Advertisement

ಇಂದಿನ ಗ್ರಹಬಲ: ಈ ರಾಶಿಯವರಿಗಿಂದು ಆಕಸ್ಮಿಕವಾಗಿ ಧನ-ಸಂಪತ್ತು ಕೈಗೂಡಲಿದೆ

07:45 AM Apr 22, 2021 | Team Udayavani |

22-04-2021

Advertisement

ಮೇಷ: ಆರ್ಥಿಕವಾಗಿ ಭಾಗ್ಯ ಸಂಪತ್ತು ಪ್ರಕಟವಾಗುತ್ತದೆ. ಸಾಂಸಾರಿಕವಾಗಿ ವಿವಾಹಾದಿ ಶುಭಮಂಗಲ ಕಾರ್ಯ ಗಳ ಚಿಂತನೆಗಳು ಸದ್ಯದಲ್ಲೇ ಅನುಕೂಲಕರವಾಗಲಿದೆ. ಕಟ್ಟಡ ಕಾರ್ಯದವರಿಗೆ ಲಾಭಾಂಶ ಹೆಚ್ಚಲಿದೆ.

ವೃಷಭ: ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರ ಪ್ರಭಾವವು ಹೆಚ್ಚಲಿದೆ. ನಿಮ್ಮ ವಿರೋಧಿಗಳಿಗೆ ಇದು ಅಪಜಯದ ಸಮಯ. ಆಕಸ್ಮಿಕವಾಗಿ ಧನ-ಸಂಪತ್ತು ಕೈಗೂಡಲಿದೆ. ಆರೋಗ್ಯದಲ್ಲಿ ಮಾತ್ರ ಉದಾಸೀನತೆ ಸಲ್ಲದು.

ಮಿಥುನ: ನಿಮ್ಮ ನಡೆ ನುಡಿ ಒಂದೇ ತರವಿರಲಿ. ಧನಾಗಮನ ಸುಗಮವಿದ್ದರೂ ಯಾವುದೇ ರೀತಿಯಲ್ಲಿ ಖರ್ಚಿಗೆ ಮಾರ್ಗಗಳು ಗೋಚರಿಸಲಿದೆ. ಸಾಂಸಾರಿಕವಾಗಿ ಪಾಪಪ್ರಜ್ಞೆ ಆಗಾಗ ಕಾಡಲಿದೆ. ಅತಿಥಿಗಳ ಆಗಮನವಿದೆ.

ಕರ್ಕ: ಸರಕಾರೀ ಕೆಲಸಗಳು ಅನಾವಶ್ಯಕವಾಗಿ ಧನವ್ಯಯಕ್ಕೆ ಕಾರಣವಾದೀತು. ಬಂದ ದುಃಖವನ್ನು ಧೈರ್ಯದಿಂದ ಎದುರಿಸುವುದು. ಹಿತೈಷಿಗಳ ಸೂಕ್ತ ಸಲಹೆಗಳನ್ನು ಸ್ವೀಕರಿಸಿ ಮುನ್ನಡೆವ ಅವಶ್ಯಕತೆ ಕಂಡುಬರಲಿದೆ.

Advertisement

ಸಿಂಹ: ವೃತ್ತಿರಂಗದಲ್ಲಿ ಅಧಿಕಾರಿ ವರ್ಗದವರ ಅವಕೃಪೆ ಕಂಡುಬರುತ್ತದೆ. ವ್ಯಾಪಾರ, ವ್ಯವಹಾರಗಳು ತುಸು ನೆಮ್ಮದಿ ತಂದರೂ ವಂಚಕರ ಕುತಂತ್ರಕ್ಕೆ ಆಸ್ಪದವಿರುತ್ತದೆ. ವಿದ್ಯಾರ್ಥಿಗಳಿಗೆ ಅಭಿವೃದ್ಧಿಯು ತೋರಿಬರುವುದು.

ಕನ್ಯಾ: ಸಾರ್ವಜನಿಕ ಕೆಲಸಕಾರ್ಯಗಳು ನಿಮಗೆ ಗೌರವವನ್ನು ತಂದುಕೊಡುತ್ತವೆ. ವೈಯಕ್ತಿಕ ಸಮಸ್ಯೆಗಳನ್ನು ನೀವಾಗಿಯೇ ಬಗೆಹರಿಸಿಕೊಳ್ಳುವುದು ಉತ್ತಮ. ಅವಿವಾಹಿತರಿಗೆ ಕಂಕಣಬಲದ ಯೋಗವು ಒದಗಿ ಬರುವುದು.

