Advertisement

ಇಂದಿನ ಗ್ರಹಬಲ: ಮನೆಯಲ್ಲಿ ಶುಭಮಂಗಲ ಕಾರ್ಯದ ಚಿಂತನೆ ಕಾರ್ಯಗತವಾಗಲಿದೆ

07:46 AM Apr 04, 2021 | Team Udayavani |

04-04-2021

Advertisement

ಮೇಷ: ಆಗಾಗ ಇಷ್ಟಮಿತ್ರರ ಆಗಮನದಿಂದ ಹರುಷ ತರಲಿದೆ. ಮುಖ್ಯವಾಗಿ ಉದರ ಸಂಬಂಧಿತ ಸಮಸ್ಯೆ ಗಳು, ಸಿಟ್ಟಿನ ನಿರ್ಣಯದಿಂದ ಅನಾವಶ್ಯಕ ತೊಂದರೆಗಳನ್ನು ಎದುರಿಸುವಂತಾದೀತು. ಉದ್ವೇಗ ಕಡಿಮೆ ಮಾಡಿರಿ.

ವೃಷಭ: ಆರ್ಥಿಕವಾಗಿ ಅಧಿಕರೂಪದಲ್ಲಿ ಖರ್ಚುವೆಚ್ಚಗಳು ತೋರಿಬರುವುದರಿಂದ ಅದಷ್ಟು ಜಾಗ್ರತೆ ಮಾಡಬೇಕಾಗುತ್ತದೆ. ಆದರೂ ಈ ಮಧ್ಯೆ ಆಕರ್ಷಕ ದುಡಿಮೆಯಿಂದ ಆದಾಯವು ನಿಮ್ಮ ಪ್ರಯತ್ನಬಲಕ್ಕೆ ತಕ್ಕ ಸಲ್ಲಲಿದೆ.

ಮಿಥುನ: ಉದ್ಯೋಗಿಗಳಿಗೆ ಅನಿರೀಕ್ಷಿತ ವರ್ಗಾವಣೆಯ ಯೋಗವಿದೆ. ಸಂಸಾರದ ಖರ್ಚಿನ ನಿಭಾವಣೆ ಆತಂಕ ತರಲಿದೆ. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗಾಗಿ ದೂರ ಪ್ರಯಾಣವು ತೋರಿ ಬರಲಿದೆ. ಅಜೀರ್ಣದ ಉಪದ್ರವ ಕಾಡಲಿದೆ.

ಕರ್ಕ: ವ್ಯಾಪಾರ, ವ್ಯವಹಾರದಲ್ಲಿ ಚೇತರಿಕೆ ಇದ್ದರೂಶತ್ರುಗಳ ಸ್ಪರ್ಧಾತ್ಮಕ ರೀತಿಯಿಂದ ಆತಂಕಕ್ಕೆ ಕಾರಣವಾಗಲಿದೆ. ಮಕ್ಕಳ ಮೋಜು ಮಾನಹಾನಿಗೆ ಕಾರಣವಾದೀತು. ಪ್ರೀತಿಯ ಮಡದಿಯ ಸಲಹೆಗಳಿಗೆ ಸ್ಪಂದಿಸಿದರೆ ಉತ್ತಮ.

Advertisement

ಸಿಂಹ: ವೃತ್ತಿರಂಗದಲ್ಲಿ ಮೇಲಾಧಿಕಾರಿಗಳಿಗೆಜವಾಬ್ದಾರಿಯು ಹೆಚ್ಚಲಿದ್ದು ದೇಹಾಯಾಸಕ್ಕೆ ಕಾರಣ ವಾಗಲಿದೆ. ಉದ್ದಿಮೆದಾರರಿಗೆ ನೌಕರ ವರ್ಗದ ಸತ್ಯಾಗ್ರಹದಿಂದ ಕ್ಲೇಶ ಕಂಡುಬಂದೀತು. ರಾಜಕೀಯದವರಿಗೆ ತಲೆಬಿಸಿ ಕಂಡು ಬರಲಿದೆ.

ಕನ್ಯಾ: ಹಂತಹಂತವಾಗಿ ಮುನ್ನಡೆ ಕಂಡುಬಂದು ಸಮಾಧಾನವಾಗಲಿದೆ. ಅವಿವಾಹಿತರಿಗೆ ವಿವಾಹ ಭಾಗ್ಯ. ದಾಂಪತ್ಯದಲ್ಲಿ ಸಂತಾನಫ‌ಲದ ಸೂಚನೆ ಕಂಡು ಬಂದು ಸಂತಸವಾಗಲಿದೆ. ನಿರುದ್ಯೋಗಿಗಳಿಗೆ ಉದ್ಯೋಗ ಲಾಭ.

