Advertisement

ಈ ರಾಶಿಯವರಿಗಿಂದು ಗೃಹದಲ್ಲಿ ಶುಭಮಂಗಲ ಕಾರ್ಯಗಳ ಚಿಂತನೆಯು ನಡೆಯಲಿದೆ

07:45 AM Apr 01, 2021 | Team Udayavani |

1-4-2021

Advertisement

ಮೇಷ: ವೃತ್ತಿರಂಗದಲ್ಲಿ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವು ಅನುಭವಕ್ಕೆ ಬರುತ್ತದೆ. ಸಾಂಸಾರಿಕವಾಗಿ ಸ್ವಯಂ ಕಾಲೋಚಿತ ವರ್ತನೆ ಸಮಸ್ಯೆ ಜಂಜಾಟದಿಂದ ಪಾರು ಮಾಡಲಿದೆ. ಆದಾಯವು ಅಧಿಕ ರೂಪದಲ್ಲಿದ್ದರೂ ಖರ್ಚುವೆಚ್ಚ ಬಿಸಿ ತಟ್ಟಿತು.

ವೃಷಭ: ನೂತನ ಗೃಹ ನಿರ್ಮಾಣ, ವಾಹನಾದಿಗಳ ಖರೀದಿಯು ಕಂಡುಬಂದೀತು ರಾಜಕೀಯ ರಂಗ ದಲ್ಲಿ ರಕ್ಷಣಾ ಪಡೆಗಳಲ್ಲಿ ಚೈತನ್ಯ ವೃದ್ಧಿಯಾಗಿ ಶ್ಲಾಘನೆ ಕೇಳಿ ಬಂದೀತು. ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯಲ್ಲಿ ಅವಕಾಶ ಒದಗಲಿದೆ.

ಮಿಥುನ: ಗೃಹದಲ್ಲಿ ಶುಭಮಂಗಲ ಕಾರ್ಯಗಳ ಚಿಂತನೆಯು ನಡೆಯಲಿದೆ. ಆದಾಯವು ಎಷ್ಟು ಬಂದರೂ ಸಾಲದೆಂಬ ಆರ್ಥಿಕ ಸ್ಥಿತಿಯಲ್ಲಿ ಪರಿಣಾಮ ಬೀರಲಿದೆ. ಕಾರ್ಯಾರ್ಥ ಅಲೆದಾಟಗಳು ಹೆಚ್ಚಲಿವೆ. ದೇಹಾರೋಗ್ಯವು ಏರುಪೇರಾದೀತು.

ಕರ್ಕ:ಧಾರ್ಮಿಕ ಕೃತ್ಯಗಳಲ್ಲಿ ವೈರಾಗ್ಯ ಭಾವವು ಬೆಳೆಯಲಿದೆ. ಮಕ್ಕಳ ವೈವಾಹಿಕ ಭಾಗ್ಯಕ್ಕಾಗಿ ಸುತ್ತಾಟವು ಕಂಡುಬಂದೀತು. ಸಾಂಸಾರಿಕ ಸುಖವು ಉತ್ತಮ ವಿದ್ದರೂ ಆಗಾಗ ಅನಾವಶ್ಯಕ ಭಿನ್ನಾಭಿಪ್ರಾಯದಿಂದ ಕಲಹವು ಕಂಡುಬಂದು ಬೇಸರವಾದೀತು.

Advertisement

ಸಿಂಹ: ರಾಜಕೀಯದ ಮಂದಿಗೆ ದ್ವಂದ್ವ ನೀತಿಯಿಂದ ಸಮಸ್ಯಾತ್ಮಕ ಪರಿಸ್ಥಿತಿಯು ಉಂಟಾದೀತು. ವಿದ್ಯಾರ್ಥಿ ಗಳಿಗಂತೂ ಮಾನಸಿಕ ಅಸ್ಥಿರತೆಯು ಕಾಡಲಿದೆ. ಉದ್ವೇಗ, ಕೋಪ, ಹಠ ಹೆಚ್ಚಾದೀತು. ಅದನ್ನು ಕಡಿಮೆ ಮಾಡಿರಿ. ಉತ್ತಮವಾಗಲಿದೆ.

ಕನ್ಯಾ: ಹಂತ ಹಂತವಾಗಿ ಅಭಿವೃದ್ಧಿಯ ಕಾಲವಿದು. ಸದುಪಯೋಗಿಸಿಕೊಳ್ಳಿರಿ. ಕೃಷಿ, ಕೈಗಾರಿಕೆಗಳಿಗೆ ನಾನಾ ರೀತಿಯಲ್ಲಿ ಧನ ವಿನಿಯೋಗವಾಗಲಿದೆ. ವ್ಯಾಪಾರ, ವ್ಯವಹಾರದಲ್ಲಿ ಲಾಭವಿದೆ. ಸಂಪಾದನೆಯನ್ನು ವರ್ಧಿಸಿಕೊಂಡರೆ ಕಾರ್ಯಾನುಕೂಲ.