ತುಲಾ: ಕಾರ್ಯಕ್ಷೇತ್ರದಲ್ಲಿ ಶತ್ರುಗಳು ನಿವಾರಣೆಯಾದರೂ ಭಯಭೀತಿ ತೊಲಗದು. ಆಗಾಗ ಧನಚಿಂತೆಯು ತೋರಿಬಂದು ಆತಂಕಕ್ಕೆ ಕಾರಣವಾಗಲಿದೆ. ನೌಕರ ವರ್ಗಕ್ಕೆ ಮುಂಭಡ್ತಿಯ ಯೋಗವಿದೆ. ಲಾಭಾಂಶವು ಹೆಚ್ಚಲಿದೆ.

ವೃಶ್ಚಿಕ: ಕೌಟುಂಬಿಕವಾಗಿ ಸಹೋದರರ ಸಹಕಾರಕ್ಕೆ ಸಂಚು ಕಂಡುಬರುವುದು. ಶತ್ರುಬಾಧೆ ಕಂಡುಬರಲಿದೆ. ಕಾರ್ಯರಂಗದಲ್ಲಿ ಎಚ್ಚರಿಕೆಯಿಂದ ಮುಂದುವರಿದಲ್ಲಿ ಯಶಸ್ಸು ನಿಮ್ಮದಾಗಲಿದೆ. ಅವಸರ ಮಾಡಬೇಡಿರಿ.

ಧನು: ಕೃಷಿ, ತರಕಾರೀ ಧಾನ್ಯ ಮಾರಾಟ ಮುಂತಾದ ವೃತ್ತಿಯಲ್ಲಿ ಸಾಕಷ್ಟು ಪ್ರಗತಿ ಇರುತ್ತದೆ. ವಿದ್ಯಾರ್ಥಿಗಳು ಪ್ರಯತ್ನಬಲವನ್ನು ಹೆಚ್ಚಿಸಬೇಕಾಗುತ್ತದೆ. ಹಿರಿಯ ವರ್ಗದವರಿಗೆ ಪುಣ್ಯಸ್ಥಳಗಳ ಸಂದರ್ಶನ ಯೋಗವಿರುತ್ತದೆ.

ಮಕರ: ಮಹಿಳೆಯರು ಅನಾವಶ್ಯಕವಾಗಿ ಋಣಾತ್ಮಕ ಚಿಂತೆಗೆ ಒಳಗಾದಾರು. ಅಸೂಯೆ ಪಡುವ ಜನರಿಂದಾಗಿ ಅನಾವಶ್ಯಕ ಅಪವಾದ ಭೀತಿ ಕಂಡುಬಂದೀತು. ಆಗಾಗ ಗೃಹ ತಾಪತ್ರಯಗಳು ಹೆಚ್ಚಾಗಿ ತಲೆಕೆಡಲಿದೆ.

ಕುಂಭ:ಉದ್ಯೋಗದಲ್ಲಿ ಕಿರಿಕಿರಿಗಳು, ಅಡೆತಡೆ, ಆತಂಕಗಳು ಎದುರಾದೀತು. ಋಣಭಾಧೆ ನಿವಾರಣೆಯಿಂದ ಸಮಾಧಾನವಾಗಲಿದೆ. ಕೌಟುಂಬಿಕವಾಗಿ ವಾದ ವಿವಾದಗಳು ಸುತ್ತಿಕೊಳ್ಳದಂತೆ ಜಾಗ್ರತೆ ವಹಿಸಿರಿ.

ಮೀನ: ಒಡವೆ, ವಸ್ತುಗಳ ಖರೀದಿಯಿಂದ ಪತ್ನಿಗೆ ಸಂಭ್ರಮವಾದೀತು. ಆಗಾಗ ಉಷ್ಣ ಪ್ರಕೋಪದಿಂದ ಶರೀರದಲ್ಲಿ ಬಾಧೆ ಕಾಣಿಸಲಿದೆ. ಅವಿವಾಹಿತರಿಗೆ ವೈವಾಹಿಕ ಭಾಗ್ಯ ಕಂಡುಬಂದೀತು. ಮುಂದುವರಿಯಿರಿ.

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next