ಸಮಯ ಸಾಧಕತನ ಆಗಾಗ ಘಾಸಿಗೊಳ್ಳಲಿದೆ. ತಾಳ್ಮೆ, ಸಹನೆ ಇರಲಿ.

 

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next