ತುಲಾ: ಆರೋಗ್ಯಭಾಗ್ಯವನ್ನು ಕಾಪಾಡಿಕೊಳ್ಳುವ ಹೊಣೆ ನಿಮ್ಮದಾಗಲಿದೆ. ಕಾಳಜಿ ವಹಿಸಿರಿ. ವೃತ್ತಿನಿರತರಿಗೆ ಆಕಸ್ಮಿಕವಾಗಿ ಮುಂಭಡ್ತಿಯ ಯೋಗವಿದೆ. ಹಾಗೂ ಅವಿವಾಹಿತರಿಗೆ ಪ್ರಯತ್ನಪಟ್ಟಲ್ಲಿ ವಿವಾಹ ಕಾರ್ಯವು ಸಿದ್ಧಿಸಲಿದೆ. ಶುಭವಿದೆ.

ವೃಶ್ಚಿಕ: ಆರ್ಥಿಕವಾಗಿ ಧನದಾಯವು ಉತ್ತಮವಿದ್ದು ವ್ಯಾಪಾರ, ವ್ಯವಹಾರಗಳು ಅಭಿವೃದ್ಧಿ ಪಥದಲ್ಲಿರುತ್ತದೆ. ಸಾಂಸಾರಿಕವಾಗಿ ಆರೋಗ್ಯಭಾಗ್ಯಕ್ಕೆ ತೊಂದರೆ ಕಾಣಿಸಲಿದೆ. ವೃತ್ತಿರಂಗದಲ್ಲಿ ಎಲ್ಲವನ್ನೂ ಸಮಾಧಾನಚಿತ್ತದಿಂದ ಅನುಭವಿಸಿ ಮುನ್ನಡೆಯಿರಿ.

ಧನು: ರಾಜಕೀಯದಲ್ಲಿ ಅನೇಕ ರೀತಿಯ ಕಿತ್ತಾಟಗಳ ಪ್ರದರ್ಶನವಿರುತ್ತದೆ. ಪ್ರಯಾಣಾದಿಗಳು ಕಡಿಮೆ ಇರಲಿ. ಶಿಕ್ಷಣರಂಗದಲ್ಲಿ ಸಣ್ಣಪುಟ್ಟ ಬದಲಾವಣೆ ಇದ್ದರೂ ಶೈಕ್ಷಣಿಕ ವರ್ಗದವರ ಸ್ಥಾನಮಾನಕ್ಕೆ ಕುಂದಿಲ್ಲ . ಜಾಗ್ರತೆಯಾಗಿ ಇರುವುದು.

ಮಕರ: ವ್ಯಾಪಾರ, ವ್ಯವಹಾರಗಳು ವಾರಾಂತ್ಯದಲ್ಲಿ ಹೆಚ್ಚಿನ ಹೂಡಿಕೆ, ವಿಸ್ತರಣೆ ಮಾಡಿದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ಅನುಕೂಲವಾಗಲಿದೆ. ನ್ಯಾಯಾಲಯದ ವಿಚಾರದಲ್ಲಿ ಮಧ್ಯಸ್ಥಿಕೆ ರಾಜೀ ಮನೋಭಾವಗಳು ಕಾರ್ಯಾನುಕೂಲಕ್ಕೆ ಸಾಧಕವಾಗಿ ಸಾರ್ಥಕವಾದೀತು.

ಕುಂಭ: ಕ್ರೀಡಾ ಚಟುವಟಿಕೆಗಳು ಕ್ರೀಡಾಕಾರರಿಗೆ ಸಾಕಷ್ಟು ಪ್ರೋತ್ಸಾಹ ನೀಡಲಿದೆ. ಅವಿವಾಹಿತರಿಗೂ ವೈವಾಹಿಕ ಸಂಬಂಧಗಳು ಕಂಕಣಬಲದ ಭಾಗ್ಯವನ್ನು ಒದಗಿಸಿ ಕೊಡಲಿದೆ. ರಾಜಕೀಯದಲ್ಲಿ ಶತ್ರು ಪರಾಜಯದ ಸೂಚನೆ ಕಾಣಿಸಿ ಸಂತಸವಾಗಲಿದೆ.

ಮೀನ: ಪುಣ್ಯಕಾರ್ಯ, ಶುಭಮಂಗಲ ಕಾರ್ಯಗಳು ಮನೆಯಲ್ಲಿ ಸದಾ ನಡೆಯಲಿವೆ. ಹಲವು ಕಾರ್ಯಗಳಲ್ಲಿ ತೊಡಗಿಸುವುದರಿಂದ ವ್ಯವಧಾನವೇ ದೊರಕದು. ಉದ್ಯೋಗ ಕ್ಷೇತ್ರದಲ್ಲಿ ಅವಿರತ ದುಡಿಮೆಯಿಂದ ಬೇಸತ್ತು ಹೋದಿರಾ ಜೋಕೆ.

ಎನ್.ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next