ತುಲಾ: ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಯೋಗ ಕಂಡು ಬರಲಿದೆ. ಎಲ್ಲಕ್ಕೂ ನಿಮ್ಮ ಪ್ರಯತ್ನ ಬಲ, ಕ್ರಿಯಾಶೀಲತೆಯು ಪೂರಕವಾಗಲಿದೆ. ನಿಮ್ಮ ವೈಯಕ್ತಿಕ ಗೌರವ, ಘನತೆ ಕಾಪಾಡಿಕೊಂಡು ಬನ್ನಿರಿ. ಶುಭ ಫ‌ಲವಿದೆ.

ವೃಶ್ಚಿಕ: ಎಲ್ಲಾ ರೀತಿಯ ಕ್ಷೇತ್ರದಲ್ಲೂ ಅಭಿವೃದ್ಧಿ ಕಂಡು ಬರಲಿದೆ. ಸಾಮಾಜಿಕವಾಗಿ ಪ್ರಶಂಸೆ ಪಡೆಯಲಿದ್ದೀರಿ. ಆರೋಗ್ಯ ಭಾಗ್ಯವು ಸುಧಾರಿಸುತ್ತಾ ಹೋದರೂ ಉದಾಸೀನ ಮಾಡದಿರಿ. ಶಾಂತಿ, ಸಮಾಧಾನ, ಪ್ರಯತ್ನ ಅಗತ್ಯವಿದೆ.

ಧನು: ಸಂಸಾರದಲ್ಲಿ ಆಗಾಗ ಏರುಪೇರು ತೋರಿ ಬಂದೀತು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ವರು ಹಂತ ಹಂತವಾಗಿ ಗುಣಮುಖರಾಗುತ್ತಾರೆ. ಕೋರ್ಟು ಕೇಸುಗಳಿಂದ ಮುಕ್ತರಾಗುವ ಸಾಧ್ಯತೆ ಇದೆ. ಯಾರನ್ನೂ ನಂಬಿ ಮೋಸ ಹೋಗದಿರಿ.

ಮಕರ: ಇತರರ ಮಾತು ಕೇಳಿ ನಿರ್ಧಾರ ಕೈಗೊಳ್ಳದಿರಿ. ವಿದೇಶಯಾನದ ಭಾಗ್ಯ ಆಗಾಗ ಒದಗಿ ಬಂದೀತು. ಮನೆಯಲ್ಲಿ ಶುಭಮಂಗಲ ಕಾರ್ಯದ ಚಿಂತನೆ ಕಾರ್ಯಗತವಾಗಲಿದೆ. ಹಿತಶತ್ರುಗಳಿಂದ ದೂರವಿದ್ದರೆ ಒಳ್ಳೆಯದು.

ಕುಂಭ: ಜ್ಞಾನದಾಹಿಗಳಿಗೆ ಇದು ಉತ್ತಮ ಕಾಲ. ವಿದ್ಯಾರ್ಥಿಗಳು ತಮ್ಮ ಅಭ್ಯಾಸದಲ್ಲಿ ಕೀರ್ತಿ ಪಡೆಯಲಿ ದ್ದಾರೆ. ಸರಕಾರೀ ಉದ್ಯೋಗಿಗಳಿಗೆ ಯೋಗ್ಯ ಪುರಸ್ಕಾರ ಸಿಗಲಿದೆ. ಅಧಿಕಾರಿ ವರ್ಗಕ್ಕೆ ಮುಂಭಡ್ತಿ ಯೋಗವು ಕಂಡುಬರುವುದು.

ಮೀನ: ಶ್ರಮವು ಹೆಚ್ಚಿದ್ದರೂ ದುಡಿಮೆ ಲಾಭದಾಯಕವಾಗಲಿದೆ. ಎಲ್ಲಾ ವಿಚಾರದಲ್ಲಿ ಜಾಗ್ರತೆ ವಹಿಸಬೇಕಾಗುವುದು. ನೀಚ ಜನರಿಂದ ದೂರವಿರಿ. ಅವರಿಂದ ಕೆಟ್ಟ ಮಾತು ಕೇಳಬೇಕಾದೀತು. ದೂರ ಸಂಚಾರ ಆಯಾಸ ತರಲಿದೆ.

ಎನ್‌.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next